ಹುತಾತ್ಮ ಯೋಧರಿಗೆ ಜಿಲ್ಲಾ ಇಂಟೆರಿಯರ್ ಕಾಂಟ್ರಾಕ್ಟರ್ಸ್ ಅಸೋಶಿಯೇಶನ್ ಶ್ರದ್ಧಾಂಜಲಿ
ಮಂಗಳೂರು, ಫೆ. 19: ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗಾಗಿ ದ.ಕ. ಜಿಲ್ಲಾ ಇಂಟೆರಿಯರ್ ಕಾಂಟ್ರಾಕ್ಟರ್ಸ್ ಅಸೋಶಿಯೇಶನ್ನ ಸದಸ್ಯರು ನಿಧಿ ಸಂಗ್ರಹಿಸಿದರು.
ನಗರದ ಕದ್ರಿಯಲ್ಲಿನ ಯೋಧರ ಸ್ಮಾರಕದ ಬಳಿ ಸಮಾವೇಶಗೊಂಡ ಜಿಲ್ಲಾ ಇಂಟೆರಿಯರ್ ಕಾಂಟ್ರಾಕ್ಟರ್ಸ್ ಅಸೋಶಿಯೇಶನ್ನ ಸದಸ್ಯರು ಒಟ್ಟು 60,000 ರೂ.ನ್ನು ಸೈನಿಕರ ಕುಟುಂಬಗಳಿಗೆ ಸಹಾಯವಾಗಲೆಂದು ನಿಧಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಇಝಾ ಬಜಾಲ್ (ರಿಯಾಝ್), ಫಯಾಝ್ ಬಜಾಲ್, ಹೈಕೋರ್ಟ್ ನ್ಯಾಯವಾದಿ ಚಿನ್ಮಯ ರಘುನಾಥ, ದ.ಕ. ಜಿಲ್ಲಾ ಇಂಟೆರಿಯರ್ ಕಾಂಟ್ರಾಕ್ಟರ್ಸ್ ಅಸೋಶಿಯೇಶನ್ನ ಅಧ್ಯಕ್ಷ ಅಶೋಕ್ ಶರ್ಮಾ, ಉಪಾಧ್ಯಕ್ಷ ಅವದೇಶ್ ಶರ್ಮಾ ಯಾದವ, ಜಿತೇಂದ್ರಕುಮಾರ, ಕಾರ್ಯದರ್ಶಿ ಸಂಜೀವನ್ ವಿಶ್ವಕರ್ಮ, ಜಂಟಿ ಕಾರ್ಯದರ್ಶಿ ಜಗರೂಪ್ ಸಿಂಗ್(ಜೆ.ಪಿ.ಸಿಂಗ್), ಅಸೋಶಿಯೇಶನ್ನ ಸಮಿತಿ ಸದಸ್ಯರಾದ ದಿನೇಶ್, ಪ್ರೇಮ್ ಶಂಕರ್ ಶರ್ಮಾ, ಬ್ರಿಜೇಶ್, ಭರತ ಶರ್ಮಾ, ರಮೇಶ್ ಯಾದವ, ಪೆಹಲಾದ್ ಯಾದವ್, ಪ್ರಮೋದ್ ಗುಪ್ತಾ, ಸದಾನಂದ ಗುಪ್ತಾ, ರಾಜು (ಶಾಫಿ), ಮೆಂಬುಲಾಲ್, ಪಪ್ಪು ಯಾದವ್, ಮುಖೇಶ್ ಜಾಂಗಿಡ್, ಜಿತೇಂದ್ರಕುಮಾರ್, ರೋಹಿತ್, ಕಿಶೋರ್ ಜಾಂಗಿಡ್, ರಮೇಶ್ ಜಾಂಗಿಡ್, ಪ್ರಹ್ಲಾದ್ ಜಿ. ಸುತಾರ್ ಮತ್ತಿತರರು ಉಪಸ್ಥಿತರಿದ್ದರು.