Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅನುಕ್ತ: ಸುಪ್ತ ಸಾಗರದಾಚೆಗಿನ ಸತ್ಯ...

ಅನುಕ್ತ: ಸುಪ್ತ ಸಾಗರದಾಚೆಗಿನ ಸತ್ಯ ಸಂಬಂಧ

ವಾರ್ತಾಭಾರತಿವಾರ್ತಾಭಾರತಿ3 Feb 2019 12:09 AM IST
share
ಅನುಕ್ತ: ಸುಪ್ತ ಸಾಗರದಾಚೆಗಿನ ಸತ್ಯ ಸಂಬಂಧ

ಟ್ರೈಲರ್‌ನಿಂದಲೇ ದೆವ್ವ, ಭೂತದ ಕತೆ ಹೇಳುವ ಕರಾವಳಿಯ ಚಿತ್ರ ಎಂಬ ಕಲ್ಪನೆ ಮೂಡಿಸಿದ್ದ ಅನುಕ್ತ, ಆ ಕಲ್ಪನೆಗೆ ಅರ್ಧ ಮಾತ್ರವೇ ನ್ಯಾಯ ನೀಡಿದೆ. ಹಾಗಂತ ‘ರಂಗಿತರಂಗ’ ಚಿತ್ರಕ್ಕೆ ಹೋಲಿಕೆ ಮಾಡಲು ಹೋದರೆ ಅಷ್ಟೊಂದು ಕತೆ ಚಿತ್ರದಲ್ಲಿಲ್ಲ. ಹಾಗಾಗಿಯೇ ಆರಂಭ ಸಪ್ಪೆಯೆನಿಸುವುದು ಸಹಜ. ಆದರೆ ಮಧ್ಯಂತರದ ಬಳಿಕ ನಿರೀಕ್ಷಿಸಿರದಂಥ ಕತೆಯೊಂದು ಇರುವುದು ನಿಜ.

ಕರ್ತವ್ಯದ ಮೇಲೆ ಸದಾ ಮನೆ ಬಿಟ್ಟು ಹೊರಗಡೆ ಓಡಾಡುವ ಪೊಲೀಸ್ ತನಿಖಾಧಿಕಾರಿ ಕಾರ್ತಿಕ್. ನವ ದಾಂಪತ್ಯವಾಗಿದ್ದರೂ ಪತಿಯೊಂದಿಗೆ ಹೆಚ್ಚು ಸಮಯ ಕಳೆಯಲಾಗದ ಕೊರಗಿನಲ್ಲಿರುವ ಆತನ ಪತ್ನಿ ತನ್ವಿ. ಮನೆಯೊಳಗೆ ಆಕೆಯ ಒಂಟಿತನ, ಭಯ.. ಇವನ್ನು ಮಾತ್ರ ಇಟ್ಟುಕೊಂಡು ಮಧ್ಯಂತರದ ತನಕ ಕತೆ ಸಾಗುತ್ತದೆ. ಅಲ್ಲಿಗೆ ಡಿಪ್ರಶೆನ್‌ಗೆ ಒಳಗಾಗಿ ಆಸ್ಪತ್ರೆ ಸೇರುವ ತನ್ವಿಯೊಂದಿಗೆ ಪ್ರೇಕ್ಷಕರ ತನುಮನವೂ ಡಿಪ್ರೆಶನ್‌ಗೆ ಹೊರಳಿರುತ್ತದೆ.

ಚಿತ್ರದ ಆರಂಭದಲ್ಲಿ ಕರಾವಳಿ ಭಾಗದಲ್ಲಿ ನಡೆದ ಕೊಲೆಯೊಂದನ್ನು ತೋರಿಸಲಾಗಿರುತ್ತದೆ. ಅದರ ತನಿಖೆಗೆಂದು ಹೋಗುವ ಕಾರ್ತಿಕ್ ಜೊತೆಗೆ ತನ್ವಿ ಕೂಡ ಜೊತೆಯಾಗುತ್ತಾಳೆ. ಅಲ್ಲಿಂದ ಹೊಸ ಕತೆಯೊಂದು ಶುರುವಾಗುತ್ತದೆ. ಕರಾವಳಿಯಲ್ಲಿರುವ ಗುತ್ತಿನ ಮನೆಗೂ ತನಿಖಾಧಿಕಾರಿ ಕಾರ್ತಿಕ್‌ಗೂ ರಕ್ತ ಸಂಬಂಧವಿದೆ ಎನ್ನುವ ವಿಚಾರ ಬಯಲಾಗುತ್ತದೆ. ಆ ಸಂಬಂಧ ಏನು? ಕಾರ್ತಿಕ್ ಬೇರೆ ಮಂದಿಯ ದತ್ತುಪುತ್ರನಾಗಲು ಕಾರಣವೇನು? ಗುತ್ತಿನ ಮನೆಯಲ್ಲಿ ನಡೆದಂಥ ಕೊಲೆಗಳ ಹಿಂದಿನ ಕೈವಾಡ ಯಾರದು ಎನ್ನುವುದೇ ಚಿತ್ರದ ಒಳಗಿರುವ ಹೂರಣ.

ಚಿತ್ರದ ಆರಂಭದಲ್ಲಿ ತೋರಿಸಿದ ಕೊಲೆಯ ಬಳಿಕದ ದೃಶ್ಯಗಳು ಕತೆಗೆ ಸಂಬಂಧವಿರದಂತೆ ಮುಂದುವರಿಯುವ ಕಾರಣ ಮೊದಲಾರ್ಧ ನೀರಸವೆನಿಸಬಹುದು. ಕಣ್ಣಲ್ಲೇ ನಟಿಸುವ ತನ್ವಿ ಪಾತ್ರಧಾರಿ ಸಂಗೀತಾ ಭಟ್ ಅವರ ಬಿಚ್ಚುಗೂದಲು ಕೂಡ ಚಿತ್ರಕ್ಕೆ ಹಾರರ್ ಭಾವ ತರುವಲ್ಲಿ ಯಶಸ್ವಿಯಾಗಿದೆ! ಕಾರ್ತಿಕ್ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕಾರ್ತಿಕ್ ಅತ್ತಾವರ ಪೊಲೀಸ್ ಹಾವಭಾವಗಳನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಆದರೆ ಆರಡಿ ಎತ್ತರವಿದ್ದರೂ ಅವರ ಹೊರಮೈ ಲುಕ್‌ನಲ್ಲಿ ಒಬ್ಬ ಲವ್ವರ್‌ಬಾಯ್ ಮಾತ್ರ ಕಾಣಿಸುತ್ತಾನೆ. ದ್ವಿತೀಯಾರ್ಧದಲ್ಲಿ ಗುತ್ತಿನ ಮನೆ ಪ್ರವೇಶದ ದೃಶ್ಯಗಳು ಆಪ್ತಮಿತ್ರದ ಸನ್ನಿವೇಶಗಳನ್ನು ನೆನಪಿಸುತ್ತದೆ. ಆದರೆ ಇಲ್ಲಿ ದೈವ, ದೆವ್ವವನ್ನು ಬರೀ ಭ್ರಮೆಗೆ ಮಾತ್ರ ಬಳಸಿದಂತಿರುವುದು ಪ್ರೇಕ್ಷಕರ ಕುತೂಹಲಕ್ಕೆ ಹಿನ್ನಡೆ ನೀಡಿದಂತಾಗುತ್ತದೆ.

ಗುತ್ತಿನ ಮನೆಯವರ ಗತ್ತನ್ನು ಖಳನಟ ಸಂಪತ್‌ರಾಜ್ ತಮ್ಮದೇ ಖದರ್‌ನಲ್ಲಿ ನಿಭಾಯಿಸಿದ್ದಾರೆ. ಕೆ. ಎಸ್. ಶ್ರೀಧರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಅಷ್ಟೇ ಆಕರ್ಷಕವಾಗಿ ನಿಭಾಯಿಸಿದ್ದಾರೆ. ಮನೆ ಕೆಲಸದ ಮೇರಿಯಾಗಿ ನಟಿಸಿರುವ ಉಷಾ ಭಂಡಾರಿ ಸಾಯುವ ಪಾತ್ರದಲ್ಲಿ ಜೀವಿಸಿದ್ದಾರೆ! ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಅದ್ಭುತ. ಮಧ್ಯೆ ಮಧ್ಯೆ ಮರುಕಳಿಸುವ ಭೂತಕೋಲದ ನಾಗಸ್ವರ ಮೈನವಿರೇಳುವಂತೆ ಮಾಡುತ್ತದೆ.

ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡರೂ ತಾವೇ ಮೈಮರೆತು ಹಾಡಿರುವಂತೆ ಎಂ.ಕೆ. ಮಠ ಕಾಣಿಸಿಕೊಂಡಿದ್ದಾರೆ. ಚಿತ್ರ ಮೇಕಿಂಗ್ ಮೂಲಕ ಅಶ್ವಥ್ ಸ್ಯಾಮ್ಯುಯೆಲ್ ಗಮನ ಸೆಳೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಸೊಗಸಾಗಿದೆ. ಮೊದಲಾರ್ಧದ ಮೇಲೆ ನಿರೀಕ್ಷೆ ಇರಿಸದೇ ಚಿತ್ರ ನೋಡಿದರೆ ಮೆಚ್ಚುವವರ ಸಂಖ್ಯೆ ಹೆಚ್ಚಬಹುದು.


ತಾರಾಗಣ: ಕಾರ್ತಿಕ್ ಅತ್ತಾವರ, ಸಂಗೀತಾ ಭಟ್
ನಿರ್ದೇಶನ: ಅಶ್ವಥ್ ಸಾಮ್ಯುಯೆಲ್
ನಿರ್ಮಾಣ: ಹರೀಶ್ ಬಂಗೇರ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X