Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಹಲ್ಲುಗಳ ರಕ್ಷಣೆಗಾಗಿ ನೀವು...

ಹಲ್ಲುಗಳ ರಕ್ಷಣೆಗಾಗಿ ನೀವು ಪಾಲಿಸಲೇಬೇಕಾದ ಸೂತ್ರಗಳು

ವಾರ್ತಾಭಾರತಿವಾರ್ತಾಭಾರತಿ13 April 2019 1:22 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹಲ್ಲುಗಳ ರಕ್ಷಣೆಗಾಗಿ ನೀವು ಪಾಲಿಸಲೇಬೇಕಾದ ಸೂತ್ರಗಳು

ನಿಮ್ಮ ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜುವುದು ಏಕೈಕ ಸೂತ್ರವಲ್ಲ. ಬಿಳಿಯ ಮುತ್ತಿನಂತಹ ಹಲ್ಲುಗಳನ್ನು ಹೊಂದಿರಲು ಕೇವಲ ಬ್ರಷ್ ಮಾಡುವುದು ಸಾಲದು. ಹಲ್ಲುಗಳು ಇನ್ನೂ ಹಲವಾರು ಅಗತ್ಯಗಳನ್ನು ಬೇಡುತ್ತವೆ. ಸುಂದರ ಮುಗುಳ್ನಗು ಸದಾ ನಿಮ್ಮದಾಗಿರಬೇಕೆಂದರೆ ನೀವು ಕೆಲವು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

► ವಿಳಂಬವಾಗುವ ಮುನ್ನ ಫ್ಲಾಸ್ ಮಾಡಿ

ನೀವು ಹಲ್ಲುಗಳನ್ನು ಬ್ರಷ್ ಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಸೂಕ್ಷ್ಮಜೀವಿಗಳು ನಿವಾರಣೆಯಾಗುತ್ತವೆ ನಿಜ, ಆದರೆ ಈಗಲೂ ಹಲ್ಲುಗಳ ನಡುವೆ ಸೂಕ್ಷ್ಮ್ಮಜೀವಿಗಳು ಉಳಿದುಕೊಂಡಿರುತ್ತವೆ. ಫ್ಲಾಸಿಂಗ್ ಮಾಡಲು ಹೆಚ್ಚೆಂದರೆ ಒಂದು ನಿಮಿಷ ಬೇಕಾಗಬಹುದು. ಅದು ಹಲ್ಲುಗಳ ನಡುವೆ ಸಿಕ್ಕಿಕೊಂಡಿರುವ ಎಲ್ಲ ಸೂಕ್ಷ್ಮಜೀವಿಗಳನ್ನು ಮತ್ತು ಆಹಾರದ ಕಣಗಳನ್ನು ತೆಗೆಯುತ್ತದೆ. ಫ್ಲಾಸ್ ಅಥವಾ ವಿಶೇಷವಾದ ನಯವಾದ ದಾರವು ಬ್ರಷ್‌ಗೆ ಸಾಧ್ಯವಿಲ್ಲದ ಜಾಗಗಳನ್ನೂ ತಲುಪುತ್ತದೆ. ಪ್ರತಿದಿನ ಬ್ರಷ್‌ನಿಂದ ಹಲ್ಲುಗಳನ್ನು ಉಜ್ಜಿದ ಬಳಿಕ ಫ್ಲಾಸಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

► ಹಲ್ಲುಜ್ಜುವುದು ಕಾಟಾಚಾರವಾಗದಿರಲಿ

ಇಂದಿನ ಗಡಿಬಿಡಿಯ ಯುಗದಿಂದಾಗಿ ನಾವು ಬಹಳಷ್ಟು ವಿಷಯಗಳೊಂದಿಗೆ ರಾಜಿ ಮಾಡಿಕೊಳ್ಳುವಂತಾಗಿದೆ. ಇದು ನಮ್ಮ ಹಲ್ಲುಗಳ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಿದೆ ಎನ್ನಬಹುದು. ಕೆಲವರು ಸಮಯದ ಅಭಾವದಿಂದ ಕಾಟಾಚಾರಕ್ಕೆ ಹಲ್ಲುಜ್ಜುವ ಶಾಸ್ತ್ರವನ್ನು ಮಾಡುತ್ತಾರೆ. ಹಲ್ಲುಗಳನ್ನು ಸರಿಯಾಗಿ ಉಜ್ಜಲು ಸ್ವಲ್ಪ ಹೆಚ್ಚಿನ ಸಮಯವನ್ನು ವ್ಯಯಿಸಲೇಬೇಕು. ಸರಿಯಾದ ರೀತಿಯಲ್ಲಿಯೇ ಹಲ್ಲುಗಳನ್ನು ಉಜ್ಜಬೇಕು. ಹೆಚ್ಚಿನವರು ಎದುರಿನ ಹಲ್ಲುಗಳನ್ನಷ್ಟೇ ಉಜ್ಜುತ್ತಾರೆ,ಆದರೆ ಇಡೀ ಬಾಯಿಯನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ. ನಿಮ್ಮ ಎಲ್ಲ ಹಲ್ಲುಗಳನ್ನೂ ಸರಿಯಾಗಿ ಉಜ್ಜಿಕೊಂಡು ಬಳಿಕ ಫ್ಲಾಸಿಂಗ್ ಮಾಡಿ.

 ► ಧೂಮಪಾನ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ

ಹೆಚ್ಚಿನ ಧೂಮಪಾನಿಗಳು ವಾಸನೆಯನ್ನು ಮುಚ್ಚಿಡಲು ಮಿಂಟ್ ಅಥವಾ ಮೌತ್ ಫ್ರೆಷ್ನರ್‌ಗಳನ್ನು ಬಳಸುತ್ತಾರೆ. ಆದರೆ ಧೂಮಪಾನ ಮಾಡುವುದನ್ನು ದಂತವೈದ್ಯರು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಧೂಮಪಾನ ಶ್ವಾಸಕೋಶಗಳಿಗೆ ಮಾತ್ರ ಹಾನಿಯನ್ನುಂಟು ಮಾಡುವುದಿಲ್ಲ,ಅದು ಹಲ್ಲುಗಳನ್ನೂ ಕೆಡಿಸುತ್ತದೆ. ಅದು ಹಲವಾರು ದಂತ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಹಲ್ಲುಗಳ ಮೇಲೆ ಹಳದಿ ಕಲೆಗಳು,ದಂತಕ್ಷಯ,ವಸಡು ರೋಗಗಳು,ಅಷ್ಟೇ ಏಕೆ...ಬಾಯಿ ಕ್ಯಾನ್ಸರ್‌ಗೂ ಅದು ಕಾರಣವಾಗುತ್ತದೆ. ಯಾವುದೇ ದಂತರೋಗಗಳನ್ನು ತಡೆಯಲು ಧೂಮಪಾನದ ದುರಭ್ಯಾಸವನ್ನು ತಕ್ಷಣ ವರ್ಜಿಸುವುದು ಅತ್ಯಗತ್ಯ.

 ►ದಂತವೈದ್ಯರು ನಿಮ್ಮ ತಲೆನೋವುಗಳನ್ನೂ ನಿವಾರಿಸಬಲ್ಲರು

ವಿನಾಕಾರಣ ತಲೆನೋವುಗಳನ್ನು ನೀವು ಅನುಭವಿಸುತ್ತಿದ್ದರೆ ನಿಮ್ಮ ದಂತ ಸಮಸ್ಯೆಗಳು ಅದಕ್ಕೆ ಕಾರಣವಾಗಿರಬಹುದು. ಹಲವಾರು ದಂತ ಸಮಸ್ಯೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ತಲೆನೋವುಗಳನ್ನು ತರುತ್ತವೆ. ಬುದ್ಧಿಹಲ್ಲು ಅಥವಾ ಜ್ಞಾನದಂತವು ಮೊಳೆಯುವಾಗ ತಲೆನೋವುಗಳು ಅನುಭವವಾಗಬಹುದು. ಉರಿಯೂತಕ್ಕೆ ಕಾರಣವಾಗುವ ದವಡೆ ಹಲ್ಲುಗಳಲ್ಲಿಯ ಸೋಂಕಿನಂತಹ ಇತರ ಸಮಸ್ಯೆಗಳೂ ತಲೆನೋವಿಗೆ ಕಾರಣವಾಗುತ್ತವೆ. ಇಂತಹ ಸ್ಥಿತಿಯಲ್ಲಿ ದಂತವೈದ್ಯರನ್ನು ಸಂಪರ್ಕಿಸಿದರೆ ಅವರು ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ.

►ನಿಮ್ಮ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ

ಹೆಚ್ಚಿನ ಜನರು ತೀವ್ರ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುವವರೆಗೂ ತಮ್ಮ ದಂತವೈದ್ಯರನ್ನು ಭೇಟಿಯಾಗುವ ಗೋಜಿಗೇ ಹೋಗುವುದಿಲ್ಲ. ಆದರೆ ನಿಮ್ಮ ಹಲ್ಲುಗಳ ಆರೋಗ್ಯವು ಕೊಂಚ ಹೆಚ್ಚುವರಿ ಗಮನವನ್ನು ಬೇಡುತ್ತದೆ. ನೀವು ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಭೇಟಿಯಾಗಲೇಬೇಕು. ದಂತವೈದ್ಯರನ್ನು ಭೇಟಿಯಾಗಲು ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳುವವರೆಗೆ ಕಾಯಬೇಡಿ. ವರ್ಷಕ್ಕೆ ಕನಿಷ್ಠ ಎರಡು ಸಲವಾದರೂ ದಂತವ್ಯೆದ್ಯರನ್ನು ಭೇಟಿಯಾಗುವುದನ್ನು ರೂಢಿಸಿಕೊಳ್ಳಿ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X