ಮಂಗಳೂರು: ಸರಕಾರಿ ಬಸ್ಗೆ ಕಲ್ಲೆಸೆತ
ಮಂಗಳೂರು, ಫೆ.20: ನಗರದ ಬೆಂದೂರ್ವೆಲ್ ಬಳಿ ಕಾರಿಗೆ ಢಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್ಗೆ ಸಾರ್ವಜನಿಕರು ಕಲ್ಲೆಸೆದು ಹಾನಿ ಮಾಡಿದ್ದು, ಈ ಬಗ್ಗೆ ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಹಾಗೂ ಕಾರು ಪಂಪ್ವೆಲ್ ಕಡೆಯಿಂದ ಮಂಗಳವಾರ ರಾತ್ರಿ ಬೆಂದೂರ್ವೆಲ್ ಕಡೆಗೆ ಸಂಚರಿಸುತ್ತಿದ್ದವು. ಕರಾವಳಿ ವೃತ್ತದ ಬಳಿ ಬರುತ್ತಿದ್ದಂತೆ ಬಸ್ ಎಡಬದಿಗೆ ಚಲಿಸಿದೆ. ಈ ಸಂದರ್ಭ ಕಾರಿಗೆ ಢಿಕ್ಕಿಯಾಗಿದೆ.
ಈ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಸ್ಗೆ ಕಲ್ಲೆಸೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕದ್ರಿ ಸಂಚಾರ ಪೊಲೀಸರು ಸಾರ್ವಜನಿಕರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಲ್ಲೆಸೆತದಿಂದ ಬಸ್ನ ಗಾಜು ಹಾನಿಗೊಳಗಾಗಿದೆ. ಎರಡೂ ವಾಹನಗಳನ್ನು ವಶಪಡಿಸಿಕೊಂಡು ಇತ್ತಂಡದವರು ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story