ಬೈಕ್ ಢಿಕ್ಕಿ: ನಿವೃತ್ತ ನೌಕರ ಮೃತ್ಯು
![ಬೈಕ್ ಢಿಕ್ಕಿ: ನಿವೃತ್ತ ನೌಕರ ಮೃತ್ಯು ಬೈಕ್ ಢಿಕ್ಕಿ: ನಿವೃತ್ತ ನೌಕರ ಮೃತ್ಯು](https://www.varthabharati.in/sites/default/files/images/articles/2019/04/3/185316.jpeg)
ಬೆಂಗಳೂರು, ಎ.3: ಶರವೇಗವಾಗಿ ಬಂದ ಬೈಕ್ಯೊಂದು ಢಿಕ್ಕಿ ಹೊಡೆದ ಪರಿಣಾಮ ಬಿಇಎಲ್ನ ನಿವೃತ್ತ ನೌಕರರೊಬ್ಬರು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಣವಾರದ ಗಾಣಿಗರ ಹಳ್ಳಿಯ ಜಗನ್ನಾಥ್(65) ಎಂಬುವರು ಮೃತಪಟ್ಟ ನೌಕರ ಎಂದು ತಿಳಿದುಬಂದಿದೆ.
ಹೆಸರುಘಟ್ಟ ಮುಖ್ಯರಸ್ತೆಯ ನಾಡಕಚೇರಿ ಬಳಿ ಮಂಗಳವಾರ ಸಂಜೆ 6:30ರ ವೇಳೆ ಜಗನ್ನಾಥ್ ಅವರು ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡ ಜಗನ್ನಾಥ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
ಅಪಘಾತವೆಸಗಿದ ಬೈಕ್ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಬಿಇಎಲ್ ಕಂಪೆನಿಯಲ್ಲಿ ನಿವೃತ್ತರಾದ ನಂತರ ಜಗನ್ನಾಥ್ ಅವರು ಗಾಣಿಗರ ಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ