Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ‘ಹಿಂದುತ್ವದ ಸನ್ನಿ’ ಭಾರತವನ್ನು...

‘ಹಿಂದುತ್ವದ ಸನ್ನಿ’ ಭಾರತವನ್ನು ಆಕ್ರಮಿಸುತ್ತಿದೆ: ಡಾ.ಬಂಜಗೆರೆ ಜಯಪ್ರಕಾಶ್

ವಾರ್ತಾಭಾರತಿವಾರ್ತಾಭಾರತಿ10 March 2019 6:43 PM IST
share
‘ಹಿಂದುತ್ವದ ಸನ್ನಿ’ ಭಾರತವನ್ನು ಆಕ್ರಮಿಸುತ್ತಿದೆ: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಮಾ.10: ಹಿಂದುತ್ವದ ಸನ್ನಿ ಭಾರತವನ್ನು ವಿಕಾರವಾಗಿ ಆಕ್ರಮಿಸುತ್ತಿರುವಾಗ ಸ್ವಾಮಿ ವಿವೇಕಾನಂದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅರಿಯುವ ಅಗತ್ಯತೆ ಬಹಳ ಇದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.

ರವಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತಕ್ಕೆ ನಿಜವಾದ ಹಿಂದುತ್ವವನ್ನು ಕೊಡಬಲ್ಲಂತಹ ದಾರ್ಶನಿಕತೆ ಗಾಂಧೀಜಿ ಹಾಗೂ ಸ್ವಾಮಿ ವಿವೇಕಾನಂದರಲ್ಲಿ ಇತ್ತು. ಅವರು ಹೆಚ್ಚಿನ ಸಮಾನ ಗುಣಗಳಿದ್ದವು. ಗಾಂಧೀಜಿ ನಾನು ನಿಜವಾದ ಹಿಂದು ಎಂದು ಹೇಳಿದ್ದರು. ಅದರ ಜೊತೆಗೆ ನಿಜವಾದ ಹಿಂದು ನಿಜವಾದ ಮುಸ್ಲಿಮನನ್ನು ದ್ವೇಷಿಸುವುದಕ್ಕೆ ಕಾರಣವೇ ಇಲ್ಲ ಎಂದಿದ್ದರು ಎಂದು ಹೇಳಿದರು.

ಒಬ್ಬ ನಿಜವಾದ ಹಿಂದು ಒಬ್ಬ ನಿಜವಾದ ಮುಸ್ಲಿಂನನ್ನು ದ್ವೇಷಿಸುವ ಕಾರಣ ಏನು? ತಮ್ಮ ಧರ್ಮ ಅನುಸಾರವಾಗಿ ದೇವರನ್ನು ಅನ್ವೇಷಿಸುವುದರಲ್ಲಿ ಯಾವ ಅಪಸ್ವರವಿರುವುದಿಲ್ಲ. ಮೊದಲು ದೇವರ ದರ್ಶನ ಹಿಂದುಗೆ ಆಗುತ್ತೋ ಅಥವಾ ಮುಸ್ಲಿಂಗೆ ಆಗುತ್ತೋ ಗೊತ್ತಿಲ್ಲ. ಆದರೆ, ಅವರವರ ಸಾಧನೆಯ ಮೇಲೆ ನಿರ್ಧಾರವಾಗುತ್ತದೆ. ಧರ್ಮದ ಮೇಲಲ್ಲ. ತಾನು ಇಂತಹ ಧರ್ಮಕ್ಕೆ ಸೇರಿದ್ದೇನೆ ಎಂದಾಗ ಸಿದ್ಧಿ ತನಗೆ ಒದಗಿ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಧಕನಿಗೆ ದೇವರ ಸಾಕ್ಷಾತ್ಕರ ತಾನಾಗೇ ಬರುತ್ತದೆ ಎಂದು ಗಾಂಧೀಜಿ ತಿಳಿಸಿದರು. ಅವರು ಹಿಂದು ಧರ್ಮವನ್ನು ಹೊರತು ಪಡಿಸಿ ಎಂದು ಬದುಕಿದವರಲ್ಲ. ಅವರೊಳಗಿನ ಹಿಂದು ಬಹಳ ಮಾನವೀಯ ಮೌಲ್ಯವುಳ್ಳದಾಗಿತ್ತು. ದಯೆಯೇ ಧರ್ಮದ ಮೂಲ ಎಂದು ಶರಣರು ಹೇಳಿದನ್ನೇ ಗಾಂಧೀಜಿ ಹೇಳಿದ್ದು, ಎಲ್ಲರನ್ನು ಸ್ನೇಹದಿಂದ ನೋಡುವುದೇ ಸರ್ವಧರ್ಮ. ಕಟ್ಟಕಡೆಯವನನ್ನು ಸಮನಾಗಿ ಕಾಣುವುದೇ ಧರ್ಮ ಎಂದು ಅಭಿವ್ಯಕ್ತಗೊಳಿಸಿದ್ದರು ಎಂದು ನುಡಿದರು.

ಧಾರ್ಮಿಕ ಧಿರಿಸನ್ನು ಸ್ವಾಮಿ ವಿವೇಕಾನಂದರು ಧರಿಸಿರಬಹುದು. ಆದರೆ, ಅವರು ಬಡವನ ಸೇವೆಯೇ ದೇವರ ಸೇವೆ ಎಂದು ತಿಳಿದವರು. ದೇಶವನ್ನು ಕಟ್ಟು ಧರ್ಮವನ್ನಲ್ಲ ಎಂದು ಸಾರಿ ಹೇಳಿದ್ದರು. ಅಲ್ಲದೆ, ಹಿಂದುತ್ವದ ನಿಜವಾದ ಪ್ರತಿನಿಧಿಗಳು ಗಾಂಧೀಜಿ ಹಾಗೂ ವಿವೇಕಾನಂದರೇ; ಅವರು ಸತ್ಯಶೋಧನೆ ಮಾಡುವ ಮೂಲಕ ಮೌಢ್ಯವನ್ನು ಯಾವುದೇ ಮುಲಾಜಿಲ್ಲದೆ ತೀವ್ರವಾಗಿ ಖಂಡಿಸಿದರು. ಭಾರತೀಯ ಪರಂಪರೆಯನ್ನು ಉಳಿಸಬೇಕಾದರೆ ಅವರಿಬ್ಬರ ಮೂಲಕವೇ ಗ್ರಹಿಸಬೇಕು. ಆಗ ಮಾತ್ರ ಭಾರತಕ್ಕೆ ಓಳ್ಳೆಯದಾಗುತ್ತದೆ ಎಂದರು.

‘ಪಾಕಿಸ್ತಾನ ಎಂದಾಕ್ಷಣ ವಿರೋಧ ಮಾಡಬಾರದು. ಹಿಂದುಸ್ತಾನವನ್ನು ಪ್ರೀತಿಸುವ ಸ್ನೇಹ ಜೀವಿಗಳೂ ಅಲ್ಲೂ ಇದ್ದಾರೆ. ಮಾನವೀಯತೆ ಯುದ್ಧಕ್ಕಿಂತ ದೊಡ್ಡದ್ದು, ಉಗ್ರವಾದ ಹಾಗೂ ಉಗ್ರನನ್ನು ನಿಗ್ರಹಿಸಬೇಕು’

-ಮನುಬಳಿಗಾರ್, ಕಸಾಪ ಅಧ್ಯಕ್ಷ

‘ದುರ್ಗತಿಯನ್ನು ಹೊಂದಿರುವ ದೇಶದಲ್ಲಿ ಧರ್ಮ ಉಳಿಯುವುದಿಲ್ಲ. ಒಂದು ಉನ್ನತ ಸಮಾಜದಲ್ಲಿ ಸಂಸ್ಕಾರವೂ ಸಾಧ್ಯವಿಲ್ಲ. ಸಂಸ್ಕೃತಿಯೂ ಸಾಧ್ಯವಿಲ್ಲ. ನೀನು ನೀಚ, ನೀನು ಕೀಳು, ನೀನು ಅನ್ಯ ಹಾಗೂ ನೀನು ಮನುಷ್ಯನೇ ಅಲ್ಲ ಎನ್ನುವುದು ಧರ್ಮವಲ್ಲ’

-ಡಾ.ಬಂಜಗೆರೆ ಜಯಪ್ರಕಾಶ್, ಚಿಂತಕ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X