ಕಾಶಿಪಟ್ಣ : ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಅನುಸ್ಮರಣೆ, ದುಆ ಮಜ್ಲಿಸ್
ಕಾಶಿಪಟ್ಣ, ಫೆ. 21: ದಾರುನ್ನೂರು ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಕೇಂದ್ರ ಸಮಿತಿಯ ಅಧೀನದಲ್ಲಿ ಮಂಗಳೂರು ಖಾಝಿ, ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರೂ ಆಗಿದ್ದ ಶೈಖುನಾ ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಅನುಸ್ಮರಣೆ ಮತ್ತು ದುಆ ಮಜ್ಲಿಸ್ ಕಾರ್ಯಕ್ರಮ ದಾರುನ್ನೂರ್ ಕ್ಯಾಂಪಸ್ ಕಾಶಿಪಟ್ಣದಲ್ಲಿ ಮಂಗಳವಾರ ನಡೆಯಿತು.
ದ.ಕ. ಜಿಲ್ಲಾ ಖಾಝಿ, ದಾರುನ್ನೂರ್ ಕೇಂದ್ರ ಸಮತಿ ಅಧ್ಯಕ್ಷರೂ ಆದ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉಸ್ತಾದ್ ಮುಈನುದ್ದೀನ್ ಚಿಶ್ತಿ ಹುದವಿ ಮತ್ತು ಉಸ್ತಾದ್ ಶಬೀರ್ ಫೈಝಿ ಉಪನ್ಯಾಸ ನೀಡಿದರು. ದಾರುನ್ನೂರ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಮಂಗಳೂರು, ಉಪಾಧ್ಯಕ್ಷರುಗಳಾದ ಹಾಜಿ ಅಬ್ದುಲ್ ರಝಾಕ್ ಬಿ.ಸಿ ರೋಡ್, ಫಕೀರಬ್ಬ ಮಾಸ್ಟರ್ ಫ್ಲವರ್ಸ್, ಕಾರ್ಯದರ್ಶಿ ಅಬ್ದುಸ್ಸಮದ್ ಹಾಜಿ, ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ಮುಲಾರಪಟ್ಣ ಮತ್ತು ಸಂಸ್ಥೆಯ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಉಸ್ತಾದ್ ಹುಸೈನ್ ರಹ್ಮಾನಿ ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಉಸ್ತಾದ್ ತ್ವಾಹಾ ಹುದವಿ ವಂದಿಸಿದರು.