ಲಂಕಾ ಟೆಸ್ಟ್ ತಂಡದ ನಾಯಕ ಕರುಣರತ್ನೆ ಬಂಧನ, ಬಿಡುಗಡೆ
ಮದ್ಯ ಸೇವಿಸಿ ವಾಹನ ಚಾಲನೆ ಆರೋಪ

ಕೊಲಂಬೊ, ಮಾ.31: ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದ ಮೇಲೆ ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆಯನ್ನು ಕೊಲಂಬೊದಲ್ಲಿ ರವಿವಾರ ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
‘‘ತ್ರಿಚಕ್ರ ವಾಹನ ಚಾಲಕನೋರ್ವ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದು ಈ ಅಪಘಾತದಲ್ಲಿ ಕರುಣರತ್ನೆ ಭಾಗಿಯಾಗಿದ್ದಾರೆಂದು ಇಎಸ್ಪಿಎನ್ ಕ್ರಿಕ್ಇನ್ಫೊ ವರದಿ ಮಾಡಿದೆ.
ತ್ರಿಚಕ್ರ ವಾಹನ ಚಾಲಕನಿಗೆ ಯಾವುದೇ ಗಂಭೀರ ಗಾಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಕರುಣರತ್ನೆಗೆ ಜಾಮೀನು ದೊರಕಿದ್ದು, ಈ ವಾರದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.
2012ರಲ್ಲಿ ಮಹೇಲಾ ಜಯವರ್ಧನೆ ನಾಯಕತ್ವದಲ್ಲಿ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಕರುಣರತ್ನೆ, ಇಲ್ಲಿಯವರೆಗೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 36.05 ಸರಾಸರಿಯಲ್ಲಿ 8 ಶತಕ ಹಾಗೂ 22 ಅರ್ಧಶತಕಗಳೊಂದಿಗೆ 4,074 ರನ್ ಕಲೆ ಹಾಕಿದ್ದಾರೆ.
Next Story





