ಸೇತುವೆಯಿಂದ ಕೆಳಗುರುಳಿದ ಕಾರು: ಅಪಾಯದಿಂದ ಪಾರಾದ ಪ್ರಯಾಣಿಕರು
ಸೋಮವಾರಪೇಟೆ,ಫೆ.20: ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ, ಐಗೂರು-ಕಬ್ಬಿಣ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳ ಜಿಗಿದು, ಅದೃಷ್ಟವಶಾತ್ ಯಾವದೇ ಅಪಾಯಗಳಿಲ್ಲದೇ ಪಾರಾಗಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಪಟ್ಟಣ ಸಮೀಪದ ಆಲೇಕಟ್ಟೆ ನಿವಾಸಿ ಪ್ರೇಮಾ ಎಂಬವರು ಚಲಿಸುತ್ತಿದ್ದ ಕಾರು ಕಬ್ಬಿಣ ಸೇತುವೆ ಬಳಿಯಲ್ಲಿ ತೆರಳುವ ಸಂದರ್ಭ, ಎದುರಿನಿಂದ ಪಿಕ್ಅಪ್ ಆಗಮಿಸಿದ್ದು, ಆ ವಾಹನಕ್ಕೆ ಜಾಗ ಬಿಡಲು ಮುಂದಾದ ಸಂದರ್ಭ ಕಾರು ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಸೇತುವೆಯಿಂದ ಕೆಳಭಾಗಕ್ಕೆ ಉರುಳಿದೆ ಎನ್ನಲಾಗಿದೆ.
ಕೆಳಭಾಗದ ಕಲ್ಲುಬಂಡೆಯ ಮೇಲೆ ಕಾರು ನಿಂತಿದ್ದು, ಚಾಲಕಿ ಸೇರಿದಂತೆ ಕಾರಿನೊಳಗಿದ್ದ ಇತರ ಇಬ್ಬರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story