Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 5 ಲ.ರೂ.ವರೆಗಿನ ಆದಾಯ ‘ತೆರಿಗೆ ಮುಕ್ತ’...

5 ಲ.ರೂ.ವರೆಗಿನ ಆದಾಯ ‘ತೆರಿಗೆ ಮುಕ್ತ’ ಎನ್ನುವುದು ಬಜೆಟ್ ಘೋಷಣೆಯ ಅರ್ಥವೇ?

ಇಲ್ಲಿದೆ ವಿವರ

ವಾರ್ತಾಭಾರತಿವಾರ್ತಾಭಾರತಿ1 Feb 2019 11:06 PM IST
share
5 ಲ.ರೂ.ವರೆಗಿನ ಆದಾಯ ‘ತೆರಿಗೆ ಮುಕ್ತ’ ಎನ್ನುವುದು ಬಜೆಟ್ ಘೋಷಣೆಯ ಅರ್ಥವೇ?

ಹೊಸದಿಲ್ಲಿ,ಫೆ.1: ಶುಕ್ರವಾರ ಸಂಸತ್ತಿನಲ್ಲಿ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಿದ ಕೇಂದ್ರ ವಿತ್ತಸಚಿವ ಪಿಯೂಷ್ ಗೋಯಲ್ ಅವರು ಆದಾಯ ತೆರಿಗೆ ಪಾವತಿದಾರರಿಗೆ ನೆಮ್ಮದಿಯನ್ನುಂಟು ಮಾಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವಾರ್ಷಿಕ ಐದು ಲ.ರೂ.ವರೆಗೆ ಆದಾಯವನ್ನು ಹೊಂದಿರುವವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ. ಸಚಿವರು ಇದನ್ನು ಘೋಷಿಸುತ್ತಿದ್ದಂತೆ ಲೋಕಸಭೆಯಲ್ಲಿ ಸಂಭ್ರಮ ಮನೆಮಾಡಿತ್ತು. ಆದರೆ ನಿಜಕ್ಕೂ ಸಚಿವರ ಪ್ರಕಟನೆಯ ಅರ್ಥವೇನು?

ಚುನಾವಣೆಗೆ ಮೊದಲು ಸರಕಾರದಿಂದ ಮುಂಗಡಪತ್ರ ಮಂಡನೆಯು ಚುನಾವಣೆಗಳ ನಂತರ ಬರುವ ಸರಕಾರವು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಂತಾಗಲು ತೆರಿಗೆಗಳು ನಿರ್ಣಯಿಸಲ್ಪಡುವ ರೀತಿಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನುಂಟು ಮಾಡುವುದಿಲ್ಲ. ಮುಖ್ಯ ತೆರಿಗೆ ಪ್ರಸ್ತಾವಗಳನ್ನು ಪೂರ್ಣಪ್ರಮಾಣದ ಮುಂಗಡಪತ್ರದಲ್ಲಿ ಮಂಡಿಸಲಾಗುವುದು ಎಂದು ಹೇಳುವ ಮೂಲಕ ಸ್ವತಃ ಗೋಯಲ್ ಅವರೂ ಇದನ್ನು ಒಪ್ಪಿಕೊಂಡಿದ್ದಾರೆ.

ಆದರೆ,ಸಣ್ಣ ತೆರಿಗೆದಾರರು...ವಿಶೇಷವಾಗಿ ಮಧ್ಯಮ ವರ್ಗ,ವೇತನದಾರರು,ಪಿಂಚಣಿದಾರರು ಮತ್ತು ಹಿರಿಯ ನಾಗರಿಕರು ವರ್ಷದ ಆರಂಭದಲ್ಲಿ ಮುಂಗಡಪತ್ರ ತೆರಿಗೆ ಪ್ರಸ್ತಾವಗಳ ಬಗ್ಗೆ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಹೀಗಾಗಿ ತೆರಿಗೆ ಪ್ರಸ್ತಾವಗಳನ್ನು,ವಿಶೇಷವಾಗಿ ಈ ವರ್ಗದ ಜನರಿಗೆ ಸಂಬಂಧಿಸಿದ ಪ್ರಸ್ತಾವಗಳನ್ನು ಕಾಯಿಸಕೂಡದು ಎಂದೂ ಗೋಯಲ್ ಹೇಳಿದ್ದಾರೆ.

► ಗೋಯಲ್ ಪ್ರಕಟಿಸಿದ್ದು ಇಲ್ಲಿದೆ:

2019-20ನೇ ಸಾಲಿಗೆ ಹಾಲಿ ತೆರಿಗೆ ದರಗಳೇ ಮುಂದುವರಿಯಲಿವೆ.

ಐದು ಲಕ್ಷ ರೂ.ವರೆಗೆ ತೆರಿಗೆಗರ್ಹ ವಾರ್ಷಿಕ ಆದಾಯವನ್ನು ಹೊಂದಿರುವವರು ಸಂಪೂರ್ಣ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ ಮತ್ತು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ. ಗೋಯಲ್ ಅವರ ಹೇಳಿಕೆಯ ಈ ಎರಡೂ ಭಾಗಗಳು ಮಹತ್ವದ್ದಾಗಿವೆ.

►ಹಾಲಿ ತೆರಿಗೆ ದರಗಳ ಮುಂದುವರಿಕೆ

2019-20ನೇ ಸಾಲಿಗೆ ಹಾಲಿ ತೆರಿಗೆ ದರಗಳೇ ಮುಂದುವರಿಯುತ್ತವೆ ಎಂದು ಗೋಯಲ್ ಸ್ಪಷ್ಟವಾಗಿ ಹೇಳಿದ್ದಾರೆ. 2.5 ಲ.ರೂ.ವರೆಗಿನ ಆದಾಯಕ್ಕೆ ಶೇ.0 ತೆರಿಗೆ,2.5 ಲ.ರೂ.ನಿಂದ 5 ಲ.ರೂ.ವರೆಗಿನ ಆದಾಯಕ್ಕೆ ಶೇ.5,5 ಲ.ರೂ.ನಿಂದ 10 ಲ.ರೂ.ವರೆಗಿನ ಆದಾಯಕ್ಕೆ ಶೇ.20 ಮತ್ತು ಇದಕ್ಕೂ ಹೆಚ್ಚಿನ ಆದಾಯಕ್ಕೆ ಶೇ.30 ಹಾಲಿ ತೆರಿಗೆ ದರಗಳಾಗಿವೆ.

►ಐದು ಲ.ರೂ.ವರೆಗೆ ವಿನಾಯಿತಿ

ಮಧ್ಯಂತರ ಮುಂಗಡ ಪತ್ರದಲ್ಲಿಯ ಏಕೈಕ ಬದಲಾವಣೆಯು 2.5 ಲ.ರೂ.ನಿಂದ 5 ಲ.ರೂ.ವರೆಗೆ ಆದಾಯ ಹೊಂದಿರುವವರಿಗೆ ಸಂಬಂಧಿಸಿದೆ. ಈ ಸ್ತರದಲ್ಲಿರುವರು ಈಗ ತಾವು ಆದಾಯ ತೆರಿಗೆಯನ್ನಾಗಿ ಪಾವತಿಸಬೇಕಾಗಿದ್ದ ಶೇ.5ರ ಮೊತ್ತದಷ್ಟು,ಅಂದರೆ 12,500 ರೂ.ವರೆಗೆ ವಿನಾಯಿತಿಗೆ ಅರ್ಹರಾಗುತ್ತಾರೆ. ಅಂದರೆ ಹಿಂದೆ ಶೇ.5ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದವರು ತಮ್ಮ ಪೂರ್ಣ ತೆರಿಗೆ ಹಣವನ್ನು ಮರಳಿ ಪಡೆಯುತ್ತಾರೆ ಮತ್ತು ಅವರು ಯಾವುದೇ ತೆರಿಗೆಯನ್ನು ಪಾವತಿಸಬೇಕಿಲ್ಲ.

► ಮಾರ್ಜಿನಲ್ ತೆರಿಗೆ

ಇದು ತೆರಿಗೆ ಸ್ತರಗಳಲ್ಲಿ ಬದಲಾವಣೆಗಿಂತ ತೀರ ವಿಭಿನ್ನವಾಗಿದೆ.

ಸಾಮಾನ್ಯವಾಗಿ ಸರಕಾರವು ತೆರಿಗೆ ಸ್ತರಗಳಲ್ಲಿ ಬದಲಾವಣೆಗಳನ್ನು ಮಾಡಿದಾಗ ಅದು ಆದಾಯವನ್ನು ಪರಿಗಣಿಸದೆ ತೆರಿಗೆಯನ್ನು ಪಾವತಿಸುವ ಪ್ರತಿಯೊಬ್ಬರ ಮೇಲೂ ಪರಿಣಾಮವನ್ನು ಬೀರುತ್ತದೆ. ಇದನ್ನು ಮಾರ್ಜಿನಲ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ.

ಈಗ ವಾರ್ಷಿಕ 20 ಲ.ರೂ.ಆದಾಯ ಹೊಂದಿರುವ ಯಾವುದೇ ವ್ಯಕ್ತಿಯು 2.5 ಲ.ರೂ-5.ಲ.ರೂ ಸ್ತರಕ್ಕೆ ಶೇ.5,5 ಲ.ರೂ-10 ಲ.ರೂ.ಸ್ತರಕ್ಕೆ ಶೇ.10 ಮತ್ತು 10 ಲ.ರೂ.ನಿಂದ 20 ಲ.ರೂ.ವರೆಗಿನ ಆದಾಯಕ್ಕೆ ಶೇ.30ರಷ್ಟು ತೆರಿಗೆಯನ್ನು ಪಾವತಿಸುತ್ತಿದ್ದಾನೆ. 5.ಲ.ರೂ.ವರೆಗಿನ ಆದಾಯಕ್ಕೆ ಶೇ.0 ದರವನ್ನಿಟ್ಟು ಸ್ತರಗಳನ್ನು ಬದಲಿಸಿದ್ದರೆ 20 ಲ.ರೂ.ಆದಾಯ ಗಳಿಸುವ ವ್ಯಕ್ತಿಯೂ ಮೊದಲ 5 ಲ.ರೂ.ಗಳಿಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಿರಲಿಲ್ಲ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಮಾತ್ರ ತೆರಿಗೆಯನ್ನು ಪಾವತಿಸಬೇಕಾಗುತ್ತಿತ್ತು.

ಆದರೆ ಗೋಯಲ್ ಅವರು ಮುಂಗಡಪತ್ರ ಭಾಷಣದಲ್ಲಿ ಮಾಡಿರುವ ಪ್ರಸ್ತಾವಗಳ ಅಡಿ ಇದು ಹೀಗಿಲ್ಲ. ಬದಲಿಗೆ ಐದು ಲ.ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಗಳನ್ನು ಮಾಡಿರದಿದ್ದರೆ ಕಳೆದ ವರ್ಷದಂತೆಯೇ ಈ ವರ್ಷವೂ ತೆರಿಗೆಯನ್ನು ಪಾವತಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X