ಕುವೈತ್ ಕೆಸಿಎಫ್ ಡೇ, ಪ್ರತಿಭೊತ್ಸವ-2019: ಸೌತ್ ಝೋನ್ ಚ್ಯಾಂಪಿಯನ್
ಕಬದ್, ಫೆ. 25: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ 'ಕೆಸಿಎಫ್ ಡೇ ಮತ್ತು ಪ್ರತಿಭೊತ್ಸವ 2019' ಕಾರ್ಯಕ್ರಮ ಕುವೈತಿನ ಕಬದ್ ನಲ್ಲಿ ಅಸೈಯದ್ ಸಾದಿಕ್ ತಂಙಳ್ ಅವರ ದುವಾದೊಂದಿಗೆ ಆರಂಭವಾಯಿತು.
ಯೂಸುಫ್ ಅಬ್ಬಾಸ್ ಮಂಚಿಕಲ್ ಕಿರಾಅತ್ ಪಠಿಸಿದರು. ಕೆಸಿಎಫ್ ಮಹಬುಲ ಸೆಕ್ಟರ್ ಅಧ್ಯಕ್ಷ ಅಹ್ಮದ್ ಬಾವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಉಲಮಾ ನಾಯಕರಾದ ಉಮರ್ ಝುಹ್ರಿ ಉಸ್ತಾದ್ ಉದ್ಘಾಟನೆ ಮಾಡಿದರು.
ಕುವೈತ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ವೇಣೂರ್ ಸ್ವಾಗತಿಸಿದರು. ಕೆಸಿಎಫ್ ಅಂತರ್ ರಾಷ್ಟ್ರೀಯ ಕೌನ್ಸಿಲರ್ ಯಾಕೂಬ್ ಕಾರ್ಕಳ ಕೆಸಿಎಫ್ ಡೇ ಮಹತ್ವ ತಿಳಿಸಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಾದುಷ ಸಖಾಫಿ ನೇತೃತ್ವದಲ್ಲಿ ಪ್ರತಿಭೋತ್ಸವ ನಡೆಸಲಾಯಿತು.
ಎಸ್ ವೈ ಎಸ್ ಬೆಂಗಳೂರು ಜಿಲ್ಲಾ ಅಧ್ಯಕ್ಷ ಬಶೀರ್ ಸಅದಿ ಉಸ್ತಾದ್ ನೇತೃತ್ವದಲ್ಲಿ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರದ ಬಗ್ಗೆ ತರಗತಿ ನೀಡಲಾಯಿತು.
ನಂತರ ಆಟೋಟ ಸ್ಫರ್ದೆಗಳು ನಡೆಯಿತು. ಮಕ್ಕಳಿಗೆ, ಮಹಿಳೆಯರಿಗೆ ಪ್ರತೇಕವಾಗಿ ವಿವಿಧ ರೀತಿಯ ಕಾರ್ಯಕ್ರಮ ನಡೆಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಅಸೈಯದ್ ಹಸನ್ ಅಸ್ಸಖಾಫ್ ತಂಙಳ್ ನೇತೃತ್ವದಲ್ಲಿ ಬಾದುಷ ಸಖಾಫಿ ಅಧ್ಯಕ್ಷತೆಯಲ್ಲಿ, ಕೆಸಿಎಫ್ ಅಂತರ್ ರಾಷ್ಟ್ರಿಯ ಆಡಳಿತ ವಿಭಾಗದ ಕಾರ್ಯದರ್ಶಿ ಹುಸೈನ್ ಎರ್ಮಾಡ್ ಉದ್ಘಾಟನೆಯೊಂದಿಗೆ ಸಮಾರೋಪ ಸಮಾರಂಭ ನಡೆಯಿತು.
ವೇದಿಕೆಯಲ್ಲಿ ಜಬ್ಬಾರ್ ಮದನಿ, ಇಬ್ರಾಹಿಮ್ ಸಅದಿ, ಯೂಸುಫ್ ಮಂಚಕಲ್ ಹಾಗೂ ಕೆಸಿಎಫ್ ಕುವೈತ್ ರಾಷ್ಟ್ರೀಯ ನಾಯಕರು, ಝೋನ್ ನಾಯಕರು ಉಪಸ್ಥಿತರಿದ್ದರು.
ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು. ಕೆಸಿಎಫ್ ಕುವೈತ್ ಪ್ರತಿಭೊತ್ಸವ ಚ್ಯಾಂಪಿಯನ್ ಟ್ರೋಫಿ ಕುವೈತ್ ಸೌತ್ ಝೋನ್ ತನ್ನದಾಗಿಸಿಕೊಂಡಿತು. ಎರಡು ದಿನಗಳ ಕಾಲ ಊಟ ಉಪಾಚಾರ ಮಾಡಿದ ಅಹ್ಮದ್ ಬಾವ ರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಸೆಯ್ಯದ್ ಹಸನ್ ಅಸ್ಸಖಾಫ್ ತಂಙಳ್ ರವರ ಭಕ್ತಿ ನಿರ್ಭಯ ದುವಾದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಕೆಸಿಎಫ್ ಕುವೈತ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರ್ ಕಾರ್ಯಕ್ರಮ ನಿರೂಪಿಸಿದರು. ಸೌತ್ ಝೋನ್ ಕನ್ವೀನರ್ ಹಸೈನಾರ್ ಮೊಂಟೆಪದವು ವಂದಿಸಿದರು.