Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಭಾವ, ಗೇಯ ಪ್ರಧಾನವಾಗಿರುವ ಮುದ್ದು...

ಭಾವ, ಗೇಯ ಪ್ರಧಾನವಾಗಿರುವ ಮುದ್ದು ಕವಿತೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ16 March 2019 12:03 AM IST
share
ಭಾವ, ಗೇಯ ಪ್ರಧಾನವಾಗಿರುವ ಮುದ್ದು ಕವಿತೆಗಳು

ಕಾವ್ಯ ಕ್ಷೇತ್ರದಲ್ಲಿ ಮುದ್ದು ಮೂಡು ಬೆಳ್ಳೆಯವರದು ಚಿರಪರಿಚಿತ ಹೆಸರು. ಅವರ ಎರಡನೆಯ ಕವನ ಸಂಕಲನ ‘ಭಾವಗೇಯ ಯಾನ’. ನವೋದಯದ ರಮ್ಯತೆಯನ್ನು ಮೈಗೂಡಿಸಿಕೊಂಡಿರುವ ಸುಮಾರು 50 ಕವಿತೆಗಳು ಈ ಕೃತಿಯಲ್ಲಿವೆ.. ಮೊದಲ ಭಾಗದಲ್ಲಿ ಗೇಯ ಸ್ವರೂಪದ ಕವಿತೆಗಳು, ಎರಡನೆಯ ಭಾಗದಲ್ಲಿ ಮುಕ್ತ ರಚನೆಗಳೂ ಇವೆ. ಅಂದರೆ ಮೊದಲ ಭಾಗದಲ್ಲಿ ಹಾಡುವುದಕ್ಕೆ ಅನುಕೂಲವಾಗುವಂತಹ ಪದ್ಯಗಳಿದ್ದರೆ, ಎರಡನೆ ಭಾಗದಲ್ಲಿ ಪ್ರಾಸಗಳ ಹಂಗಿಲ್ಲದ ಆದರೆ ನವೋದಯದ ಲಯವನ್ನು ಮೀರದ ಕವಿತೆಗಳು. ಎಲ್ಲವೂ ಛಂದಸ್ಸಿನ ಬಂಧದೊಂದಿಗೆ ಮೈನವಿರೇಳಿಸಿಕೊಂಡ ಸಾಲುಗಳು. ತನಗೆ ತಾನೇ ಬಂಧವನ್ನಿಟ್ಟುಕೊಂಡು ಸ್ವತಂತ್ರವಾಗುವ ಹಂಬಲಿಕೆಯ ಪದ್ಯಗಳು ಇವು.
ಮೊದಲ ಭಾಗದ ಗೇಯ ಯಾನದ ವಸ್ತುಗಳು ಗೇಯತೆಯ ಭಾವಕ್ಕೆ ಪೂರಕವಾದವುಗಳು. ಸಖಿ, ಕನ್ನಡಾಂಬೆ, ಹೊಸ ವರುಷ, ಪ್ರಿಯತಮೆ, ಹುಡುಗಿ, ಜೋಗುಳ, ಬೆಳಗು ಇತ್ಯಾದಿಗಳನ್ನು ವಸ್ತುವಾಗಿಟ್ಟುಕೊಂಡು ತನ್ನ ಹೃದಯದ ಭಾವತೀವ್ರತೆಯನ್ನು ಕವಿ ಹಾಡಿದ್ದಾರೆ. ಎರಡನೆಯ ಭಾಗ, ಸಮಾಜದ ವಾಸ್ತವದ ಜೊತೆಗೆ ಮುಖಾಮುಖಿಯಾಗಲು ಹವಣಿಸುವ ಸಾಲುಗಳನ್ನು ಒಳಗೊಂಡಿವೆ. ಕವಿ ಇಲ್ಲಿ ನವ್ಯದವರಂತೆ ಸಿನಿಕನಲ್ಲ. ಸಮಾಜದಲ್ಲಿ ಇನ್ನೂ ಅಳಿದುಳಿದಿರುವ ಒಳ್ಳೆಯತನಗಳನ್ನು ಹೆಕ್ಕಿ ತನ್ನ ಕವಿತೆಯ ವಸ್ತುವಾಗಿಸಿದ್ದಾರೆ. ಮಾನವೀಯತೆಯ ತುಡಿತ ಪ್ರತಿ ಸಾಲುಗಳಲ್ಲೂ ಎದ್ದು ಕಾಣುತ್ತದೆ. ‘ಜನರು ಒಳ್ಳೆಯವರಾಗುತ್ತಿದ್ದಾರೆ’ ಎನ್ನುವ ಕವಿತೆಯೇ ಅದಕ್ಕೆ ಅತ್ಯುತ್ತಮ ಉದಾಹರಣೆ. ‘ಬಂಜರು ನೆಲಗಳು ಹಸುರು/ಹಸುರಾಗುತ್ತಾ/ತಂಪೀಯ ತೊಡಗಿವೆ/ಹೌದು, ಜನ ಈಗೀಗ ಹೆಚ್ಚು ಒಳ್ಳೆಯವರಾಗುತ್ತಿದ್ದಾರೆ...’ ಸಮಾಜದಲ್ಲಿ ಮಿಂಚಿನಂತೆ ಹೊಳೆಯುವ ಮನುಷ್ಯನ ಸಜ್ಜನಿಕೆಯನ್ನು ಗುರುತಿಸುತ್ತಾ ಕವಿ ಮೇಲಿನ ಸಾಲುಗಳ ಜೊತೆಗೆ ಮುಕ್ತಾಯಗೊಳಿಸುತ್ತಾರೆ.
ಮನುಷ್ಯನೊಳಗಿನ ಕೌರ್ಯವನ್ನು ಕಟ್ಟಿ ಹಾಕಿದ ಬಂಧನದ ಕಡೆಗೆ ಗಮನ ಸೆಳೆಯುತ್ತಾ ‘ಬಿಟ್ಟರೆ ಹುಲಿ/ಯಾಗುತ್ತಿದ್ದನೇನೋ/ಕಟ್ಟಿದಲ್ಲಿ ಗೂಟದ/ ಹಸುವಾದೆ’ ಎನ್ನುತ್ತಾರೆ ಕವಿ. ಅವಕಾಶ ಕೊಟ್ಟರೆ ಹುಲಿಯಾಗಿ ಎಗರುವ ಕ್ರೌರ್ಯ ಎಲ್ಲ ಮನುಷ್ಯರ ಒಳಗೂ ತಣ್ಣಗೆ ಮಲಗಿಕೊಂಡಿರುವುದನ್ನು ಈ ಕವಿತೆ ಹೇಳುತ್ತದೆ.
 ಇಲ್ಲಿರುವ ಕವಿತೆಗಳು ಭಾವತೀವ್ರತೆಯಿಂದ ಕೊಚ್ಚಿ ಹೋಗಿಲ್ಲ. ಮೆಲು ದನಿಯಲ್ಲಿ ಹೇಳಬೇಕಾದುದನ್ನು ಸಹೃದಯನಿಗೆ ದಾಟಿ ಸುಮ್ಮನಿದ್ದು ಬಿಡುತ್ತದೆ. ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 60. ಮುಖಬೆಲೆ 65 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X