Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ನಾರಾಯಣ ಗುರುಗಳ ಫೋಟೋ ಇಟ್ಟಿರುವ ಬಿಜೆಪಿ...

ನಾರಾಯಣ ಗುರುಗಳ ಫೋಟೋ ಇಟ್ಟಿರುವ ಬಿಜೆಪಿ ಅವರ ಸಿದ್ಧಾಂತ ಪಾಲಿಸುವುದೆ ?

ದಿನೇಶ್ ಅಮೀನ್ ಮಟ್ಟುದಿನೇಶ್ ಅಮೀನ್ ಮಟ್ಟು21 April 2019 12:32 PM IST
share
ನಾರಾಯಣ ಗುರುಗಳ ಫೋಟೋ ಇಟ್ಟಿರುವ ಬಿಜೆಪಿ ಅವರ ಸಿದ್ಧಾಂತ ಪಾಲಿಸುವುದೆ ?

ಕಲ್ಬುರ್ಗಿಯಲ್ಲಿ ಭಾರತೀಯ ಜನತಾ ಪಕ್ಷ, ಈಡಿಗ ಸಮಾಜದವರ ಸಭೆ ನಡೆಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕರೆ ನೀಡಿದ ಸುದ್ದಿಯನ್ನು ಓದಿದೆ. ಎಲ್ಲ ಜಾತಿ-ಧರ್ಮದವರಿಗೆ ಅವರ ಆಯ್ಕೆಯ ಪಕ್ಷದ ಜತೆ ಗುರುತಿಸಿಕೊಳ್ಳುವ ಮತ್ತು ಅದನ್ನು ಬೆಂಬಲಿಸುವ ಹಕ್ಕು ಇದೆ. ಆದರೆ ಅಲ್ಲಿ ನಾರಾಯಣ ಗುರುಗಳ ಭಾವಚಿತ್ರ ಇದ್ದುದನ್ನು ನೋಡಿ ಆಶ್ಚರ್ಯವಾಯಿತು.

ರಾಜಕೀಯ ಸಮಾವೇಶಗಳಲ್ಲಿ ನಾರಾಯಣ ಗುರುಗಳ ಫೋಟೊ ನಾನು ಮೊದಲು ನೋಡಿದ್ದು, 15 ವರ್ಷಗಳ ಹಿಂದೆ ಉತ್ತರಪ್ರದೇಶದ ಬಿಎಸ್ ಪಿ ಸಮಾವೇಶಗಳಲ್ಲಿ. ಅದು ಕಾನ್ಸಿರಾಮ್ ಎಂಬ ನಿಜ ಚಾಣಕ್ಯನ ಮೆದುಳು. ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಎಸ್ ಪಿಗೆ ನಾರಾಯಣ ಗುರುಗಳ ಫೋಟೊ ಇಟ್ಟುಕೊಳ್ಳುವ ಹಕ್ಕು ಹೆಚ್ಚಿದೆ. ಅವರನ್ನು ಬಿಟ್ಟರೆ ನಾರಾಯಣ ಗುರುಗಳ ಫೋಟೊ ಹಾಕುವ ಹಕ್ಕು ಇರುವುದು ಕೇರಳದ ಕಮ್ಯುನಿಸ್ಟರಿಗೆ. ಅಲ್ಲಿನ ಕಮ್ಯುನಿಸ್ಟ್ ಚಳುವಳಿಯೇ ನಾರಾಯಣ ಗುರು ಚಳುವಳಿಯ ಮುಂದುವರಿದ ಹಂತ. ಭಿನ್ನಾಭಿಪ್ರಾಯಕ್ಕೆ ಸ್ವಾಗತ. 

ನಾರಾಯಣ ಗುರುಗಳು ಒಬ್ಬ ವ್ಯಕ್ತಿ ಅಲ್ಲ, ಅವರೊಂದು ಸಿದ್ಧಾಂತ. ಸಿದ್ಧಾಂತವನ್ನು ಒಪ್ಪಿಕೊಂಡರೆ ಮಾತ್ರ ವ್ಯಕ್ತಿಗೆ ಗೌರವ ಸಲ್ಲಿಸುವ ನೈತಿಕ ಹಕ್ಕು ಬರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಬಿಜೆಪಿ ಮುಖ್ಯವಾಗಿ ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್, ನಾರಾಯಣ ಗುರುಗಳ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಪ್ರಶ್ನೆ. 

‘’ನಿಮಗೆ ದೇವರನ್ನು ಪೂಜಿಸಲು ಅವಕಾಶ ಇಲ್ಲ ಎಂದಾದರೆ ದೇವರನ್ನೇ ನಿಮ್ಮ ಬಳಿಗೆ ತರುತ್ತೇನೆ’’ ಎಂದು ಹೇಳಿ 165ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕೇರಳಾದ್ಯಂತ ಸ್ಥಾಪಿಸಿ ದೇವಸ್ಥಾನ ಚಳುವಳಿಯನ್ನೇ ಸಾಮಾಜಿಕ ಸುಧಾರಣಾ ಚಳುವಳಿಯನ್ನಾಗಿ ಪರಿವರ್ತಿಸಿ ಯಶಸ್ಸು ಕಂಡವರು ನಾರಾಯಣ ಗುರುಗಳು.

‘’ದೇಹವೇ ದೇಗುಲ..’’ ಎಂದ ಬಸವಣ್ಣ, ‘’ದೇವರಿಲ್ಲದ ಜಾಗವೇ ಇಲ್ಲವಾದ ಕಾರಣ ಯಾರೂ ಇಲ್ಲದ ಸ್ಥಳದಲ್ಲಿ ಬಾಳೆಹಣ್ಣು ಹೇಗೆ ತಿನ್ನಲಿ ? ಎಂಬ ಸರಳ ಪ್ರಶ್ನೆಯಲ್ಲಿ, ದೇವರು-ದೇವಸ್ಥಾನದ ಕಲ್ಪನೆಯನ್ನು ಬಿಚ್ಚಿಟ್ಟ ಕನಕದಾಸರ ಚಿಂತನೆಗಳ ಜಾಡಿನಲ್ಲಿಯೇ ನಾರಾಯಣ ಗುರುಗಳ ಚಿಂತನೆ ಇದೆ.

‘’ ರಾಮ ಹುಟ್ಟಿದ ಜಾಗದಲ್ಲಿಯೇ ಮಂದಿರ ಕಟ್ಟುವೆವು’’ ಎಂದು ಮಸೀದಿ ಒಡೆದು ಅದರ ಮೂಲಕ ದೇಶ ಒಡೆಯಲು ಹೊರಟ ಬಿಜೆಪಿ, ನಾರಾಯಣ ಗುರುಗಳ ದೇವಾಲಯದ ಅಭಿಪ್ರಾಯವನ್ನು ಒಪ್ಪುತ್ತಾ ?

ಹಿಂದೂಗಳಲ್ಲಿರುವ ಸರ್ವಜಾತಿಗಳಿಗೂ ಅರ್ಚಕನಾಗುವ ಹಕ್ಕು ಇದೆ ಎಂದು ಪ್ರತಿಪಾದಿಸಿ ಶೂದ್ರ ಅರ್ಚಕರ ತರಬೇತಿ ಕೇಂದ್ರವನ್ನೇ ಸ್ಥಾಪಿಸಿದವರು ನಾರಾಯಣ ಗುರುಗಳು. ಇಂದಿಗೂ ಗುರುಗಳಿಂದ ನಿರ್ಮಾಣಗೊಂಡ ದೇವಸ್ಥಾನಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಒಪ್ಪುತ್ತಾ? ಅವರು ನಿರ್ಮಿಸಲು ಹೊರಟಿರುವ ರಾಮಮಂದಿರದಲ್ಲಿ ಶೂದ್ರ ಅರ್ಚಕರಿಗೆ ಪೂಜೆಯ ಹಕ್ಕು ನೀಡುತ್ತಾರೆಯೇ?

ಕೇರಳದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಶೇಕಡಾ 23ರಷ್ಟು ಕ್ರಿಶ್ಚಿಯನರು, ಶೇಕಡಾ 16ರಷ್ಟು ಮುಸ್ಲಿಮರಿದ್ದರೂ ಇತ್ತೀಚಿನ ವರೆಗೆ ಅಲ್ಲಿ ಕೋಮುವಾದದ ವೈರಸ್ ಪ್ರವೇಶಿಸದಂತೆ ತಡೆದು ನಿಲ್ಲಿಸಿದ್ದು ಇದೇ ನಾರಾಯಣ ಗುರುಗಳು ಬೋದಿಸಿದ್ದ ಸಹಬಾಳ್ವೆಯ ಚಿಂತನೆ. ಬಿಜೆಪಿಯವರ ‘’ದೇಶ’’ದ ಕಲ್ಪನೆಯಲ್ಲಿ ಈ ಅಲ್ಪಸಂಖ್ಯಾತರಿಗೆ ಜಾಗ ಇದೆಯೇ?

ನಾರಾಯಣ ಗುರುಗಳನ್ನು, ಈಳವ/ಬಿಲ್ಲವರನ್ನು ಸೆಳೆಯಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾರಾಯಣ ಗುರುಗಳಿಂದ ಸ್ಥಾಪನೆಗೊಂಡಿದ್ದ ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಸಂಸ್ಥೆ (ಎಸ್ ಎನ್ ಡಿ ಪಿ)ಯನ್ನು ಹೈಜಾಕ್ ಮಾಡಲು ಹೊರಟ ಬಿಜೆಪಿ ವಿಫಲವಾಗಿತ್ತು. ಎಸ್ ಎನ್ ಡಿಪಿ’’ ಭಾರತಧರ್ಮ ಜನಸೇನಾ ಎಂಬ ಪಕ್ಷ ಸ್ಥಾಪಿಸಿ ಅದರ ಮೂಲಕ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ವೇಲಪ್ಪಲ್ಲಿ ನಟೇಶ್ ಈಗ ಹೊರಬಂದಿದ್ದಾರೆ.

ಕರ್ನಾಟಕದಲ್ಲಿಯೂ ಬಿಜೆಪಿ ಎಸ್.ಬಂಗಾರಪ್ಪನವರನ್ನು ಬಳಸಿಕೊಂಡು ಬಿಸಾಕಿದ್ದು ಕಲಿಯಬೇಕೆನ್ನುವವರು ತಿಳಿದುಕೊಳ್ಳಬೇಕಾದ ಹಳೆಯ ಪಾಠ. ಈ ಪಾಠದ ಮುಂದುವರಿದ ಭಾಗವನ್ನು ಕರಾವಳಿ ಜಿಲ್ಲೆಗಳಲ್ಲಿ ಪೋಲಿಸ್ ಕೇಸ್ ಹಾಕಿಸಿಕೊಂಡು, ಜೈಲು ಅನ್ನ ತಿನ್ನುತ್ತಾ ಬದುಕು ಹಾಳು ಮಾಡಿಕೊಂಡ ಬಿಲ್ಲವ ಯುವಕರಿಂದ ಕಲಿಯಬೇಕು. ಆರ್ ಎಸ್ ಎಸ್ ಮತ್ತು ನಾರಾಯಣ ಗುರುಗಳ ಸಿದ್ಧಾಂತ ಪರಸ್ಪರ ವಿರುದ್ಧವಾಗಿರುವಂತಹದ್ದು. ಅವೆರಡೂ ಒಂದಾಗುವ ದೂರ, ಬಹುದೂರದ ಸಾಧ್ಯತೆಗಳೂ ಕೂಡಾ ಇಲ್ಲ.

‘ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ದಾರಿತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಚಿಂತನೆಯ ಮಾದರಿಗಳ ಬಗ್ಗೆ ವಿಸ್ತೃತವಾದ ಚರ್ಚೆ ಕರ್ನಾಟಕದಲ್ಲಿ ನಡೆದಿವೆ. 

ರಾಜ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ಇನ್ನೊಂದು ಮಾದರಿ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳ ಚಿಂತನೆಯದ್ದು. ಅಂತಹ ಚರ್ಚೆ ನಡೆಯದಿರುವ ಕಾರಣದಿಂದಾಗಿಯೇ ಇಂದು ನಾರಾಯಣ ಗುರುಗಳ ಚಿಂತನೆಗೆ ವಿರುದ್ಧ ಇದ್ದವರು ಅವರನ್ನು ಹೈಜಾಕ್ ಮಾಡಿ ರಾಜಕಾರಣಕ್ಕೆ ದುರ್ಬಳಕೆ ಮಾಡುವಂತಾಗಿದೆ.

ತಾನು ಬದುಕಿದ್ದಷ್ಟು ದಿನವೂ ಸಾಮಾಜಿಕ ಶ್ರೇಣಿಯಲ್ಲಿ ಈಳವರಿಗಿಂತಲೂ ಕೆಳಗಿದ್ದ ಅಸ್ಪೃಶ್ಯ ಸಮುದಾಯದ ಪುಲಯ ಸಮುದಾಯಕ್ಕೆ ಸೇರಿದವನಿಂದ ಅಡುಗೆ ಮಾಡಿಸಿ ಉಣ್ಣುತ್ತಿದ್ದ ನಾರಾಯಣ ಗುರುಗಳು ಬದುಕಿದ್ದರೆ ಯಾರನ್ನು ಬೆಂಬಲಿಸುತ್ತಿದ್ದರು ಎನ್ನುವ ಬಗ್ಗೆ ನನಗಂತೂ ಅನುಮಾನ ಇಲ್ಲ. ಗುರುಗಳು ಖಂಡಿತ ಮಲ್ಲಿಕಾರ್ಜುನ ಖರ್ಗೆಯವರಿಗೆ ಆಶೀರ್ವಾದ ಮಾಡುತ್ತಿದ್ದರು.

ಕೃಪೆ: ದಿನೇಶ್ ಅಮೀನ್ ಮಟ್ಟು ಅವರ ಫೇಸ್ ಬುಕ್ ಪೋಸ್ಟ್

share
ದಿನೇಶ್ ಅಮೀನ್ ಮಟ್ಟು
ದಿನೇಶ್ ಅಮೀನ್ ಮಟ್ಟು
Next Story
X