Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತನ್ನ ಕುಟುಂಬವನ್ನು ಹುಡುಕುತ್ತಿರುವ...

ತನ್ನ ಕುಟುಂಬವನ್ನು ಹುಡುಕುತ್ತಿರುವ ಕಾಡಾನೆಗಾಗಿ ಟ್ವಿಟರ್ ಅಭಿಯಾನ ಆರಂಭಿಸಿದ ಗ್ರಾಮಸ್ಥರು

ಭಯದ ನಡುವೆಯೂ ‘ಚಿನ್ನತಂಬಿ’ಯೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ!

ವಾರ್ತಾಭಾರತಿವಾರ್ತಾಭಾರತಿ8 Feb 2019 9:33 PM IST
share
ತನ್ನ ಕುಟುಂಬವನ್ನು ಹುಡುಕುತ್ತಿರುವ ಕಾಡಾನೆಗಾಗಿ ಟ್ವಿಟರ್ ಅಭಿಯಾನ ಆರಂಭಿಸಿದ ಗ್ರಾಮಸ್ಥರು

ತಮಿಳುನಾಡಿನ ಕೊಯಮತ್ತೂರು ಮತ್ತು ತಿರುಪುರಗಳ ನಡುವಿನ ಗ್ರಾಮಗಳಲ್ಲಿ ಅಲೆದಾಡುತ್ತಿರುವ ಕಾಡಾನೆಯೊಂದು ತನ್ನಿಂದ ಬೇರ್ಪಟ್ಟಿರುವ ತನ್ನ ಕುಟುಂಬವನ್ನು ಹುಡುಕಾಡುತ್ತಿದೆ. ಈ ಆನೆಯಿಂದ ತಮಗೆ ತೊಂದರೆಯಾಗುತ್ತಿದ್ದರೂ ಅದನ್ನು ಅತಿಯಾಗಿ ಪ್ರೀತಿಸುತ್ತಿರುವ ಗ್ರಾಮಸ್ಥರು ‘ಚಿನ್ನತಂಬಿ’ ಎಂದು ನಾಮಕರಣವನ್ನೂ ಮಾಡಿದ್ದಾರೆ. ಇದೇ ವೇಳೆ ಚಿನ್ನತಂಬಿಯನ್ನು ರಕ್ಷಿಸಲು ಅರಣ್ಯ ಇಲಾಖೆಯು ಕಟ್ಟೆಚ್ಚರದಲ್ಲಿದೆ.

ಒಂಟಿ ಸಲಗ ಚಿನ್ನತಂಬಿಯ ಅಲೆದಾಟದ ಕುರಿತು ಗ್ರಾಮಸ್ಥರಲ್ಲಿ ಮನೆಮಾಡಿರುವ ಆತಂಕ, ಭೀತಿ ಯಾರಿಗಾದರೂ ಅರ್ಥವಾಗುವಂಥದ್ದೇ. ಆದರೆ ಚಿನ್ನತಂಬಿಯ ಕಥೆಗೆ ಇನ್ನೊಂದು ಮುಖವೂ ಇದೆ. ಅದನ್ನು ರಕ್ಷಿಸಬೇಕು ಮತ್ತು ಅದು ತನ್ನ ನೈಸರ್ಗಿಕ ವಾಸಸ್ಥಾನದಲ್ಲಿ ಹಾಯಾಗಿರಲಿ ಎಂದು ಬಯಸುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಮಾನವನಿಂದ ಅರಣ್ಯಗಳ ಅತಿಕ್ರಮಣದಿಂದಾಗಿ ಹಲವಾರು ಕಾಡಾನೆಗಳು ಕೊಯಮತ್ತೂರು ಮತ್ತು ಸಮೀಪದ ಗ್ರಾಮಗಳಿಗೆ ನುಗ್ಗುತ್ತಿವೆ,ಆಗಾಗ್ಗೆ ಕೃಷಿಯನ್ನೂ ಹಾಳು ಮಾಡುತ್ತಿವೆ.

ಸ್ಥಳೀಯರಲ್ಲಿ ಚಿನ್ನತಂಬಿ ಜನಪ್ರಿಯವಾಗಿದ್ದು, ಅರಣ್ಯ ಇಲಾಖೆಯು ಜ.25ರಂದು ಪೆರಿಯ ಥಡಗಂ ಪ್ರದೇಶದಿಂದ ಅದನ್ನು ರಕ್ಷಿಸಿತ್ತು. ಅದನ್ನು ಲಾರಿಗೆ ಹತ್ತಿಸಲು ಅರಣ್ಯ ಇಲಾಖಾಧಿಕಾರಿಗಳು ಪ್ರಯತ್ನಿಸಿದ ಸಂದರ್ಭ ಅದರ ಎರಡೂ ದಂತಗಳು ಮುರಿದಿದ್ದವು. ಅಲ್ಲದೆ ಈ ಕಾರ್ಯಾಚರಣೆಗೆ ನೆರವಾಗಿದ್ದ ಕಾಡಾನೆಗಳು ಅದನ್ನು ಗಾಯಗೊಳಿಸಿದ್ದವು. ಹರಸಾಹಸಪಟ್ಟು ಚಿನ್ನತಂಬಿಯನ್ನು ಲಾರಿಯಲ್ಲಿ ಹತ್ತಿಸಲು ಯಶಸ್ವಿಯಾಗಿದ್ದ ಅಧಿಕಾರಿಗಳು ಟಾಪ್‌ ಸ್ಲಿಪ್ ಹುಲಿಧಾಮಕ್ಕೆ ಸಾಗಿಸಿ, ವರಕಾಳಿಯೂರು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದರು.

ಆದರೆ ತನ್ನ ಕುಟುಂಬದ ಶೋಧಕ್ಕಾಗಿ ತನ್ನ ಹಿಂದಿನ ಜಾಗಕ್ಕೆ ಪಯಣ ಆರಂಭಿಸಿದ್ದ ಚಿನ್ನತಂಬಿ ಉದುಮಲೈ ಮತ್ತು ಕೃಷ್ಣಾಪುರಂ ಪ್ರದೇಶಗಳಲ್ಲಿ ಅಲೆದಾಡಿದ್ದು, ಮೂರು ದಿನಗಳಲ್ಲಿ 100 ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಿತ್ತು. ಅರಣ್ಯ ಇಲಾಖೆಯು ಚಿನ್ನತಂಬಿಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸಲು ಮಾಡಿದ ಪ್ರಯತ್ನಗಳು ಸಫಲವಾಗಿಲ್ಲ. ಅಧಿಕಾರಿಗಳು ಅದನ್ನು ಅರಣ್ಯಕ್ಕೆ ಓಡಿಸುತ್ತಿದ್ದರೂ ಲೆಕ್ಕಿಸದೆ ಮತ್ತೆ ಮತ್ತೆ ವಾಪಸಾಗುತ್ತಲೇ ಇದೆ.

ಈ ಸಮಸ್ಯೆಯಿಂದಾಗಿ ಚಿನ್ನತಂಬಿಯನ್ನು ಪಳಗಿಸಿ ಸಾಕಾನೆಯನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದರು. ಆದರೆ ಇದನ್ನು ಹಲವಾರು ಜನರು ವಿರೋಧಿಸುತ್ತಿದ್ದು, ‘ಸೇವ್ ಚಿನ್ನತಂಬಿ ’ ಹ್ಯಾಷ್‌ಟ್ಯಾಗ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಚಿನ್ನತಂಬಿಯನ್ನು ಅರಣ್ಯಕ್ಕೆ ಮರಳಲು ನೆರವಾಗಲು ಸಲೀಂ ಮತ್ತು ಮರಿಯಪ್ಪನ್ ಹೆಸರಿನ ಎರಡು ಸಾಕಾನೆಗಳನ್ನೂ ಅರಣ್ಯಾಧಿಕಾರಿಗಳು ತರಿಸಿಕೊಂಡಿದ್ದಾರೆ.

ಚಿನ್ನತಂಬಿ ಚಿನ್ನತಂಬಿಯಾಗಿಯೇ ಇರಲಿ

ಚಿನ್ನತಂಬಿಯನ್ನು ಸಾಕಾನೆಯನ್ನಾಗಿ ಪಳಗಿಸುವ ಅರಣ್ಯ ಇಲಾಖೆಯ ಹವಣಿಕೆಯ ವಿರುದ್ಧ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿದೆ. ಇದೇ ವೇಳೆ ಚಿನ್ನತಂಬಿಯನ್ನು ಪಳಗಿಸದಿದ್ದರೆ ಅದು ಸ್ವತಃ ತನಗೆ ಮತ್ತು ತನ್ನ ಸುತ್ತಲಿದ್ದವರಿಗೂ ಅಪಾಯಕಾರಿಯಾಗುತ್ತದೆ ಎಂದು ಹಲವರು ಆತಂಕ ಪಟ್ಟುಕೊಂಡಿದ್ದಾರೆ, ಆದರೆ ಅವರಿಗೂ ಚಿನ್ನತಂಬಿಯ ಬಗ್ಗೆ ಹೃದಯಗಳಲ್ಲಿ ಮೃದುಭಾವನೆಗಳಿವೆ.

ತನ್ಮಧ್ಯೆ ಚಿನ್ನತಂಬಿಯನ್ನು ಪಳಗಿದ ಆನೆಯನ್ನಾಗಿ ಪರಿವರ್ತಿಸುವ ಯಾವುದೇ ಯೋಜನೆಯಿಲ್ಲ ಎಂದು ತಮಿಳುನಾಡು ಸರಕಾರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಚಿನ್ನತಂಬಿಯನ್ನು ಮತ್ತೆ ಅರಣ್ಯಕ್ಕೆ ಕಳುಹಿಸಲು ಅಧಿಕಾರಿಗಳು ಪ್ರಯತ್ನಿಸುತ್ತಲೇ ಇದ್ದಾರೆ ಮತ್ತು ಅದಕ್ಕೆ ಸಾಕಷ್ಟು ನೀರು ಮತ್ತು ತಿನ್ನಲು ಕಬ್ಬನ್ನು ಒದಗಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಚಿನ್ನತಂಬಿಯ ಚಲನವಲನಗಳ ಕುರಿತು ಸ್ಥಳೀಯ ಜನರಿಗೆ ಧ್ವನಿವರ್ಧಕಗಳ ಮೂಲಕ ನಿರಂತರವಾಗಿ ಮಾಹಿತಿಗಳನ್ನು ನೀಡುತ್ತಿದ್ದಾರೆ. ಚಿನ್ನತಂಬಿ ತನ್ನ ಮೂಲ ವಾಸಸ್ಥಾನಕ್ಕೆ ಮರಳಲಿ ಮತ್ತು ತನ್ನ ಕುಟುಂಬವನ್ನು ಸೇರಿಕೊಳ್ಳಲಿ ಎಂದು ಜನರು ಹಾರೈಸುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X