ಅಧಿಕಾರ ತ್ಯಜಿಸಲು ಮೋದಿ ಮಾನಸಿಕವಾಗಿ ಸಿದ್ಧರಾಗಿಲ್ಲ: ಮಮತಾ ಬ್ಯಾನರ್ಜಿ
![ಅಧಿಕಾರ ತ್ಯಜಿಸಲು ಮೋದಿ ಮಾನಸಿಕವಾಗಿ ಸಿದ್ಧರಾಗಿಲ್ಲ: ಮಮತಾ ಬ್ಯಾನರ್ಜಿ ಅಧಿಕಾರ ತ್ಯಜಿಸಲು ಮೋದಿ ಮಾನಸಿಕವಾಗಿ ಸಿದ್ಧರಾಗಿಲ್ಲ: ಮಮತಾ ಬ್ಯಾನರ್ಜಿ](https://www.varthabharati.in/sites/default/files/images/articles/2019/02/2/175994.jpg)
ಕೊಲ್ಕತ್ತಾ, ಫೆ. 2: ದುರ್ಗಾಪುರದಲ್ಲಿ ಶನಿವಾರ ಭಾಷಣ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಅವರ ಅಧಿಕಾರವಧಿ ಈ ತಿಂಗಳು ಮುಗಿಯುತ್ತದೆ. ಆದರೆ, ಅವರು ಅಧಿಕಾರ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿಲ್ಲ ಎಂದಿದ್ದಾರೆ.
ಟಿ.ವಿ. ವಾಹಿನಿಯ ಜೊತೆ ಮಾತನಾಡಿದ ಅವರು ಪ್ರಧಾನಿ ಅವರ ವಾಗ್ದಾಳಿಗೆ ಅಕ್ರೋಶಗೊಂಡರು ಹಾಗೂ 2002ರ ಗುಜರಾತ್ ಗಲಭೆಯ ಕುರಿತಂತೆ ಮೋದಿ ವಿರುದ್ಧ ಇರುವ ಆರೋಪದ ಬಗ್ಗೆ ತರಾಟೆಗೆ ತೆಗೆದುಕೊಂಡರು. ಅವರು ತಪ್ಪು ಮಾಡಿರುವ ಕಾರಣಕ್ಕಾಗಿ ಹೆದರುತ್ತಿದ್ದಾರೆ ಎಂಬ ನರೇಂದ್ರ ಮೋದಿ ಅವರ ವ್ಯಂಗ್ಯಕ್ಕೆ ಬ್ಯಾನರ್ಜಿ ಕಟುವಾಗಿ ಪ್ರತಿಕ್ರಿಯಿಸಿದರು.
‘‘ನಾನು ಅವರನ್ನು 9 ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಯಾವುದೇ ತಪ್ಪು ಮಾಡದೇ ಇದ್ದರೆ ಭಯ ಯಾಕೆ ? ’’ ಎಂದು ಮೋದಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾನರ್ಜಿ, ಗಲಭೆ (ಗುಜರಾತ್) ನಡೆದಿರುವುದು ಸತ್ಯ. ಅವರು ಅಪರಾಧಿ ಹಾಗೂ ಆದುದರಿಂದಲೇ ಅವರನ್ನು ಪ್ರಶ್ನಿಸಲಾಯಿತು (ಸಿಬಿಐ) ಎಂದು ಹೇಳಿದ್ದಾರೆ. ‘‘ಇದು ನಿಜವಾದ ಫ್ಯಾಸಿಸ್ಟ್ ಸ್ಟೈಲ್ (ಪ್ರಧಾನಿ ಮೋದಿ). ಅವರು ಎಲ್ಲರನ್ನೂ ಸಿಬಿಐ ತನಿಖೆಗೆ ಒಳಗಾಗುವಂತೆ ಪ್ರಯತ್ನಿಸುತ್ತಾರೆ. ಒಂದು ತಿಂಗಳಲ್ಲಿ ಕೇಂದ್ರ ಸರಕಾರದ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಆದರೆ, ಅವರು ಅಧಿಕಾರ ತ್ಯಜಿಸಲು ಮಾನಸಿಕವಾಗಿ ಸಿದ್ಧರಿಲ್ಲದಂತೆ ಕಾಣುತ್ತಿದೆ’’ ಎಂದು ಬ್ಯಾನರ್ಜಿ ಹೇಳಿದ್ದಾರೆ.