ನಿಯಮ ಉಲ್ಲಂಘನೆ: ಇಬ್ಬರು ಗುತ್ತಿಗೆದಾರರಿಗೆ 1 ಕೋಟಿ ದಂಡ
ಬೆಂಗಳೂರು, ಜ.31: ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಸರಬರಾಜು ನಿಯಮಗಳನ್ನು ಪಾಲಿಸದ ಆಹಾರ ಸರಬರಾಜು ಮಾಡಿದ್ದ ಇಬ್ಬರು ಗುತ್ತಿಗೆದಾರರಿಗೆ ಬಿಬಿಎಂಪಿ 1.32 ಕೋಟಿ ದಂಡ ವಿಧಿಸಿದೆ.
ಹಿಂದಿನ ಸರಕಾರದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಆಹಾರ ವಿತರಣೆ ಮಾಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲಾಗಿದೆ. ಆದರೆ, ಆಹಾರದ ಪ್ರಮಾಣ, ಆಹಾರದ ಗುಣಮಟ್ಟ ಹಾಗೂ ನಿಗದಿತ ಸಮಯಕ್ಕೆ ಸರಿಯಾಗಿ ಕ್ಯಾಂಟೀನ್ಗಳಿಗೆ ಆಹಾರ ಸರಬರಾಜು ಮಾಡದೆ ನಿಯಮಗಳನ್ನು ಉಲ್ಲಂಘಿಸಿರುವ ಇಬ್ಬರು ಗುತ್ತಿಗೆದಾರರಿಗೆ ದಂಡ ವಿಧಿಸಿದ್ದು, ಗುತ್ತಿಗೆದಾರರ ಹೆಸರನ್ನು ಬಹಿರಂಗ ಮಾಡಿಲ್ಲ.
ಇಂದಿರಾ ಕ್ಯಾಂಟೀನ್ ಆರಂಭದ ದಿನದಿಂದ 2018ರ ಡಿಸೆಂಬರ್ವರೆಗೆ ಕ್ಯಾಂಟೀನ್ಗೆ ಆಹಾರ ಸರಬರಾಜು ಮಾಡುವ ನಿಯಮಗಳು ಪಾಲನೆಯಾಗುವ ಕುರಿತು ಗಮನಿಸಲು ಮಾಜಿ ಸೈನಿಕರನ್ನು ನಿಯೋಜನೆ ಮಾಡಲಾಗಿತ್ತು. ಇವರುಗಳು ನಗರದ 198 ವಾರ್ಡ್ಗಳಲ್ಲಿಯೂ ದಿನಪೂರ್ತಿ ತೀವ್ರ ನಿಗಾ ಇರಿಸಿದ್ದರು. ಅನಂತರ ವರ್ಷದ ವರದಿಯನ್ನು ಇದೀಗ ಬಿಬಿಎಂಪಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಇಬ್ಬರು ಆಹಾರ ಸರಬರಾಜು ಮಾಡುವ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಆಹಾರ ಒದಗಿಸುತ್ತಿಲ್ಲ ಎಂಬ ಅಂಶವನ್ನು ಬೆಳಕು ಚೆಲ್ಲಿದ್ದರು. ಟೆಂಡರ್ ಪಡೆಯುವ ವೇಳೆ ಪಾಲಿಕೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಇವರು ಉಲ್ಲಂಘನೆ ಮಾಡಿದ್ದರು. ಅಲ್ಲದೆ, ಪಾಲಿಕೆಯು ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿ ಇಬ್ಬರು ಗುತ್ತಿಗೆದಾರರಿಗೆ 1,32,38,450 ಕೋಟಿ ರೂ. ದಂಡ ವಿಧಿಸಲಾಗಿದೆ.