Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಾಲೇಜ್ ರಂಗಿನ ಜೊತೆಗೆ ಅಮಾಯಕ ಗ್ಯಾಂಗು

ಕಾಲೇಜ್ ರಂಗಿನ ಜೊತೆಗೆ ಅಮಾಯಕ ಗ್ಯಾಂಗು

ವಾರ್ತಾಭಾರತಿವಾರ್ತಾಭಾರತಿ10 March 2019 12:01 AM IST
share
ಕಾಲೇಜ್ ರಂಗಿನ ಜೊತೆಗೆ ಅಮಾಯಕ ಗ್ಯಾಂಗು

ಜಗ್ಗೇಶ್ ಪುತ್ರ ಯತಿರಾಜ್ ನಾಯಕರಾಗಿರುವ ಚಿತ್ರ ಎನ್ನುವ ಕಾರಣಕ್ಕೆ ಮನಸೆಳೆದಂಥ ಸಿನೆಮಾ ಗೋಸಿಗ್ಯಾಂಗ್. ಹೆಸರಿನಲ್ಲೇ ಏನೋ ಹುಡುಗಾಟದ ಕತೆ ಎಂಬ ಸೂಚನೆಯನ್ನು ನೀಡುವಂತಿದ್ದರೂ ಅದರಲ್ಲೇ ಒಂದು ಗಂಭೀರವಾದ ಸಮಾಚಾರ ವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.

ಅಜಯ್, ರೋಹಿತ್, ಮಂಜು ಎನ್ನುವ ಮೂರು ಮಂದಿ ಹಳ್ಳಿ ಹುಡುಗರು ಬೆಂಗಳೂರಿನ ಕಾಲೇಜ್‌ಗೆ ಬಂದಾಗ ಏನು ಘಟನೆ ನಡೆಯುತ್ತದೆ ಎನ್ನುವುದನ್ನು ಚಿತ್ರ ಸೊಗಸಾಗಿ ಹೇಳಿದೆ. ಹಳ್ಳಿಯಲ್ಲಿ ಈ ಮೂರು ಮಂದಿ ಹುಡುಗರು ಬಾಲ್ಯ ಕಾಲದಿಂದಲೇ ಮಾಡುವ ಉಪದ್ರಗಳು ಮತ್ತು ಅದರಿಂದ ರೋಸಿ ಹೋದ ಶಿಕ್ಷಕರು ಮಕ್ಕಳನ್ನು ಪುಟಗೋಸಿಯಲ್ಲಿ ನಿಲ್ಲಿಸುವುದು ಮತ್ತು ಮೇಲೆ ಈ ಮೂರು ಮಂದಿ ಹುಡುಗರ ತಂಡಕ್ಕೆ ಗೋಸಿ ಗ್ಯಾಂಗ್ ಎನ್ನುವ ಹೆಸರು ಬೀಳುವುದು ನಿರ್ದೇಶಕರು ಚಿತ್ರದ ಶೀರ್ಷಿಕೆಗೆ ನೀಡುವ ಹಿನ್ನೆಲೆಯಾಗಿರುತ್ತದೆ. ಆದರೆ ಈ ಹೆಸರನ್ನು ಇರಿಸಿಕೊಂಡು ಬೆಂಗಳೂರು ಸೇರಿದರೂ ಕೂಡ ಅಲ್ಲಿನ ವಿದ್ಯಾರ್ಥಿಗಳ ನಡುವೆ ಅಮಾಯಕರಂತೆ ಇರಬೇಕಾಗುತ್ತದೆ. ಆದರೆ ಅವರ ಅಮಾಯಕತ್ವ ಎಲ್ಲಿಯವರೆಗೆ ಕರೆದೊಯ್ಯುತ್ತದೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕಾಗುತ್ತದೆ.

ಸಿನೆಮಾದಲ್ಲಿ ಮಂಜುವಿನ ಪಾತ್ರಕ್ಕೆ ಜೀವ ತುಂಬಿದ ಕೀರ್ತಿ ಜಗ್ಗೇಶ ಪುತ್ರ ಯತಿರಾಜ್ ಅವರಿಗೆ ಸಲ್ಲುತ್ತದೆ. ಜೊತೆಗೆ ಇಬ್ಬರು ಸ್ನೇಹಿತರಲ್ಲಿ ಒಬ್ಬರಾಗಿ ಹೊಸ ಹೀರೋ ಪಾತ್ರವನ್ನು ಅಜಯ ಕಾರ್ತಿಕ್ ನಿರ್ವಹಿಸಿದ್ದಾರೆ. ಬೆಂಗಳೂರು ಕಾಲೇಜಲ್ಲಿ ಪರಿಚಯವಾದ ಮೂರು ಮಂದಿ ಹುಡುಗಿಯರು ಚಿತ್ರದ ನಾಯಕಿಯರಾಗುತ್ತಾರೆ. ಯತಿರಾಜ್‌ಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್ ಅಭಿನಯಿಸಿದ್ದಾರೆ. ಹಾಗೆ ನೋಡಿದರೆ ಚಿತ್ರದಲ್ಲಿ ಸೋನು ಸೇರಿದಂತೆ ಯಾವ ನಾಯಕಿಗೂ ಪ್ರಾಮುಖ್ಯತೆ ಇಲ್ಲ. ಆದರೆ ನಾಯಕರ ಜೋಡಿಯಾಗಿ ಆಕರ್ಷಣೆ ನೀಡುವಲ್ಲಿ ಸ್ವಲ್ಪವೂ ಹಿಂದೆ ಬಿದ್ದಿಲ್ಲ. ಒಳ್ಳೆಯ ಥೀಮ್ ಇದ್ದರೂ ಹೆಚ್ಚಿನ ಪಾತ್ರಗಳಿಗೆ ಹೊಸ ಕಲಾವಿದರನ್ನೇ ಆಯ್ಕೆ ಮಾಡಿದ್ದಾರೆ ನಿರ್ದೇಶಕ ರಾಜು ದೇವಸಂದ್ರ. ಬಹುಶಃ ಇಂಥದೊಂದು ತೀರ್ಮಾನಕ್ಕೆ ಬರು ವಲ್ಲಿ ಚಿತ್ರದ ಬಜೆಟ್ ಕೂಡ ಕಾರಣವಾಗಿದ್ದರೆ ಅಚ್ಚರಿಯಿಲ್ಲ. ಖಳನಾಗಿ ನಟಿಸಿದ ಅಪ್ಪು ವೆಂಕಟೇಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಅವರ ಸಹಾಯಕರಾಗಿ ಮಂಜು ಮಯೂರ್, ತುಂಟ ವಿದ್ಯಾರ್ಥಿಯಾಗಿ ಗಾಯಕ ಅನಿರುದ್ಧ ಮೊದಲಾದವರ ನಟನೆ ಕೂಡ ಗಮನಾರ್ಹ. ಈ ಎಲ್ಲ ಪಾತ್ರಗಳ ನಡುವೆ ಹುಡುಗರು ಡ್ರಗ್ಸ್ ಜಾಲಕ್ಕೆ ಎಷ್ಟು ಸುಲಭದಲ್ಲಿ ಬೀಳಬಲ್ಲರು ಎನ್ನುವುದನ್ನು ಮನದಟ್ಟಾಗುವ ರೀತಿಯಲ್ಲಿ ಹೇಳಿದ್ದಾರೆ ನಿರ್ದೇಶಕ ರಾಜು ದೇವಸಂದ್ರ. ಕಾಲೇಜ್ ಚಿತ್ರಗಳು ಎಂದೊಡನೆ ಅರ್ಥವಿಲ್ಲದ ಹಾಸ್ಯ ಮತ್ತು ಡಬಲ್ ಮೀನಿಂಗ್ ಸಂಭಾಷಣೆಗಳು ಎನ್ನುವುದರ ಆಚೆ ಹೀಗೂ ಒಂದು ಚಿತ್ರ ಮಾಡಬಹುದು ಎನ್ನುವುದನ್ನು ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಹಿರಿಯ ನಟ ಉಮೇಶ್, ಬ್ಯಾಂಕ್ ಜನಾರ್ದನ್ ಮೊದಲಾದವರ ಪಾತ್ರಗಳು ಅವರ ಇಮೇಜ್ ನಲ್ಲೇ ಉಳಿದುಕೊಂಡು ಬೋರ್ ಹೊಡೆಸುತ್ತವೆ. ಮಕ್ಕಳ ಬೆಳವಣಿಗೆ ಬಗ್ಗೆ ಕಾಳಜಿ ಇರುವ ಹಿರಿಯರು ಮತ್ತು ತಮಗೇ ತಿಳಿಯದಂತೆ ತಮ್ಮನ್ನು ಬಲೆಗೆ ಕೆಡವುವಂಥ ಜಾಲಗಳ ಬಗ್ಗೆ ಎಚ್ಚರಿಕೆ ವಹಿಸಬಹುದಾದ ವಿದ್ಯಾರ್ಥಿಗಳು ನೋಡಬಹುದಾದ ಚಿತ್ರ ಇದು. ಅಂಥದೊಂದು ಎಚ್ಚರಿಕೆಯ ಜೊತೆಗೆ ಆರವ್ ರಿಷಿಕ್ ಸಂಗೀತದ ಹಾಡುಗಳು ಚಿತ್ರಮಂದಿರದಿಂದ ಹೊರಗೆ ಬಂದ ಮೇಲೆಯೂ ನಮ್ಮನ್ನು ಕಾಡುತ್ತವೆ.

►ತಾರಾಗಣ: ಯತಿರಾಜ್, ಸೋನು ಪಾಟೀಲ್

►ನಿರ್ದೇಶಕ: ರಾಜು ದೇವಸಂದ್ರ

►ನಿರ್ಮಾಪಕ: ಕೆ. ಶಿವಕುಮಾರ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X