ಪಶ್ಚಿಮಬಂಗಾಳ ಸರಕಾರವನ್ನು ಸುಪ್ರೀಂಕೋರ್ಟ್ ಗೆ ಎಳೆದ ಸಿಬಿಐ
ಇಂದು ಬೆಳಗ್ಗೆ ವಿಚಾರಣೆ ಸಾಧ್ಯತೆ
![ಪಶ್ಚಿಮಬಂಗಾಳ ಸರಕಾರವನ್ನು ಸುಪ್ರೀಂಕೋರ್ಟ್ ಗೆ ಎಳೆದ ಸಿಬಿಐ ಪಶ್ಚಿಮಬಂಗಾಳ ಸರಕಾರವನ್ನು ಸುಪ್ರೀಂಕೋರ್ಟ್ ಗೆ ಎಳೆದ ಸಿಬಿಐ](https://www.varthabharati.in/sites/default/files/images/articles/2019/02/4/176174.jpg)
ಹೊಸದಿಲ್ಲಿ, ಫೆ.4: ಸಿಬಿಐ ಅಧಿಕಾರಿಗಳು ಕೋಲ್ಕತಾಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ಉಂಟಾದ ನಾಟಕೀಯ ಬೆಳವಣಿಗೆಗಳು ಇನ್ನೂ ಮುಂದುವರಿದಿದ್ದು, ಸಿಬಿಐ, ಪಶ್ಚಿಮಬಂಗಾಳ ಸರಕಾರವನ್ನು ಸುಪ್ರೀಂಕೋರ್ಟ್ಗೆ ಎಳೆದು ತರುವ ಯೋಜನೆ ಹಾಕಿದೆ.
"ಪಶ್ಚಿಮಬಂಗಾಳ ಸರಕಾರ ಹಾಗೂ ಅಲ್ಲಿನ ಪೊಲೀಸರು ಎರಡು ಹಗರಣಗಳ ತನಿಖೆಗೆ ನಮಗೆ ಸಹಕಾರ ನೀಡುತ್ತಿಲ್ಲ. ಹಾಗಾಗಿ ನಾವು ಸೋಮವಾರ ಸುಪ್ರೀಂಕೋರ್ಟ್ನ ಕದ ತಟ್ಟಲಿದ್ದೇವೆ'' ಎಂದು ಸಿಬಿಐನ ಹಂಗಾಮಿ ಮುಖ್ಯಸ್ಥ ಎಂ. ನಾಗೇಶ್ವರ ರಾವ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಸೋಮವಾರ ಬೆಳಗ್ಗೆ 10:30ಕ್ಕೆ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.
Next Story