ಆಸ್ಪತ್ರೆಯಲ್ಲಿ ಅಭಿನಂದನ್ ಭೇಟಿಯಾದ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ, ಮಾ.2: ಪಾಕಿಸ್ತಾನದ ವಶದಲ್ಲಿದ್ದ ವಾಯುಪಡೆ ಪೈಲಟ್ ಅಭಿನಂದನ್ ವರ್ಧಮಾನ್ ಶುಕ್ರವಾರ ರಾತ್ರಿ ಭಾರತಕ್ಕೆ ಮರಳಿ ಬಂದ ಬಳಿಕ ಅವರನ್ನು ಶನಿವಾರ ದಿಲ್ಲಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂದರ್ಭ ಆಸ್ಪತ್ರೆಗೆ ಆಗಮಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಅಭಿನಂದನ್ ದಾಖಲಾಗಿದ್ದ ವಾರ್ಡ್ಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ರಕ್ಷಣಾ ಸಚಿವೆಯ ಜತೆ ವಾಯುಪಡೆಯ ಹಿರಿಯ ಅಧಿಕಾರಿಗಳೂ ಇದ್ದರು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ ಅಭಿನಂದನ್ ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾರನ್ನು ಭೇಟಿ ಮಾಡಿ, ಪಾಕ್ನಲ್ಲಿ ಬಂಧನದಲ್ಲಿದ್ದ ಸಂದರ್ಭದ ಬಗ್ಗೆ ವಿವರಿಸಿದರು. ಅಲ್ಲದೆ ಕುಟುಂಬದ ಸದಸ್ಯರೂ ಅಭಿನಂದನ್ರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.
Next Story