Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಮನುಷ್ಯನಿಗೆ ಎರಡು ಕೈಗಳಿರುವುದೇ...

ಮನುಷ್ಯನಿಗೆ ಎರಡು ಕೈಗಳಿರುವುದೇ ಯುದ್ಧಕ್ಕೆ ಮೂಲ: ಸಾಹಿತಿ ಜರಗನಹಳ್ಳಿ ಶಿವಶಂಕರ್

ವಾರ್ತಾಭಾರತಿವಾರ್ತಾಭಾರತಿ17 Feb 2019 11:25 PM IST
share
ಮನುಷ್ಯನಿಗೆ ಎರಡು ಕೈಗಳಿರುವುದೇ ಯುದ್ಧಕ್ಕೆ ಮೂಲ: ಸಾಹಿತಿ ಜರಗನಹಳ್ಳಿ ಶಿವಶಂಕರ್

ಬೆಂಗಳೂರು, ಫೆ.17: ಎಲ್ಲ ಪ್ರಾಣಿಗಳಿಗೂ ನಾಲ್ಕು ಕಾಲುಗಳಿದರೆ ಮನುಷ್ಯನಿಗೆ ಮಾತ್ರ ಎರಡು ಕಾಲು, ಎರಡು ಕೈಗಳಿರುವುದೇ ಯುದ್ಧದಂತಹ ದುರಂತ ಕೃತ್ಯಗಳಿಗೆ ಪ್ರಮುಖ ಕಾರಣ ಎಂದು ಸಾಹಿತಿ ಜರಗನಹಳ್ಳಿ ಶಿವಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿ.ಕಾಕೋಳು ಸೈಲೇಶ್‌ರವರ ‘ಅಗ್ರಸಾಲಿಗೆ’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮನುಷ್ಯ ಎರಡು ಕಾಲುಗಳಲ್ಲಿ ನಡೆದಾಡುತ್ತಿರುವುದೇ ಮನುಕುಲದ ದೊಡ್ಡ ದುರಂತ. ಎಲ್ಲ ಪ್ರಾಣಿಗಳಿಗೂ ನಾಲ್ಕು ಕಾಲುಗಳಿವೆ. ಆದರೆ, ಮನುಷ್ಯನ ಎರಡು ಕಾಲುಗಳು ವಿಕಾರಗೊಂಡು ಕೈಗಳಾಗಿ ರುವುದು ಜಗತ್ತಿನ ಎಲ್ಲ ಅವಘಡಗಳಿಗೆ ಮೂಲವಾಗಿದೆ ಎಂದು ತಿಳಿಸಿದರು.

ಮನುಷ್ಯನ ಮೆದುಳು ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ವಿಕಾಸನಗೊಂಡಿದ್ದು, ಪ್ರಕೃತಿಗೆ ವಿರುದ್ಧವಾಗಿ ಅನೇಕ ಸಂಶೋಧನೆಗಳನ್ನು ಮಾಡುವ ಮೂಲಕ ತನ್ನ ಮೂಲಕ್ಕೆ ತಾನೇ ಕೊಡಲಿಯಿಟ್ಟುಕೊಳ್ಳುತ್ತಿದ್ದಾನೆ. ಪುಲ್ವಾಮ ಘಟನೆಯಿಂದ ಮನಸಿಗೆ ತುಂಬಾ ನೋವಾಗಿದೆ. ಕಾರಣವಿಲ್ಲದೆ ಸೈನಿಕರನ್ನು ಕೊಂದನಲ್ಲ, ಮನುಷ್ಯ ಏಕೆ ಹೀಗಾದ ಎಂದು ಬೇಸರ ವ್ಯಕ್ತಪಡಿಸಿದರು.

ವಚನ ಭ್ರಷ್ಟತೆ, ಹಣದ ಮೋಹ ಇದರ ಹಿಂದೆ ಸಾಗುತ್ತಿರುವ ಸಮಾಜವನ್ನು ಸಾಹಿತ್ಯದ ಮೂಲಕ ಶಾಂತಿ ಪ್ರೀತಿ ಪ್ರೇಮದೆಡೆಗೆ ಹಿಂತಿರುಗುವಂತೆ ಮಾಡಬೇಕು. ಆಧುನಿಕ ಯುಗದ ಮನುಷ್ಯ ತಲೆಯಲ್ಲಿ ಶಾಂತಿ ಸಹನೆಗಳ ಬದಲಿಗೆ ದ್ವೇಷ ಅಸೂಯೆ ಮತ್ಸರ ತುಂಬಿಕೊಂಡಿದೆ. ಹೀಗಾಗಿ, ಆತ ವಿಜ್ಞಾನ ತಂತ್ರಜ್ಞಾನದ ಮೂಲಕ ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ಪ್ರಕೃತಿಯ ವಿರುದ್ಧವಾಗಿ ಚಿಂತಿಸುತ್ತಿದ್ದಾನೆ. ಆದರೆ ಕವಿ ಮನಸ್ಸು ಮಾತ್ರ ಪ್ರಕೃತಿಯ ವಿರುದ್ಧವಾಗಿ ಯೋಚಿಸುವುದಿಲ್ಲ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಿಸರ್ಗದ ನಿಯಮದಂತೆ ಕವಿಯ ಚಿಂತನೆಗಳಿರುತ್ತವೆ ಎಂದು ನುಡಿದರು.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದೇ ಕವಿತೆ. ಕವಿ ಹೃದಯ ಇರುವವರೆಲ್ಲರೂ ಕವಿತೆಗಳನ್ನು ಬರೆಯಬಹುದು. ಕವಿತೆ ಯಾರೊಬ್ಬರ ಸೊತ್ತಲ್ಲ. ಕವಿತೆಗಳಲ್ಲಿ ಅಂತಃಕರಣವಿದ್ದರೆ ಅದು ಎಲ್ಲರನ್ನು ಸೆರೆ ಹಿಡಿದಿಡಲಿದೆ. ಪೊಲೀಸ್ ಇಲಾಖೆಯಲ್ಲಿನ ಹಲವು ಕವಿ ಹೃದಯಗಳು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಪಿ.ಎಸ್.ರಾಮಾಂಜನೇಯ, ಬೀಚಿ ಸೇರಿದಂತೆ ಹಲವು ಕವಿಗಳು, ಸಾಹಿತಿಗಳು ವೃತ್ತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿಯ ಮೂಲಕ ಅಕ್ಷರ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ದ.ರಾ.ಬೇಂದ್ರೆ ಹಾಗೂ ಕುವೆಂಪು ಅಭಿರುಚಿಯ ಕನ್ನಡ ಸಾಹಿತ್ಯ ಇಲ್ಲದಂತಾಗಿದೆ. ಕವಿ ಏಕೆ ಆಗಬೇಕೆಂದರೆ ತನ್ನ ಓರೆಗಣ್ಣಿನಿಂದ ಸಮಾಜವನ್ನು ನೋಡಿ, ಅದರ ಸಮಸ್ಯೆಗಳಿಗೆ ಉತ್ತರ ಕೊಟ್ಟು ಸ್ಪಂದಿಸುವುದಕ್ಕೆ. ಹೀಗಾಗಿ, ಎಲ್ಲರೂ ಬರೆಯುವುದಕ್ಕೆ ಆಗಲ್ಲ. ನೂರಾರು ವರುಷ ಇದ್ದ ಮರ ಕೊನೆಗೆ ಮನೆಯ ತೊಲೆಯಾಯಿತು. ಆದರೆ, ನೂರಾರು ವರುಷ ಆಳ್ವಿಕೆ ಮಾಡಿದ ರಾಜ ಮಣ್ಣಾದ ಈ ವಾಕ್ಯವನ್ನು ಕವಿ ಹೃದಯ ಮಾತ್ರ ಹೇಳಲು ಸಾಧ್ಯವೆಂದು ಹೇಳಿದರು.

ನಗರ ಉಪ ಪೊಲೀಸ್ ಆಯುಕ್ತ ಸಿದ್ದರಾಜು ಮಾತನಾಡಿ, ಇಂದಿನ ಪೀಳಿಗೆಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ತಳ ಸಮುದಾಯಗಳು ಶಿಕ್ಷಣ ಪಡೆಯುತ್ತಿರುವುದರಿಂದ ಬುಡಕಟ್ಟು ಸಮುದಾಯಗಳ ಕಾವ್ಯಗಳು ಮಹಾಕಾವ್ಯ ಆಗುತ್ತಿವೆ. ಅಲ್ಲದೆ, ಶೋಷಿತ ಸಮುದಾಯ ಸಾವಿರಾರು ವರ್ಷಗಳಿಂದ ಸಾಧಿಸದನ್ನೂ, ಸ್ವಾತಂತ್ರ ಬಂದ ಮೇಲೆ ಸಾಧಿಸುತ್ತಿದ್ದಾರೆ ಎಂದರೆ ಶಿಕ್ಷಣವೇ ಇದಕ್ಕೆಲ್ಲ ಕಾರಣ ಎಂದು ತಿಳಿಸಿದರು.

ಇದೇ ವೇಳೆ ವಿಶೇಷ ಪೊಲೀಸ್ ಕವಿಗೋಷ್ಠಿ ನಡೆಯಿತು. ಕನ್ನಡ ಆದರ್ಶ ದಂಪತಿ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ, ಉಪ ಪೊಲೀಸ್ ಆಯುಕ್ತ ಸಿದ್ದರಾಜು ಮತ್ತು ಲೇಖಕ ಕೆ.ಎಂ.ಶೈಲೇಜ್ ಉಪಸ್ಥಿತರಿದ್ದರು.

ದೇಶವು ಸುಂದರವಾದ ಸಂವಿಧಾನವನ್ನು ಕೈಲಿಟ್ಟುಕೊಂಡಿದೆಯೇ ಹೊರತು, ಉತ್ತಮ ಆಡಳಿತದ ಬಗ್ಗೆ ಚಿಂತಿಸುತ್ತಿಲ್ಲ.

-ಸಿದ್ದರಾಜು ಉಪ ಪೊಲೀಸ್ ಆಯುಕ್ತ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X