ಗೋಣಿಕೊಪ್ಪ: ಕಳವು ಪ್ರಕರಣದ ಮೂವರು ಆರೋಪಿಗಳು ಸೆರೆ
ಮಡಿಕೇರಿ ಫೆ. 22 : ಮೂವರು ಅಂತರರಾಜ್ಯ ಕಳವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗೋಣಿಕೊಪ್ಪ ಪೊಲೀಸರು ಆರೋಪಿಗಳಿಂದ ಎರಡು ಬೈಕ್ ಹಾಗೂ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಕಣ್ಣೂರು ಜಿಲ್ಲೆ ಇರಟಿ ತಾಲ್ಲೂಕಿನ ಮಂಡವ ಪರಂಬು ಗ್ರಾಮದ ಟಿ.ಎ.ಸಲೀಂ (39), ಕಣ್ಣೂರು ಜಿಲ್ಲೆ ಮಟ್ಟನೂರಿನ ನಡುವ ಕಾಡು ಗ್ರಾಮದ ಕೆ.ಅನ್ಸಾರ್ (24) ಹಾಗೂ ವಿರಾಜಪೇಟೆ ತಾಲ್ಲೂಕಿನ ನೆಹರು ನಗರದ ಅಝೀಝ್ ಬಂಧಿತ ಆರೋಪಿಗಳು.
Next Story