ಮತ್ತೆ ನೀವೇ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ !
ಮಹಾಘಟಬಂಧನ್ ಗೆ ಬಾಂಬ್ ಹಾಕಿದ ಮುಲಾಯಂ ಸಿಂಗ್
![ಮತ್ತೆ ನೀವೇ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ ! ಮತ್ತೆ ನೀವೇ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ !](https://www.varthabharati.in/sites/default/files/images/articles/2019/02/13/177552.jpg)
ಹೊಸದಿಲ್ಲಿ, ಫೆ.13: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಹೊಸ ಸಂಚಲನ ಮೂಡಿಸಿದರು.
16ನೇ ಲೋಕಸಭೆಯ ಕೊನೆಯ ಕಲಾಪದಲ್ಲಿ ಭಾಗವಹಿಸಿ ವಿದಾಯದ ಭಾಷಣದ ಮಾಡಿದ ಮುಲಾಯಂ ಸಿಂಗ್,‘‘ಪ್ರಧಾನಮಂತ್ರಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸುವೆ. ಎಲ್ಲ ಸಂಸದರು ಮತ್ತೊಮ್ಮೆ ಆಯ್ಕೆಯಾಗಿ ಲೋಕಸಭೆಗೆ ಮರಳಲಿ’’ ಎಂದು ಹಾರೈಸುವೆ ಎಂದರು.
ಮುಲಾಂಯ ಮಾತಿಗೆ ಪ್ರಧಾನಿ ಮೋದಿ ಎರಡೂ ಕೈ ಜೋಡಿಸಿ ಧನ್ಯವಾದ ಸಲ್ಲಿಸಿದರೆ, ಎನ್ಡಿಎ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖದಲ್ಲಿ ಬೇಸರ ವ್ಯಕ್ತವಾಯಿತು.
ಮುಲಾಯಂ ಪುತ್ರ ಅಖಿಲೇಶ್ ಯಾದವ್ ಬಿಎಸ್ಪಿ ಸುಪ್ರಿಮೋ ಮಾಯಾವತಿಯೊಂದಿಗೆ ಮೈತ್ರಿ ಮಾಡಿಕೊಂಡು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಲಾಯಂ ಹೇಳಿಕೆ ಅಚ್ಚರಿ ಮೂಡಿಸಿದೆ.
Next Story