ದಾವಣಗೆರೆ: ಆಸ್ತಿಯಲ್ಲಿ ಪಾಲು ನೀಡದ ಚಿಕ್ಕಪ್ಪಂದಿರ ಮನೆಯೆದುರು ತಂದೆಯ ಮೃತದೇಹವಿಟ್ಟು ಧರಣಿ
ದಾವಣಗೆರೆ, ಫೆ.6: ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವ ತನ್ನ ತಂದೆಯ ಮೃತದೇಹವನ್ನು ಚಿಕ್ಕಪ್ಪಂದಿರ ಮನೆ ಮುಂದಿಟ್ಟು ಧರಣಿ ನಡೆಸಿದ ಘಟನೆ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ
ಮೃತ ಕಲ್ಲಿಂಗಪ್ಪ(68) ಎಂಬವರ ಕುಟುಂಬಸ್ಥರು ಈ ಧರಣಿ ನಡೆಸಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.
ಕಲ್ಲಿಂಗಪ್ಪರಿಗೆ 28 ಎಕರೆ ಪಿತ್ರಾರ್ಜಿತ ಜಮೀನಿದೆ. ಆದರೆ ಇವರ ತಮ್ಮಂದಿರಾದ ಶೇಖರಪ್ಪ ಹಾಗೂ ಶಂಕರಪ್ಪ ಈ ಆಸ್ತಿಯಲ್ಲಿ ಕಲ್ಲಿಂಗಪ್ಪರಿಗೆ ಪಾಲು ನೀಡದೆ ಕಳೆದ 17 ವರ್ಷಗಳಿಂದ ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ನಮಗೆ ಹೊಡೆಯಲು ಬರುತ್ತಾರೆ. ಇದೇ ಕಾರಣಕ್ಕೆ ನೊಂದು ಕಲ್ಲಿಂಗಪ್ಪ ಸಾವನ್ನಪ್ಪಿದ್ದಾರೆ. ಆದರೆ ನಮಗೆ ಇನ್ನಾದರೂ ನ್ಯಾಯ ಒದಗಿಸಿಕೊಡಬೇಕು ಎಂಬುದು ಕಲ್ಲಿಂಗಪ್ಪ ಕುಟುಂಬದ ಅಳಲು.
ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story