ವೈಎಸ್ಆರ್ಗೆ ಸೇರಿದ ಮತ್ತೋರ್ವ ಟಿಡಿಪಿ ಸಂಸದ
ಹೈದರಾಬಾದ್, ಫೆ. 18: ತೆಲುಗುದೇಶಂ ಪಕ್ಷದ ಅಮಲಾಪುರಂ ಕ್ಷೇತ್ರದ ಲೋಕಸಭಾ ಸದಸ್ಯ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ ಹಾಗೂ ಪ್ರಮುಖ ಪ್ರತಿಪಕ್ಷವಾದ ವೈಎಸ್ಆರ್ ಕಾಂಗ್ರೆಸ್ಗೆ ಸೇರಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂ ಕ್ಷೇತ್ರ ಪ್ರತಿನಿಧಿಸುತ್ತಿರುವ ಪಾಂಡುಲು ರವೀಂದ್ರ ಬಾಬು ವೈಎಸ್ಆರ್ಸಿ ಅಧ್ಯಕ್ಷ ವೈ.ಎಸ್. ಜಗನ್ಮೋಹನ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ ಹಾಗೂ ಪಕ್ಷಕ್ಕೆ ಔಪಚಾರಿಕವಾಗಿ ಸೇರಿದ್ದಾರೆ. ಕಳೆದ ವಾರ ಅನಕಪಲ್ಲಿ ಸಂಸದ ಎಂ. ಶ್ರೀನಿವಾಸ ರಾವ್ ಸೇರಿದ ಬಳಿಕ ವೈಸಿಆರ್ಸಿಗೆ ಸೇರುತ್ತಿರುವ ಟಿಡಿಪಿಯ ಎರಡನೇ ಸಂಸದ ಪಾಂಡುಲು ರವೀಂದ್ರ ಬಾಬು. ಜಗನ್ಮೋಹನ ರೆಡ್ಡಿ ನೇತೃತ್ವದ ಪಕ್ಷ ಸೇರಲು ಕಳೆದ ವಾರ ಚಿರಾಲ ಶಾಸಕ ಅಮಾಂಚಿ ಕೃಷ್ಣ ಮೋಹನ್ ಕಳೆದ ವಾರ ಟಿಡಿಡಿಪಿಗೆ ರಾಜೀನಾಮೆ ನೀಡಿದ್ದರು. ಕೇಂದ್ರ ಸರಕಾರದ ಮಾಜಿ ಅಧಿಕಾರಿಯಾಗಿದ್ದ ರವೀಂದ್ರ ಬಾಬು 2014ರಲ್ಲಿ ಮೊದಲ ಭಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
Next Story