Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಕೆ ‘ಸರಸಿ’ಯಾಗಲು ಬಂದಿಲ್ಲ...

ಆಕೆ ‘ಸರಸಿ’ಯಾಗಲು ಬಂದಿಲ್ಲ...

ವಿಶ್ವ ಮಹಿಳಾ ದಿನ

ಕಸ್ತೂರಿಕಸ್ತೂರಿ8 March 2019 2:09 PM IST
share
ಆಕೆ ‘ಸರಸಿ’ಯಾಗಲು ಬಂದಿಲ್ಲ...

 ‘‘ಸಿನೆಮಾ ನಟಿಯರ ಮೀಟೂಗೆ ಎಷ್ಟೆಲ್ಲಾ ಪ್ರಚಾರ, ಸಹಾನುಭೂತಿ ಸಿಕ್ಕಿತು. ನಮ್ಮನ್ನು ಕೇಳೋರ್ಯಾರು?’’ ಇದು ನನ್ನ ಪರಿಚಯದ ಕೇರಳಮೂಲದ ನರ್ಸ್ ಒಬ್ಬರ ದೂರು. ಅವರು ಖಾಸಗಿ ಆಸ್ಪತ್ರೆಯಲ್ಲಿ ದುಡಿಯುತ್ತಾರೆ.

‘‘ಸಿನೆಮಾ ನಟಿಯರು ಅತ್ಯಲ್ಪಕಾಲದಲ್ಲಿ ಲಕ್ಷ ಲಕ್ಷ ಹಣ ನೋಡುತ್ತಾರೆ. ಇವತ್ತು ತನುಶ್ರೀ ಸಿನೆಮಾ- ಭಾರತ ಎರಡನ್ನೂ ಬಿಟ್ಟುಹೋದರು. ಶ್ರುತಿಗೂ ಅದು ಸಾಧ್ಯವಿದೆ. ಆದರೆ ನನ್ನಂಥವರು ಕೆಲಸ ಬಿಟ್ಟು ಹೋಗೋದೆಲ್ಲಿಗೆ? ಮನೆಯವರ ಬಳಿ ಹೇಳಿಕೊಂಡರೆ ‘‘ಕೆಲಸ ಬಿಡು, ಇಲ್ಲಾ ಹೇಗಾದರೂ ಅಡ್ಜಸ್ಟ್ ಮಾಡಿಕೊಂಡು ಹೋಗು’’ ಅಂತಾರೆ. ಮಾಧ್ಯಮಗಳು ಯಾವತ್ತೂ ಗಂಡಸರ ಅದರಲ್ಲೂ ಶ್ರೀಮಂತರ ಪರ’’ ಎಂದು ನೊಂದು ಹೇಳಿದ ಆ ಹುಡುಗಿ ‘‘ಇಲ್ಲಿ ರೋಗಿಗಳ ಸೇವೆ, ಮನೆಯಲ್ಲಿ ರೋಗ ಇಲ್ಲದವರ ಸೇವೆ ಮಾಡುತ್ತಾ ಸವೆದು ಹೋಗಿದ್ದೇವೆ. ನಾವು ಹೇಗೆ ಕಾಣ್ತೇವೆ ಇವರಿಗೆ?’’ ಎಂದು ಸಂಕಟ ಕಕ್ಕಿಕೊಂಡರು.

ಆಕೆ ಹೇಳಿದ ‘ಇವರು’ ಎಂಬುದು ರೋಗಿಗಳ ಕಡೆಯವರಿಗೆ, ವೈದ್ಯರಿಗೆ ಆಸ್ಪತ್ರೆ ಆಡಳಿತ ವರ್ಗದ ಕೆಲವರು, ಅಷ್ಟೇಕೆ ಕೆಲವು ಸಲ ರೋಗಿಗಳಿಗೂ ಅನ್ವಯಿಸುತ್ತದೆ. ಅನೇಕ ಮಹಿಳಾ ವೈದ್ಯೆಯರೂ ನರ್ಸ್‌ಗಳನ್ನು ಕಸದಂತೆ ಕಾಣುತ್ತಾರೆ ಮತ್ತು ರೋಗಿ ಕಡೆಯ ಮಹಿಳೆಯರು ಕೂಡಾ ಅವರು ನಮ್ಮಂತಲ್ಲ ಎಂಬ ಪ್ರತ್ಯೇಕ ದೃಷ್ಟಿ ಕೋನದಿಂದ ಕಾಣುತ್ತಾರೆ ಎಂದು ಆಕೆಯ ಸಹೋದ್ಯೋಗಿಯೂ ದನಿಗೂಡಿಸಿದಳು.

ಸ್ಥಳೀಯ ನರ್ಸ್‌ಗಳ ಬಗ್ಗೆ ತುಸು ಹಿಂಜರಿಕೆ ಇದೆ. ನಮ್ಮದೇ ನೆಲದ ಹೆಣ್ಣುಮಕ್ಕಳು ಎಂಬ ಅಭಿಮಾನ ಅಲ್ಲ ಅದು. ಅವರ ಕುಟುಂಬ, ಬಂಧುಗಳು ಇಲ್ಲೇ ಇರುವುದರಿಂದ ದೂರು ಹೇಳಿ ಕರೆತಂದರೆ ಅಚ್ಚಗನ್ನಡದಲ್ಲಿ ಬೈದು ಜನ್ಮ ಜಾಲಾಡಿದರೆ ಏನುಗತಿ ಎಂಬ ಭಯ ಒಂಚೂರು ಮೆತ್ತಿಕೊಂಡಿದೆ. ಬೇರೆ ರಾಜ್ಯದವರಾದರೆ ಕೇಳುವವರೇ ಇಲ್ಲ.

 ಇಷ್ಟಕ್ಕೂ ಬೇರೆಕಡೆಯ ನರ್ಸ್‌ಗಳೆಲ್ಲಾ ಮೋಹಿನಿಯರಲ್ಲ. ಚೆಲ್ಲು ಚೆಲ್ಲಾಗಿ ಆಡೋದೊ ಇಲ್ಲ. ಹಾಗಿದ್ದರೂ ಆಸ್ಪತ್ರೆಗೆ ಬಂದ ಬಹಳಷ್ಟು ಗಂಡಸರು ಅವರನ್ನು ಹಸಿದ ತೋಳಗಳಂತೆ ಗುರಾಯಿಸುವುದು, ದ್ವಂದ್ವಾರ್ಥದ ಮಾತುಗಳು, ನಗು, ಅನಪೇಕ್ಷಿತ ಸ್ಪರ್ಶಗಳಿಂದ ಗೋಳು ಹುಯ್ದುಕೊಳ್ಳುವುದು ಸರ್ವೇಸಾಮಾನ್ಯ. 

ಆದರೆ ನನ್ನ ಪರಿಚಯದ ಇಬ್ಬರು ಯುವ ನರ್ಸ್‌ಗಳಂತೆ ಎಲ್ಲರೂ ಬಾಯ್ಬಿಡುವುದಿಲ್ಲ. ‘‘ಅಂತದೇನೂ ಇಲ್ಲ. ನಾವು ಸರಿಯಾಗಿದ್ರೆ ಆಯ್ತು’’ ಎಂದು ಮೌನವಾಗುತ್ತಾರೆ. ದೌರ್ಭಾಗ್ಯವೆಂದರೆ ಕೆಲವು ಸ್ಥಳೀಯ ಸಿಸ್ಟರ್‌ಗಳು ಸಹ ಬೇರೆ ರಾಜ್ಯದಿಂದ ಬಂದವರನ್ನು ನಿರಾಧಾರವಾಗಿ ‘ಅವರು ಸ್ವಲ್ಪ ಹಂಗಂಗೇ’ ಎಂದು ತೀರ್ಮಾನಿಸುವುದುಂಟು.

ಇದು ದಶಕಗಳಿಂದ ಚಾಲ್ತಿಯಲ್ಲಿರುವ ಹೀನ ಚಾಳಿ. ಕನ್ನಡದ ಅನೇಕ ಕಾದಂಬರಿಕಾರರು ಸಿನೆಮಾ ನಿರ್ದೇಶಕರು ನರ್ಸ್ ಎಂದರೆ ಚೆಲ್ಲು ಸ್ವಭಾವದ ಅಷ್ಟೇನೂ ಮಡಿವಂತಿಕೆ ಇಲ್ಲದವರು ಎಂಬಂತೆ ಚಿತ್ರಿಸುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ನರ್ಸ್ ಆಗುವುದಕ್ಕೆ ಸಿನೆಮಾ ನಟಿಯರಾಗುವುದಕ್ಕೆ ಇದ್ದಷ್ಟೇ ವಿರೋಧ ಇತ್ತು. ಮೇಲ್ಜಾತಿಯ ನರ್ಸ್‌ಗಳು ಕೆಳಜಾತಿ ರೋಗಿಗಳನ್ನು ಮುಟ್ಟಬೇಕಲ್ಲ! ಅದೇ ವೈದ್ಯರಾದರೆ ಅಂತಸ್ತು ಸಂಪಾದನೆಗಳಿಂದ ಅವರ ಖದರ್ರೇ ಬೇರೆಯಷ್ಟೆ!.

ನರ್ಸ್ ವೃತ್ತಿ, ವೈದ್ಯರ ವೃತ್ತಿಯಷ್ಟೇ ಪಾವಿತ್ರ ಘನತೆಗಳಿಂದ ಕೂಡಿರುವುದು. ಯುದ್ಧ ಕೈದಿಗಳಿಗಾಗಿ ನರಳುತ್ತಿದ್ದವರ ಸೇವೆಗೆ ಪ್ರಾಣಪಣವಾಗಿಟ್ಟು ದುಡಿದ ದೀಪದ ಮಹಿಳೆ ಫ್ಲಾರೆನ್ಸ್ ನೈಟಿಂಗೇಲ್ ಜಗತ್ತಿಗೇ ಪ್ರೇಮದ ಬೆಳಕು ಚೆಲ್ಲಿದವರು. ಹಾಗಂತ ನರ್ಸ್‌ಗಳೆಲ್ಲಾ ಪ್ರೇಮ ಸ್ವರೂಪಿಗಳಲ್ಲ. ಬಹಳಷ್ಟು ನರ್ಸ್‌ಗಳು ಬಡರೋಗಿಗಳನ್ನು ಉಪಚರಿಸುವಾಗ ಸಿಡಿದು ಬೀಳುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಮೇಲ್ ಫೀಮೇಲ್ ನರ್ಸ್‌ಗಳ ಬ್ಲಾಕ್‌ಮೇಲ್ ಅನುಭವ ಇಲ್ಲದ ರೋಗಿಗಳು ಇರಲಾರರು. ಹೆರಿಗೆ ನೋವಿನಿಂದ ನರಳುತ್ತಿದ್ದ ಬಡಗರ್ಭಿಣಿಯರನ್ನೂ ಗದರಿಸುವ ತಾಟಕಿ ನರ್ಸ್‌ಗಳನ್ನು ಚಿಕ್ಕಂದಿನಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ. ಮನೆ ಒಳಗಿನ ಹೊರಗಿನ ಜಂಜಾಟ ಅವರನ್ನು ಒರಟಾಗಿಸುತ್ತದೆ.

ನರ್ಸ್‌ಗಳಲ್ಲಿ ಯಾರೂ ಪ್ರಚೋದಕ ಉಡುಗೆ ಧರಿಸುವುದಿಲ್ಲ. ಅವರು ಆಸ್ಪತ್ರೆಗೆ ಕಂಡ ಕಂಡವರೊಂದಿಗೆ ಸರಸವಾಡಲು ಬರುವುದಿಲ್ಲ. ಅನ್ಯಾಯದ ವಿರುದ್ಧ ದನಿ ಎತ್ತಿದ ಅರುಣಾ ಶಾನ್‌ಭಾಗ್‌ರಿಗೆ ಯಾವ ಗತಿ ಬಂತೆಂಬುದನ್ನು ದೇಶ ಕಂಡಿದೆ. ನರ್ಸ್‌ಗಳು ತಮ್ಮನ್ನು ‘ಸುಲಭದ ತುತ್ತು’ಗಳಂತೆ ಕಾಣುವ ರೋಗಿ, ವೈದ್ಯ, ಸಿಬ್ಬಂದಿ ಯಾರೇ ಆಗಿದ್ದರೂ ಅವರಿಗೆ ಸೂಕ್ತ ಉಪಚಾರ ನೀಡುವ ಧೈರ್ಯ ಬೆಳಸಿಕೊಳ್ಳಬೇಕು.

ಆಸ್ಪತ್ರೆ ಸಿನೆಮಾ ಥಿಯೇಟರ್ ಅಲ್ಲ. ಸಾವು ಬದುಕುಗಳ ರಣರಂಗ, ಇಲ್ಲಿ ವೈದ್ಯರ ಅಂತಸ್ತಿಗೆ ಮಾತ್ರ ಬೆಲೆ ಕೊಡುತ್ತಾ, ನರ್ಸ್‌ಗಳನ್ನು ಬೆಲೆವೆಣ್ಣಿನಂತೆ ಕಾಣುವ ರೋಗಕ್ಕೆ ನರ್ಸ್‌ಗಳು ಸಂಘಟಿತರಾಗಿ ಕಾನೂನಿನ ಅಸ್ತ್ರ ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಮಹಿಳಾ ವೈದ್ಯೆಯರು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕು.

ಹಾಗೆಯೇ ನರ್ಸಮ್ಮಗಳು ನಮ್ಮಂಥ ವಯಸ್ಸಾದ ಕೆಳವರ್ಗದ ಮಹಿಳೆಯರು ಆಸ್ಪತ್ರೆಗೆ ಹೋದಾಗ ಕನಿಷ್ಠ ಮಾನವತ್ವದಿಂದ ನಡೆದುಕೊಳ್ಳುವಷ್ಟು ಸಹನಶೀಲೆಯರಾಗಲಿ.

share
ಕಸ್ತೂರಿ
ಕಸ್ತೂರಿ
Next Story
X