Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ4 Feb 2019 12:02 AM IST
share
ಓ ಮೆಣಸೇ…

ಈಗಲೂ ಸಿದ್ದರಾಮಯ್ಯರೇ ನಮಗೆ ಮುಖ್ಯಮಂತ್ರಿ
- ಪುಟ್ಟರಂಗಶೆಟ್ಟಿ, ಸಚಿವ
 
ನಿಮ್ಮ ರಾಜ್ಯದ ಹೆಸರನ್ನೂ ಜೊತೆಗೆ ಹೇಳಿಬಿಡಿ.

---------------------
  ಮಲ್ಲಿಕಾರ್ಜುನ ಖರ್ಗೆ ಈ ನಾಡಿನ ಮುಖ್ಯಮಂತ್ರಿಯಾಗಬೇಕಿತ್ತು
- ಕೆ.ಎಚ್.ಮುನಿಯಪ್ಪ, ಸಂಸದ
ಈಗ ಪ್ರಧಾನಿಯಾಗಿ ಮಾಡುವ ಅವಕಾಶ ಇದ್ದೇ ಇದೆ.

---------------------
ಉತ್ತಮ ಪ್ರಧಾನಿಯಾಗುವ ಎಲ್ಲ ಅರ್ಹತೆಯನ್ನು ರಾಹುಲ್‌ಗಾಂಧಿ ಹೊಂದಿದ್ದಾರೆ

- ತೇಜಸ್ವಿಯಾದವ್, ಆರ್‌ಜೆಡಿ ನಾಯಕ
ಅರ್ಹತೆ ಬೇಕೆಂದೇನೂ ಇಲ್ಲ ಎನ್ನುವುದನ್ನು ಮೋದಿ ಸಾಬೀತು ಮಾಡಿದ್ದಾರೆ.

---------------------
ದೊಡ್ಡ ಸಂಖ್ಯೆಯಲ್ಲಿರುವ ಬಿಲ್ಲವ ಸಮುದಾಯಕ್ಕೆ ಪೂರ್ಣ ಪ್ರಮಾಣದ ಗೌರವ ದೊರೆತಿಲ್ಲ
- ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿಪಕ್ಷ ನಾಯಕ
  ಬಿಲ್ಲವ ಸಮುದಾಯ ಸಂಘಪರಿವಾರದ ಬಲೆಗೆ ಬಿದ್ದು ಜೈಲು ಸೇರುತ್ತಿದ್ದರೆ ಗೌರವ ದೊರಕುವುದಾದರೂ ಹೇಗೆ?

---------------------
ಸನ್ಯಾಸಿಗಳಿಗೂ ಭಾರತ ರತ್ನ ಸಿಗಬೇಕು

- ಬಾಬಾ ರಾಮ್‌ದೇವ್, ಯೋಗಗುರು
ಮೊದಲು ನೀವು ನಿಮ್ಮಲ್ಲಿರುವ ಸಂಪತ್ತನ್ನೆಲ್ಲ ದಾನ ಮಾಡಿ ಕಾವಿ ಉಟ್ಟು ಸನ್ಯಾಸಿಯಾಗಿ.

---------------------
ದೊಡ್ಡ ಆಶ್ವಾಸನೆಗಳನ್ನು ನೀಡಿ ಅವುಗಳನ್ನು ಈಡೇರಿಸದಿದ್ದರೆ ರಾಜಕಾರಣಿಗಳನ್ನು ಜನರೇ ಥಳಿಸುತ್ತಾರೆ
  - ನಿತಿನ್‌ಗಡ್ಕರಿ, ಕೇಂದ್ರಸಚಿವ

ಮೋದಿಯವರನ್ನು ಥಳಿಸುವುದಕ್ಕೆ ಪರೋಕ್ಷ ಕರೆಯೇ?

---------------------
ನಾನು ಕುರ್ಚಿಗೆ ಅಂಟಿಕೊಳ್ಳುವ ಜಾಯಮಾನದವನಲ್ಲ
- ಕುಮಾರಸ್ವಾಮಿ, ಮುಖ್ಯಮಂತ್ರಿ

ಅಂಟುವುದಕ್ಕೆ ಅಲ್ಲೇನು ಪೆವಿಕಲ್ ಇದೆಯೇ?

---------------------

ಹಿಂದೂಗಳು ಕುರಿ,ಕೋಳಿಗಳಂತೆ ದುರ್ಬಲರಾಗಬಾರದು

- ಅನಂತಕುಮಾರ್ ಹೆಗಡೆ, ಸಂಸದ
  ಬದನೆ ಕಾಯಿ ಗೊಜ್ಜಿನಂತೆ ಸಬಲರಾಗಬೇಕೇ?

---------------------

ಬಿಜೆಪಿಯವರು ಆಪರೇಶನ್ ಕಮಲ ಯಾಕೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ

- ಬಸವರಾಜಹೊರಟ್ಟಿ, ವಿ.ಪ.ಸದಸ್ಯ
ಅಧಿಕಾರವಿಲ್ಲದೆ ಹೊಟ್ಟೆ ಉರಿ ಆಗಿದೆಯಂತೆ.

---------------------

ಣ್ಣವರ ಜೊತೆ ಸ್ಪರ್ಧಿಸಿ ಸಾಕಾಗಿದೆ, ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸೆಣಸಿ ಯಶಸ್ವಿಯಾಗುವೆ
- ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ತಮ್ಮ ಹೆಸರಿನ ಮುಂದಿರುವ ಗೌಡ ಎಂಬ ನಾಮದ ಬಲದ ಧೈರ್ಯ. ಆದರೆ ಮಂಡ್ಯದ ಗೌಡರು ಸುಳ್ಯದ ಗೌಡರನ್ನು ಒಪ್ಪುವುದಿಲ್ಲವಂತೆ.

---------------------
ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಶಾಸಕರು ಬೇಸತ್ತು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ
- ಶ್ರೀರಾಮುಲು, ಶಾಸಕ
  ಬಿಜೆಪಿಯೊಳಗೆ ಬೇಸತ್ತಿರುವ ಶಾಸಕರನ್ನೇನು ಮಾಡುತ್ತೀರಿ?

---------------------
  ಮಹಾರಾಷ್ಟ್ರದಲ್ಲಿ ಹಿಂದುತ್ವದ ಧೋರಣೆ ಹಿನ್ನೆಲೆಯಲ್ಲಿ ಮಾತ್ರವೇ ನಾವು ಶಿವಸೇನೆ ಜೊತೆ ಮೈತ್ರಿಗೆ ಇಚ್ಛಿಸುತ್ತೇವೆ
- ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಶತ್ರುಗಳ ಜೊತೆ ಶಯನ.

---------------------
ಮದುವೆ ಆಗುವುದಕ್ಕೆ ಮೊದಲು(ಮೈತ್ರಿ ಸರಕಾರದ ಬಗ್ಗೆ) ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಇಷ್ಟ ಆಗಬೇಕು
- ಡಾ.ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ
ಮಗು ಹುಟ್ಟಿದ ಮೇಲೆ ಇಷ್ಟ ಆದರೇನು, ಬಿಟ್ಟರೇನು?

---------------------

ಕುಮಾರಸ್ವಾಮಿ ಎಂಬ ಕೊಂಬೆಯ ಮೇಲೆ ಕಾಂಗ್ರೆಸ್ ಎಂಬ ಕಾಗೆ ಕುಳಿತಿದೆ

- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಯಡಿಯೂರಪ್ಪರ ತಲೆಯ ಮೇಲೆ ಕೂತ ಗೂಬೆಯ ಮಾತು.

---------------------

ಚುನಾವಣೆಯೆಂದರೆ ಕುಸ್ತಿ ಪಂದ್ಯಾಟವೂ ಅಲ್ಲ, ಸೌಂದರ್ಯ ಸ್ಪರ್ಧೆಯೂ ಅಲ್ಲ
- ಸುಶೀಲ್‌ಕುಮಾರ್ ಮೋದಿ, ಬಿಹಾರದ ಉಪಮುಖ್ಯಮಂತ್ರಿ
ಸದ್ಯಕ್ಕೆ ಅದು ಇವಿಎಂ ಜೊತೆಗಿನ ಜೂಜಾಟ.

---------------------
ರಾಹುಲ್‌ಗಾಂಧಿಗೆ ರಫೇಲ್ ಮತ್ತು ಮೂರುಚಕ್ರದ ಸೈಕಲ್ ನಡುವೆ ವ್ಯತ್ಯಾಸ ಗೊತ್ತಿಲ್ಲ

- ಅನಂತಕುಮಾರ್‌ಹೆಗಡೆ, ಕೇಂದ್ರಸಚಿವ
ರಫೇಲ್ ವಿಮಾನವನ್ನು ಮೂರು ಚಕ್ರದ ಸೈಕಲ್ ಮಟ್ಟಕ್ಕೆ ಇಳಿಸಿದವರ ಮಾತು.

---------------------
ಕುಮಾರಸ್ವಾಮಿಯೇ ನಮ್ಮ ಮುಖ್ಯಮಂತ್ರಿ
- ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಅದನ್ನು ಪದೇ ಪದೇ ಹೇಳುವುದನ್ನು ನೋಡುವಾಗ ಅನುಮಾನ ಬರುತ್ತದೆ.

---------------------
  ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಸಹಿಸಿದಷ್ಟು ಕಾಲ ಮಗ ಮುಖ್ಯಮಂತ್ರಿಯಾಗಿರುತ್ತಾನೆ.

---------------------
ಎತ್ತಿನ ಹೊಳೆ ನೀರು ಹರಿಸಿ ಪ್ರಾಣಬಿಡಬೇಕು ಎಂಬ ಬಯಕೆ ನನ್ನದು
- ವೀರಪ್ಪಮೊಯ್ಲಿ, ಸಂಸದ
ಒಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಪ್ರಾಣ ತೆಗೆದೇ ಪ್ರಾಣ ಬಿಡಬೇಕು ಎಂದಿದ್ದೀರಿ.

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುತ್ತಿದ್ದಾರೆ

- ಶೋಭಾಕರಂದ್ಲಾಜೆ, ಸಂಸದೆ
ಕನಿಷ್ಠ ತೊಟ್ಟಿಲು ತೂಗಲು ಅವರ ಬಳಿ ಮಗುವಾದರೂ ಇದೆಯಲ್ಲ.

---------------------

ಮಹಾಮೈತ್ರಿ ಅಧಿಕಾರಕ್ಕೆ ಬಂದರೆ ದಿನಕ್ಕೊಬ್ಬ ಪ್ರಧಾನಿ

- ಅಮಿತ್‌ಶಾ, ಬಿಜೆಪಿ ಅಧ್ಯಕ್ಷ
ಅಂಬಾನಿ ದೇಶದ ಪ್ರಧಾನಿಯಾಗುವುದಕ್ಕಿಂತ ಅದು ವಾಸಿ.

---------------------
ಅನಿಷ್ಟ, ಅಜ್ಞಾನ ನಿವಾರಿಸಿ ತತ್ವಜ್ಞಾನದ ಬೆಣ್ಣೆಯನ್ನು ಸಮಾಜಕ್ಕೆ ಹಂಚಬೇಕು

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಅದನ್ನು ಹಂಚುವಾಗಲೂ ಪಂಕ್ತಿ ಭೇದ ಜಾರಿಯಲ್ಲಿರುತ್ತದೆಯೇ?

---------------------
ಇನ್ನು ಮುಂದೆ ಭಾರತೀಯ ಅಪರಾಧಿಗಳಿಗೆ ದುಬ್ಯೆ, ಅಬುಧಾಬಿ ಆಯಕಟ್ಟಿನ ಜಾಗವಲ್ಲ

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಉತ್ತರ ಪ್ರದೇಶ ಇರುವಾಗ ದುಬೈ, ಅಬಧಾಬಿಯ ಅಗತ್ಯವೂ ಇಲ್ಲ.

---------------------
ಗಂಡ - ಹೆಂಡತಿ (ಕಾಂಗ್ರೆಸ್ - ಜೆಡಿಎಸ್) ಇನ್ನೂ ಒಂದಾಗಿಲ್ಲ; ಹಾಗಾಗಿ ಮಕ್ಕಳಾಗಿಲ್ಲ

- ಬಿ.ಜೆ.ಪುಟ್ಟಸ್ವಾಮಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ
ಆಪರೇಷನ್ ಕಮಲದ ಮೂಲಕ ಮಕ್ಕಳು ಮಾಡುವ ಉದ್ದೇಶವೇ?

share
ಪಿ.ಎ.ರೈ
ಪಿ.ಎ.ರೈ
Next Story
X