ರಾಜ್ಯಮಟ್ಟದ ಎಸ್ಸಿ- ಎಸ್ಟಿ ಸಮಾವೇಶ ಮುಂದೂಡಿಕೆ

ಬೆಂಗಳೂರು,ಫೆ.9: ರಾಜ್ಯ ಹಾಗೂ ಕೇಂದ್ರ ಬಜೆಟ್ ಹಿನ್ನೆಲೆ ಫೆ.10 ರಂದು ನಡೆಯಬೇಕಿದ್ದ ರಾಜ್ಯಮಟ್ಟ್ ಎಸ್ಸಿ- ಎಸ್ಟಿ ಸಮಾವೇಶ ಮುಂದೂಡಲಾಗಿದ್ದು ಶೀಘ್ರದಲ್ಲೇ ಮುಂದಿನ ದಿನಾಂಕ ನಿಗದಿ ಪಡಿಸಲಾಗುವುದೆಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹೇಳಿದರು.
ಮೂರ್ನಾಲ್ಕು ದಿನದಲ್ಲಿ ಆಲಮೇಲ ತಾಲೂಕು ಘೋಷಣೆ ಹೊರಡಿಸಲಾಗುವುದು. ಆಲಮೇಲ ತಾಲೂಕು ಮಾಡಿಯೇ ತೀರುವೆ. ಲಿಸ್ಟ್ ನಲ್ಲಿ ಇತ್ತು ಏನಾಯಿತು ಎಂದು ವಿಚಾರಿಸುವೆ ಎಂದರು.
ದ್ರಾಕ್ಷಿ ದಾಳಿಂಬೆ ಬೆಳೆಗಾರರಿಗೆ 150 ಕೋಟಿ ಕೊಟ್ಟಿದ್ದು ಸಾಲ ಮನ್ನಾ ಮಾಡಲು ಅಲ್ಲ. ಬೆಳೆಗಾರರಿಗೆ ಔಷಧಿ ಇನ್ನಿತರೆ ಸೌಕರ್ಯ ಒದಗಿಸಲು. ತೋಟಗಾರಿಕೆ ಕಾಲೇಜ್ ಬಗ್ಗೆ ಚರ್ಚಿಸಲಾಗಿದೆ. ಹಾಸನ ಮತ್ತು ವಿಜಯಪುರಕ್ಕೆ ನೀಡಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಮಂಜೂರು ಮಾಡಿಸುವೆ ಎಂದರು.
ಸರ್ಕಾರ ದಲಿತರಿಗೆ ಅನ್ಯಾಯ ಮಾಡಲ್ಲ. ರೇವಣ್ಣ ಅವರು ಭಡ್ತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಪ್ರಕಾರ ಕಾಯ್ದೆ ಅನುಷ್ಠಾನಗೊಳ್ಳಲಿ ಎಂದಿದ್ದಾರೆ. ಸುಪ್ರಿಂ ಆದೇಶದಂತೆ ನಡೆದುಕೊಳ್ಳಲಾಗುವುದು ಎಂದರು.
ಯಡಿಯೂರಪ್ಪ ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಬಜೆಟ್ ಮಂಡನೆಯಾಗಲ್ಲ ಎಂದಿದ್ದರು, ಶಾಸಕರು ಗೈರಾಗುತ್ತಾರೆ ಎಂದಿದ್ದರು. ಆದಾಗ್ಯೂ ಬಜೆಟ್ ಮಂಡನೆಯಾಯಿತಲ್ಲವಾ ? ಎಂದ ಅವರು, ಆಡಿಯೋದಲ್ಲಿ ಕೇಳಿ ಬಂದ ಧ್ವನಿ ತಮ್ಮದಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಎಷ್ಟು ಸತ್ಯ ಹೇಳುತ್ತಾರೆ ಎಂಬುದು ಎಲ್ಲರಿಗೆ ಗೊತ್ತಿದೆ ಎಂದರು.
ನವರಸಪುರ ಉತ್ಸವಕ್ಕೆ ಐದು ಕೋಟಿ ರೂ. ಹೆಚ್ಚಿಗೆ ಕೇಳಿದ್ದೇವೆ. ಈಗಾಗಲೇ ಒಂದು ಕೋಟಿ ರೂ. ಇದೆ. ಹೆಚ್ಚಿನ ಹಣ ಕೇಳಲು ಹೊರಟಿದ್ದೇನೆ. ಸೋಮವಾರ ಬೆಂಗಳೂರಿಗೆ ಹೊರಡಳಿದ್ದು, ಆ ಬಳಿಕ ನಿರ್ಧಾರ ತಿಳಿಸುವೆ ಎಂದರು.
ಎಸ್ಸಿ-ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಿಂಗಯ್ಯ, ಸ್ಯೆಯ್ಯದ್ ಮೊಹಿದ್ ಅಲ್ತಾಫ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ದಸ್ತಗಿರಿ ಸಾಲೊಟಗಿ, ಯಾಕೂನ್ ಕೊಪರ್, ಚಂದ್ರಕಾಂತ ಹಿರೇಮಠ ಉಪಸ್ಥಿತರಿದ್ದರು.







