ಕೇಂದ್ರದ ಮಧ್ಯಂತರ ಬಜೆಟ್ ವಿರುದ್ಧ ಸುಪ್ರೀಂಗೆ ದೂರು
![ಕೇಂದ್ರದ ಮಧ್ಯಂತರ ಬಜೆಟ್ ವಿರುದ್ಧ ಸುಪ್ರೀಂಗೆ ದೂರು ಕೇಂದ್ರದ ಮಧ್ಯಂತರ ಬಜೆಟ್ ವಿರುದ್ಧ ಸುಪ್ರೀಂಗೆ ದೂರು](https://www.varthabharati.in/sites/default/files/images/articles/2019/02/2/175965.jpg)
ಹೊಸದಿಲ್ಲಿ, ಫೆ. 2: ಕೇಂದ್ರ ಸರಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಪ್ರಶ್ನಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಮನೋಹರ್ ಲಾಲ್ ಶರ್ಮಾ ದೂರು ಸಲ್ಲಿಸಿದ್ದು, ಸಂವಿಧಾನದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಮಾತ್ರ ಅವಕಾಶ ಇದೆ. ಆದರೆ, ಪಿಯೂಷ್ ಗೋಯಲ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದು ಸಂವಿಧಾನ ಬಾಹಿರವಾಗಿದ್ದು, ರದ್ದುಗೊಳಿಸಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ಮಧ್ಯಂತರ ಬಜೆಟ್ಗೆ ಸಹಿ ಹಾಕುವಂತೆ ಭಾರತದ ಪ್ರಧಾನಿಗೆ ತಪ್ಪು ಸಲಹೆ ನೀಡಿದ ಪ್ರಧಾನಿ ಹಾಗೂ ಕೇಂದ್ರ ಸಂಪುಟದ ಪಿತೂರಿಯ ಬಗ್ಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಶರ್ಮಾ ಆಗ್ರಹಿಸಿದ್ದಾರೆ. ದೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಪ್ರತಿವಾದಿಯನ್ನಾಗಿ ಪರಿಗಣಿಸಲಾಗಿದೆ. ಈ ಮನವಿ ಔಪಚಾರಿಕ ವಿಚಾರಣೆಗೆ ಇದುವರೆಗೆ ಪರಿಗಣಿಸಿಲ್ಲ.
Next Story