Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬದುಕಿನ ಪ್ರೀತಿಯನ್ನು ಮೊಗೆದು ಕೊಡುವ...

ಬದುಕಿನ ಪ್ರೀತಿಯನ್ನು ಮೊಗೆದು ಕೊಡುವ ‘ಮಸಾಲೆ ಮೀಮಾಂಸೆ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ16 April 2019 12:13 AM IST
share
ಬದುಕಿನ ಪ್ರೀತಿಯನ್ನು ಮೊಗೆದು ಕೊಡುವ ‘ಮಸಾಲೆ ಮೀಮಾಂಸೆ’

‘ಮಸಾಲೆ ಮೀಮಾಂಸೆ’ ಸಂಪೂರ್ಣಾನಂದ ಬಳ್ಕೂರು ಅವರ ಲಲಿತ ಪ್ರಬಂಧ ಸಂಕಲನ. ಲಲಿತ ಪ್ರಬಂಧವೆಂದರೆ ‘ಹಾಸ್ಯ ಬರಹ’ ಎಂದು ಜನರು ನಂಬತೊಡಗಿದ್ದಾರೆ. ಲಲಿತ ಪ್ರಬಂಧವನ್ನು ಗಂಭೀರವಾಗಿ ಸ್ವೀಕರಿಸಿ ಬರೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಿರಿಯ ತಲೆಮಾರಿನ ಲೇಖಕರು ಲಲಿತ ಪ್ರಬಂಧಕ್ಕೆ ಮಹತ್ವದ ಸ್ಥಾನಕೊಟ್ಟಿದ್ದರು. ಎ. ಎನ್. ಮೂರ್ತಿರಾವ್, ಗೋರೂರು, ಹಾ.ಮಾ.ನಾಯಕರಂತಹ ಹಿರಿಯರು ಬಿಟ್ಟು ಹೋದ ಈ ಪ್ರಕಾರವನ್ನು ಹೊಸ ತಲೆಮಾರು ಗಂಭೀರವಾಗಿ ಸ್ವೀಕರಿಸಿಲ್ಲ. ಕತೆ, ಕಾದಂಬರಿಗಳಿಗೆ ಸಿಕ್ಕಿದ ಪ್ರಾಶಸ್ತ್ಯ ಈ ಪ್ರಕಾರಕ್ಕೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಬಳ್ಕೂರು ಅವರ ‘ಮಸಾಲೆ ಮೀಮಾಂಸೆ’ ಲಲಿತ ಪ್ರಬಂಧಕ್ಕೆ ಒಂದು ಅತ್ಯುತ್ತಮ ಕೊಡುಗೆಯಾಗಿದೆ.
ಮುನ್ನುಡಿಯಲ್ಲಿ ಭೂಮಿಗೌಡ ಹೇಳುವಂತೆ, ಈ ಕೃತಿಯು ಸಾಹಿತ್ಯ ಪ್ರಕಾರದ ಸರ್ವ ಬಂಧಗಳನ್ನು ಕಳಚಿಕೊಂಡ ಹೊಸ ಬಗೆಯ ಕ್ರಿಯಾಶೀಲ ಕೃತಿಯಾಗಿದೆ. ಜೊತೆಗೆ ಕಾಲದ ಹಂಗನ್ನು ಕಳಚಿಕೊಳ್ಳುವ ಜಾಯಮಾನವು ಇಲ್ಲಿ ಎಲ್ಲ ಲೇಖನಗಳಿಗಿದೆ. ಇಲ್ಲಿ ಎಲ್ಲಾ ಬರಹಗಳನ್ನು ಗಮನಿಸಿದಾಗ ಲೇಖನಗಳಲ್ಲಿ ಸ್ಥಾಪಿತಗೊಳ್ಳುವ ಸಮಾಜಮುಖಿ, ಜೀವನ್ಮುಖಿ ಆಯಾಮಗಳು ಕಣ್ಣಿಗೆ ಕಟ್ಟುತ್ತವೆ.
ಕೃತಿಯಲ್ಲಿ ಒಟ್ಟು 28 ಬರಹಗಳಿವೆ. ಲೇಖಕರು ಹಂಚಿಕೊಂಡಂತೆ, ಸುತ್ತಮುತ್ತ ನಡೆದದ್ದು, ಕಂಡದ್ದು, ಕೇಳಿದ್ದು. ಇವಕ್ಕೆ ತನ್ನದೇ ಮಿತಿಯ ಪ್ರತಿಕ್ರಿಯೆಗಳು ಇವು. 1987ರಿಂದ ಈವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಮತ್ತು ಇತ್ತೀಚೆಗೆ ಬರೆದ ಸುದೀರ್ಘ ಅವಧಿಯ ಪ್ರಬಂಧಗಳೆಲ್ಲ ಇಲ್ಲಿವೆ. ಧಾರ್ಮಿಕ ನಂಬಿಕೆಗಳು, ರಾಜಕೀಯ ದೊಂಬರಾಟಗಳು, ದೈನಂದಿನ ಬದುಕಿನ ದುಮ್ಮಾನಗಳು, ಜ್ಯೋತಿಷ್ಯ, ಯೋಗ, ಶುಗರ್ ಕಾಯಿಲೆ, ಯಕ್ಷಗಾನ, ಆಹಾರ ಎಲ್ಲವೂ ಇಲ್ಲಿ ತಿಳಿ ನಗುವಿನ ಜೊತೆಗೆ ವಿಮರ್ಶೆಗೀಡಾಗಿವೆ. ಕೇವಲ ನಗಿಸುವ ಉದ್ದೇಶದಿಂದ ಸೃಷ್ಟಿಯಾದ ಬರಹ ಇದಲ್ಲ. ಲವಲವಿಕೆಯ ಜೊತೆಗೆ ಬದುಕಿನ ಅವಾಂತರಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಜೊತೆಗೆ ಬದುಕಿನ ಬೇರೆ ಬೇರೆ ದರ್ಶನಗಳನ್ನು ಹಾಸ್ಯ ನಿರೂಪಣೆಯ ಮೂಲಕವೇ ನಮಗೆ ನೀಡಿದ್ದಾರೆ. ನಾವು ಒಮ್ಮೆ ನೋಡಿ ಮರೆತು ಬಿಡಬಹುದಾದ ಪಾತ್ರಗಳನ್ನು ಅವರು ವೀಕ್ಷಿಸಿ ಅದರೊಳಗಿನ ಬದುಕಿನ ಪ್ರೀತಿಯನ್ನು ಗುರುತಿಸಿ ಬರಹ ರೂಪಕ್ಕೆ ಇಳಿಸಿದ್ದಾರೆ. ಇಲ್ಲಿರುವ ಬರಹಗಳನ್ನು ಪ್ರೀತಿಸಲು ಓದುಗರಿಗೆ ಹತ್ತು ಹಲವು ಕಾರಣಗಳಿವೆ.
 ಆಕೃತಿ ಆಶಯ ಪಬ್ಲಿಕೇಶನ್ಸ್ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 172. ಮುಖಬೆಲೆ 150 ರೂಪಾಯಿ. ಆಸಕ್ತರು 94480 74074 ದೂರವಾಣಿಯನ್ನು ಸಂಪರ್ಕಿಸಬಹುದು. -ಕಾರುಣ್ಯಾ

share
-ಕಾರುಣ್ಯಾ
-ಕಾರುಣ್ಯಾ
Next Story
X