ಕೋಲಾರ: ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ಮುಳಬಾಗಿಲು ಹಾಲಿ, ಮಾಜಿ ಶಾಸಕರ ಬೆಂಬಲ
ಕೋಲಾರ, ಎ.1: ಕೋಲಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಹಾಲಿ ಪಕ್ಷೇತರ ಶಾಸಕ ನಾಗೇಶ್ ಬೆಂಬಲ ಸೂಚಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ಆಯೋಜನೆಗೊಂಡ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಕಾಂಗ್ರೆಸ್ ಸಂಸದ ಮುನಿಯಪ್ಪರ ಕೊಡುಗೆ ಶೂನ್ಯ ಹಾಗೂ ಜಿಲ್ಲೆಯ ಮುಖಂಡರನ್ನು ತುಳಿದಿದ್ದಾರೆ ಎಂದು ದೂರಿದರು.
ಸಂಸದ ಮುನಿಯಪ್ಪಗೆ ಬೆಂಬಲ ಕೊಡುವವರು ಕೊಡಿ, ನಮ್ಮದೇನು ಅಭ್ಯಂತರವಿಲ್ಲ. ಆದರೆ ಬೆನ್ನಿಗೆ ಚೂರಿ ಹಾಕಬೇಡಿ ಎಂದ ನಾಗೇಶ್,
ನಾವು ಬಿಜೆಪಿ ಸೇರುವುದಿಲ್ಲ, ನಾವು ಹುಟ್ಟು ಕಾಂಗ್ರೆಸಿಗರು. ಆದರೆ ಈ ಭಾರಿ ಮುನಿಯಪ್ಪ ಸೋಲಿಸುವ ಉದ್ದೇಶದಿಂದ ಅವರ ವಿರುದ್ದ ಮತ ಹಾಕುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
Next Story