Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ವಸಡುಗಳು ನೋಯುತ್ತಿವೆಯೇ?:...

ನಿಮ್ಮ ವಸಡುಗಳು ನೋಯುತ್ತಿವೆಯೇ?: ಇಲ್ಲಿವೆ 5 ಸಂಭಾವ್ಯ ಕಾರಣಗಳು

ವಾರ್ತಾಭಾರತಿವಾರ್ತಾಭಾರತಿ13 Feb 2019 7:24 PM IST
share
ನಿಮ್ಮ ವಸಡುಗಳು ನೋಯುತ್ತಿವೆಯೇ?: ಇಲ್ಲಿವೆ 5 ಸಂಭಾವ್ಯ ಕಾರಣಗಳು

ನೀವು ಏನಾದರೂ ತಿಂದಾಗ ಅಥವಾ ಹಲ್ಲುಜ್ಜಿದಾಗ ವಸಡುಗಳಲ್ಲಿ ನೋವನ್ನು ಅನುಭವಿಸಿದ್ದೀರಾ? ವಸಡುಗಳು ನೋಯಲು ನಿಖರ ಕಾರಣವೇನಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ವಸಡುಗಳಲ್ಲಿ ನೋವನ್ನುಂಟು ಮಾಡುವ ಹಲವಾರು ಕಾರಣಗಳಿವೆ,ಈ ನೋವು ಸೌಮ್ಯವಾಗಿರಬಹುದು ಅಥವಾ ತೀವ್ರ ಸ್ವರೂಪದ್ದಾಗಿರಬಹುದು.

ವಸಡು ನೋವಿಗೆ ಹಲವು ಕಾರಣಗಳಿವೆಯಾದರೂ ಜಿಂಜಿವೈಟಿಸ್ ಅಥವಾ ವಸಡುಗಳ ಉರಿಯೂತ ಅತ್ಯಂತ ಸಾಮಾನ್ಯ ಕಾರಣವಾಗಿದೆ. ವಸಡು ನೋವಿನ ಸಂಭಾವ್ಯ ಕಾರಣಗಳಿಲ್ಲಿವೆ.

►ಜಿಂಜಿವೈಟಿಸ್

ಜಿಂಜಿವೈಟಿಸ್ ಬ್ಯಾಕ್ಟೀರಿಯಾ ಸೋಂಕಿನಿಂದುಂಟಾಗುವ ವಸಡುಗಳ ಉರಿಯೂತವಾಗಿದೆ. ಬ್ಯಾಕ್ಟೀರಿಯಾಗಳ ವೃದ್ಧಿ ಮತ್ತು ಹಲ್ಲುಗಳ ಅಸ್ವಚ್ಛತೆ ಇವು ವಸಡು ನೋವಿಗೆ ಎರಡು ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ವಯಸ್ಸು,ಧೂಮ್ರಪಾನ ಮತ್ತು ಶುಷ್ಕ ಬಾಯಿ ಇವು ಸಾಮಾನ್ಯ ಅಪಾಯದ ಅಂಶಗಳಲ್ಲಿ ಸೇರಿವೆ. ಬಾಯಿಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದರಿಂದ,ಪ್ರತಿಬಾರಿ ಊಟದ ಬಳಿಕ ನಿಯಮಿತವಾಗಿ ಹಲ್ಲುಗಳನ್ನುಜ್ಜಿಕೊಳ್ಳುವುದರಿಂದ, ಫ್ಲಾಸಿಂಗ್ ಮತ್ತು ತಂಬಾಕು ವರ್ಜನದ ಮೂಲಕ ವಸಡು ರೋಗವನ್ನು ತಡೆಯಬಹುದು.

►ಓರಲ್ ಹರ್ಪಿಸ್

ಓರಲ್ ಹರ್ಪಿಸ್ ಅಥವ ಬಾಯಿಯ ಸರ್ಪಸುತ್ತು ಸೋಂಕು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್‌ನಿಂದುಂಟಾಗುತ್ತದೆ. ಈ ಸೋಂಕು ಜ್ವರ,ವಸಡು ನೋವು,ಯಾತನಾದಾಯಕ ಬಾಯಿ ಹುಣ್ಣುಗಳು,ವಸಡುಗಳಲ್ಲಿ ಊತ ಮತ್ತು ವಸಡುಗಳು ಕೆಂಪಗಾಗಲು ಕಾರಣವಾಗುತ್ತದೆ. ಇದು ಸಾಂಕ್ರಾಮಿಕವಾಗಿದ್ದು,ಸೋಂಕುಪೀಡಿತ ವ್ಯಕ್ತಿಯ ಸಂಪರ್ಕದಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಅಪರೂಪದ ಕಾಯಿಲೆಯಾಗಿದ್ದು,ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು.

►ಕೋಲ್ಡ್ ಸೋರ್ಸ್‌ ಅಥವಾ ಶೀತಹುಣ್ಣುಗಳು

ಬಾಯಿ ಮತ್ತು ತುಟಿಗಳಲ್ಲಿ ಶೀತಹುಣ್ಣುಗಳು,ಬಿರುಕುಗಳು ಯಾತನಾದಾಯಕವಾಗಬಹುದು ಮತ್ತು ಕಿರಿಕಿರಿಯನ್ನುಂಟು ಮಾಡಬಹುದು. ಇವು ವಯಸ್ಕರಲ್ಲಿ ಕಂಡು ಬರುವ ಸಾಮಾನ್ಯ ದಂತ ಸಮಸ್ಯೆಗಳಾಗಿವೆ. ಇವು ವಸಡುಗಳಲ್ಲಿ ನೋವಿಗೆ ಕಾರಣವಾಗುತ್ತವೆ. ಶೀತಹುಣ್ಣುಗಳಾದಾಗ ವ್ಯಕ್ತಿಗೆ ಆಹಾರ ಮತ್ತು ಪಾನೀಯಗಳನ್ನು ಸೇವಿಸುವುದೂ ಕಷ್ಟವಾಗಬಹುದು.

►ಒಣಗಿದ ಕುಳಿ

ನಾವು ಹಲ್ಲನ್ನು ಕೀಳಿಸಿಕೊಂಡಾಗ ಮೂಳೆಯಲ್ಲಿ ಕುಳಿಯುಂಟಾಗುತ್ತದೆ. ಸಾಮಾನ್ಯವಾಗಿ ಈ ಕುಳಿಯಲ್ಲಿ ರಕ್ತವು ಹೆಪ್ಪುಗಟ್ಟಿಕೊಂಡು ಕೆಳಗಿರುವ ಮೂಳೆಗೆ ರಕ್ಷಣೆಯನ್ನು ನೀಡುತ್ತದೆ. ಆದರೆ ಕೆಲವೊಮ್ಮೆ ಈ ರಕ್ತದ ಹೆಪ್ಪು ಕರಗುತ್ತದೆ ಮತ್ತು ತನ್ಮೂಲಕ ಮೂಳೆ ಮತ್ತು ನರಗಳು ನಾವು ಸೇವಿಸುವ ಆಹಾರ, ನೀರು ಮತ್ತು ಗಾಳಿಗೂ ತೆರೆದುಕೊಳ್ಳುತ್ತವೆ. ಈ ಸ್ಥಿತಿಯನ್ನು ಒಣ ಕುಳಿ ಎನ್ನಲಾಗುತ್ತದೆ. ಇದು ಹಲ್ಲು ಕೀಳಿಸಿಕೊಂಡ ಬಳಿಕ ಹೆಚ್ಚಿನ ಜನರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದ್ದು,ವಸಡುಗಳಲ್ಲಿ ನೋವು, ತಲೆನೋವು, ವಸಡುಗಳ ಊತ ಮತ್ತು ಜ್ವರಕ್ಕೆ ಕಾರಣವಾಗುತ್ತದೆ.

►ಹಾರ್ಮೋನ್ ಬದಲಾವಣೆಗಳು

ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಗಳು ಕೂಡ ವಸಡುಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ಹೆಣ್ಣುಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದಾಗ ವಸಡುಗಳಿಗೆ ಹೆಚ್ಚಿನ ರಕ್ತ ಹರಿಯುತ್ತದೆ ಮತ್ತು ಅವು ಊದಿಕೊಂಡು ನೋಯತೊಡಗುತ್ತವೆ. ಗರ್ಭಾವಸ್ಥೆಯು ಕೂಡ ವಸಡುಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅವುಗಳಿಂದ ರಕ್ತಸ್ರಾವಕ್ಕೂ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

►ವಸಡುಗಳ ನೋವಿಗೆ ಚಿಕಿತ್ಸೆ ಏನು?

ಫ್ಲೋರೈಡ್ ಒಳಗೊಂಡಿರುವ ಟೂಥ್‌ಪೇಸ್ಟ್‌ನಿಂದ ಹಲ್ಲುಜ್ಜುವಿಕೆ, ಹಲ್ಲುಗಳ ಫ್ಲಾಸಿಂಗ್ ನೋವನ್ನು ಶಮನಿಸುತ್ತವೆ. ಹಲ್ಲುಗಳ ಸೋಂಕು ಅಥವಾ ಜಿಂಜಿವೈಟಿಸ್‌ನಿಂದ ಪೀಡಿತರು ಸೋಂಕುಗಳ ಮರುಕಳಿಕೆಯನ್ನು ತಡೆಯಲು ಆ್ಯಂಟಿಸೆಪ್ಟಿಕ್ ಮೌಥ್ ರಿನ್ಸ್ ಅಥವಾ ಬಾಯಿ ಮುಕ್ಕಳಿಸುವ ದ್ರಾವಣವನ್ನು ಬಳಸಬೇಕು. ತಂಬಾಕು ಸೇವನೆಯನ್ನು ವರ್ಜಿಸುವ ಮೂಲಕ ದಂತಪಾಚಿ ಕಟ್ಟಿಕೊಳ್ಳುವುದನ್ನುಮತ್ತು ಬಾಯಿ ಸೋಂಕುಗಳನ್ನು ತಡೆಗಟ್ಟಬಹುದು. ಸಕ್ಕರೆಯುಳ್ಳ ಆಹಾರ ಮತ್ತು ಪಾನೀಯಗಳ ಸೇವನೆ ಬೇಡ. ಸೋಂಕುಗಳು ಮತ್ತು ಇತರ ರೋಗಗಳಿಗಾಗಿ ನಿಯಮಿತವಾಗಿ ದಂತವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X