Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ1 April 2019 12:12 AM IST
share
ಓ ಮೆಣಸೇ…

  ನಾನು ಬ್ರಾಹ್ಮಣನಾಗಿರುವ ಕಾರಣ ಚೌಕಿದಾರನಾಗಲು ಸಾಧ್ಯವಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

   ಬ್ರಾಹ್ಮಣೇತರರಿಗೆ ಆರೆಸ್ಸೆಸ್‌ನ ಬಾಗಿಲು ಕಾಯುವ ಚೌಕಿದಾರರಾಗಲು ಶೇ. 100 ಮೀಸಲಾತಿ.

---------------------

ಕಾಂಗ್ರೆಸ್ ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ಬದಲು ಪಾಕಿಸ್ತಾನದಲ್ಲಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲುತ್ತದೆ - ರಾಮ್ ಮಾಧವ್, ಬಿಜೆಪಿ ಕಾರ್ಯದರ್ಶಿ

  ನೀವು ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸಿ ಅಖಂಡ ಮಾಡಿದಾಗ ಅಲ್ಲೂ ಸ್ಪರ್ಧಿಸುವ ಉದ್ದೇಶವಿದೆಯಂತೆ.

---------------------

  ದೇಶದೆಲ್ಲೆಡೆ ಮೋದಿ ಹವಾ ಇರುವುದರಿಂದ ಇನ್ನು ಎರಡು ಅವಧಿಗೆ ಮೋದಿಯೇ ಪ್ರಧಾನಿಯಾಗುತ್ತಾರೆ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ

   ಚೌಕಿದಾರ್ ಜನಾರ್ದನ ಪೂಜಾರಿ ಎಂದು ಇನ್ನೂ ಹಾಕಿಸಿಕೊಂಡಿಲ್ಲವೇ?

---------------------

   ಗೆದ್ದರೆ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಆಸ್ತಿಯಾಗುತ್ತೇನೆ - ಪ್ರಮೋದ್ ಮಧ್ವರಾಜ್, ಉಡುಪಿ-ಚಿಕ್ಕಮಗಳೂರುಕ್ಷೇತ್ರದ ಮೈತ್ರಿ ಅಭ್ಯರ್ಥಿ

ಎರಡೂ ಪಕ್ಷಗಳ ಹೆಸರಲ್ಲಿ ಆಸ್ತಿ ಮಾಡಿಕೊಳ್ಳುತ್ತೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆಯಂತೆ.

---------------------

ಕಾಂಗ್ರೆಸ್‌ನಲ್ಲಿ ಹೆಣ ಹೊರುವವನೂ ನಾನೇ, ಪಲ್ಲಕ್ಕಿ ಹೊರುವವನೂ ನಾನೇ - ಡಿ.ಕೆ. ಶಿವಕುಮಾರ್, ಸಚಿವ

ಸದ್ಯಕ್ಕೆ ಕಾಂಗ್ರೆಸ್‌ನ ಹೆಣ ಹೊರುವುದು ಒಂದು ಬಾಕಿ ಇದೆ.

---------------------

ಈ ಬಾರಿ ಮೋದಿ ಸೋಲಿಸದಿದ್ದರೆ ಅವರೇ ಆಜೀವ ಪ್ರಧಾನಿ - ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

   ಅಂದರೆ ಮುಂದಿನ ಬಾರಿ ನೀವು ಮೋದಿ ಬಣ ಸೇರುತ್ತೀರಿ ಎಂದಾಯಿತು.

---------------------

ನಾನು, ಡಿಕೆಶಿ ನಿಜವಾದ ಜೋಡೆತ್ತುಗಳು - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

  ಎತ್ತುಗಳು ಎನ್ನುವ ಬಗ್ಗೆ ಎರಡು ಮಾತಿಲ್ಲ.

---------------------

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯ ಹಿಂದೆ ಅನೇಕ ಅಪಸ್ವರಗಳಿವೆ - ಜಯಮಾಲಾ, ಸಚಿವೆ

ಕಾಂಗ್ರೆಸ್‌ನೊಳಗೇ ಹೊಂದಾಣಿಕೆಯಿಲ್ಲ, ಇನ್ನು ಜೆಡಿಎಸ್ ಜೊತೆಗೆ ಇರಲು ಅಪಸ್ವರ ಇರದೇ ಇದ್ದೀತೇ?

---------------------

ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಸೋತರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ನಾನು ಕಾಲಿಡುವುದಿಲ್ಲ - ಜನಾರ್ದನ ಪುಜಾರಿ, ಕಾಂಗ್ರೆಸ್ ಮುಖಂಡ

ನಿಮ್ಮ ಸ್ಥಾನವನ್ನು ವಹಿಸಿಕೊಳ್ಳಲು ಪ್ರಭಾಕರ ಭಟ್ಟರು ತುದಿಗಾಲಲ್ಲಿ ನಿಂತಿದ್ದಾರೆ.

---------------------

  ಈಗೀಗ ವಂಶಾಡಳಿತ ಎಲ್ಲಿಗೆ ತಲುಪಿದೆ ಎಂದರೆ ರಾಜಕಾರಣಿಗೆ ಮಗು ಹುಟ್ಟಿದ ಕೂಡಲೇ ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಎಂದು ಪ್ರಚಾರ ಮಾಡಲಾಗುತ್ತಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ ಬಿಜೆಪಿಯಲ್ಲಿ ಪ್ರಧಾನಿಯಾದ ಬಳಿಕ ಕತೆ ಕಟ್ಟಲಾಗುತ್ತದೆ. ----

-----------------

ಕಳ್ಳರಿಗೆ ಸರಿಯಾಗಿರುವವರೂ ಕಳ್ಳರಾಗಿಯೇ ಕಾಣುತ್ತಾರೆ - ಸಿ.ಟಿ. ರವಿ, ಶಾಸಕ

ಹಾಗೆಂದು ಯುವಕರ ಮೇಲೆ ಕಾರು ಓಡಿಸುವುದೇ?

---------------------

ಜಾತ್ಯತೀತ ಧರ್ಮ ಪಾಲಿಸುವ ಏಕೈಕ ದೇಶ ಭಾರತ - ಉಮಾ ಭಾರತಿ, ಕೇಂದ್ರ ಸಚಿವೆ

ಹೀಗೆ ಹೇಳಿಕೊಂಡೇ ಅಲ್ಪಸಂಖ್ಯಾತರ ಹತ್ಯಾಕಾಂಡ ಮಾಡುವ ಏಕೈಕ ದೇಶವೂ ಭಾರತವೇ ಇರಬೇಕು.

---------------------

ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ - ಪ್ರವೀಣ್ ತೊಗಾಡಿಯಾ, ವಿಹಿಂಪ ಮಾಜಿ ಅಧ್ಯಕ್ಷ

ಸ್ಪರ್ಧಿಸದಂತೆ ತಡೆಯುತ್ತಿರುವ ಒತ್ತಡ ಯಾವುದು?

---------------------

ನಾಯಕ (ಅನಂತಕುಮಾರ್) ಇದ್ದಾಗ ಎಲ್ಲರೂ ಇರುತ್ತಾರೆ. ಆತ ಸತ್ತಾಗ ಯಾರೂ ಇರುವುದಿಲ್ಲ - ವಿ. ಸೋಮಣ್ಣ, ಶಾಸಕ

ಅದಕ್ಕೇ ತಾನೆ ರಾಜಕೀಯ ಎನ್ನುವುದು.

---------------------

ಪ್ರಸ್ತುತ ಮತದಾರರು ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಸಮರ್ಥರಾಗಿದ್ದಾರೆ - ಅರುಣ್ ಜೇಟ್ಲಿ, ಕೇಂದ್ರ ಸಚಿವ

ಇವಿಎಂ ಸಾಮರ್ಥ್ಯ ಕುರಿತಂತೆ ಸಣ್ಣ ಅನುಮಾನವಿದೆ.

---------------------

ಮಹಾಘಟ ಬಂಧನ್ ಸ್ಥಿತಿ ಕರ್ನಾಟಕದಲ್ಲಿ ಹರಿದ ಬಟ್ಟೆಯಂತಾಗಿದೆ - ಸುರೇಶ್ ಕುಮಾರ್, ಬಿಜೆಪಿ ವಕ್ತಾರ

   ಅದನ್ನು ನೀವು ಯಾಕೆ ಧರಿಸಲು ಹೊರಟಿದ್ದೀರಿ?

---------------------

ಎಚ್‌ಡಿಕೆ - ಡಿಕೆಶಿ ಎಂಬ ಗೂಳಿಗಳು ಚುನಾವಣೆ ಮುಗಿಯುತ್ತಿದ್ದಂತೆ ಪರಸ್ಪರ ಗುದ್ದಾಟದಲ್ಲಿ ತೊಡಗಿ ತಿವಿದುಕೊಳ್ಳಲಿವೆ - ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ

   ಆ ಗೂಳಿಗಳ ಗುದ್ದಾಟದ ಮಧ್ಯೆ ಈ ತೋಳಕ್ಕೇನು ಕೆಲಸ?

---------------------

ಸುಮಲತಾ ಮುಖದಲ್ಲಿ ಅಂಬರೀಷ್ ಸಾವಿನ ನೋವಿನ ಛಾಯೆಯೇ ಇಲ್ಲ - ಕುಮಾರಸ್ವಾಮಿ, ಮುಖ್ಯಮಂತ್ರಿ

 ಗ್ಲಿಸರಿನ್ ಹಾಕದೆ ನಿಮ್ಮಷ್ಟು ಸಲೀಸಾಗಿ ಅಳುವುದಕ್ಕೆ ಅವರಿಗೆ ಬಾರದು.

---------------------

 ಜೋಡೆತ್ತಿನ ಸರಕಾರ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ಬೊಬ್ಬೆ ಹೊಡೆಯುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಆದರೆ ಕಳ್ಳನೇ ಕುಂಬಳಕಾಯಿ ಬಗ್ಗೆ ಮಾತನಾಡುವುದು ಅಷ್ಟು ಸರಿಯೆನಿಸುವುದಿಲ್ಲ.

---------------------

ಸ್ವಂತ ಮನೆಯಿಲ್ಲದ ದೇಶದ ಏಕೈಕ ಸಂಸದ ನಾನು - ಪ್ರತಾಪ ಸಿಂಹ, ಸಂಸದ

ಪತ್ನಿಯ ಹೆಸರಲ್ಲಿ ಸೈಟು ಪಡೆದುಕೊಂಡದ್ದು ಇದಕ್ಕೇ ಇರಬೇಕು.

---------------------

ಇಂದಿನ ಮಕ್ಕಳಿಗೆ ಕನ್ನಡ ಸಂಸ್ಕೃತಿಯ ಇತಿಹಾಸವನ್ನು ಪರಿಚಯಿಸುವ ಅಗತ್ಯವಿದೆ - ಡಾ. ಚಿದಾನಂದ ಮೂರ್ತಿ, ಸಂಶೋಧಕ

ನೀವು ಆರೆಸ್ಸೆಸ್ ಸಂಸ್ಕೃತಿಯನ್ನು ಪರಿಚಯಿಸಿದ್ದೇ ಹೆಚ್ಚು.

---------------------

 ದ.ಕ. ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಬಳಿಕ ಒಂದು ವರ್ಷದಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ ಬೆಂಕಿ ಹಚ್ಚಲು ವಿಫಲರಾದವರ ಹತಾಶೆಯ ಮಾತು.

---------------------

ನನ್ನದು ಸ್ವಾತಿ ನಕ್ಷತ್ರ, ನನಗೆ ಮಾಟ ಮಾಡಿದರೆ ಮಾಡಿದವರಿಗೇ ತಟ್ಟುತ್ತೆ - ಎಚ್.ಡಿ. ರೇವಣ್ಣ, ಸಚಿವ

ಸ್ವಾರ್ಥ ನಕ್ಷತ್ರ ಇರಬೇಕು, ಸರಿಯಾಗಿ ವಿಚಾರಿಸಿ.

---------------------

 ಆಗಾಗ ಸರ್ವಾಧಿಕಾರಿ ಪ್ರವೃತ್ತಿ ತಪ್ಪೇನಲ್ಲ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

   ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿಯ ಸಮರ್ಥನೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X