ಚೆಕ್ಬೌನ್ಸ್: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಮಲ್ಪೆ, ಫೆ.18: ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಮಲ್ಪೆ ಪೊಲೀಸರು ಫೆ.18ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮಲ್ಪೆ ವಿಷ್ಣು ಮೂರ್ತಿ ನಗರದ ರೋಷನ್ ಸಂದೀಪ ಜತ್ತನ್ ಬಂಧಿತ ಆರೋಪಿ. ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿರುವ ಈತ ಪೊಲೀಸ ರಿಗೂ ಸಿಗದೇ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ಈತನಿಗೆ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ವಾರೆಂಟ್ ಜಾರಿಗೋಳಿಸಿತ್ತು.
ಮಲ್ಪೆ ವಿಷ್ಣು ಮೂರ್ತಿ ನಗರದ ರೋಷನ್ ಸಂದೀಪ ಜತ್ತನ್ ಬಂಧಿತ ಆರೋಪಿ. ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿರುವ ಈತ ಪೊಲೀಸ ರಿಗೂ ಸಿಗದೇ ನ್ಯಾಯಾಲಯಕ್ಕೂ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ಈತನಿಗೆ ನ್ಯಾಯಾಲಯವು ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ವಾರೆಂಟ್ ಜಾರಿಗೋಳಿಸಿತ್ತು. ಇಂದು ಖಚಿತ ಮಾಹಿತಿಯಂತೆ ಆರೋಪಿಯನ್ನು ಬಂಧಿಸಿದ ಮಲ್ಪೆ ಪೊಲೀಸರು, ಆತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯವು ಆತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.