ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ: ಪ್ರಭಾಕರ್ ರೆಡ್ಡಿ ಮತ್ತೆ ಬಂಧನ
![ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ: ಪ್ರಭಾಕರ್ ರೆಡ್ಡಿ ಮತ್ತೆ ಬಂಧನ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ: ಪ್ರಭಾಕರ್ ರೆಡ್ಡಿ ಮತ್ತೆ ಬಂಧನ](https://www.varthabharati.in/sites/default/files/images/articles/2019/03/27/184178.jpg)
ಬೆಂಗಳೂರು, ಮಾ.27: ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪದಡಿ ಉದ್ಯಮಿ ಪ್ರಭಾಕರ್ ರೆಡ್ಡಿಯನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಭಾಕರ್ ರೆಡ್ಡಿ ವಿರುದ್ಧ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಐಟಿ ಇಲಾಖೆ ತೆರಿಗೆ ವಸೂಲಿ ಸಂಬಂಧ ವಾರೆಂಟ್ ಜಾರಿ ಗೊಳಿಸಿತ್ತು. ಈ ಹಿನ್ನಲೆ ಪ್ರಭಾಕರ್ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಗಷ್ಟೇ, ಅಕ್ರಮ ಭೂ ಕಬಳಿಕೆ, ಭೂ ಒತ್ತುವರಿಗಳ ಪ್ರಕರಣದಲ್ಲಿ ಪ್ರಭಾಕರ್ ರೆಡ್ಡಿ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
Next Story