Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸೆಲಿಯಾಕ್ ಬಗ್ಗೆ ನಿಮಗೆಷ್ಟು ಗೊತ್ತು?

ಸೆಲಿಯಾಕ್ ಬಗ್ಗೆ ನಿಮಗೆಷ್ಟು ಗೊತ್ತು?

-ಎನ್.ಕೆ.-ಎನ್.ಕೆ.25 April 2019 12:49 AM IST
share
ಸೆಲಿಯಾಕ್ ಬಗ್ಗೆ ನಿಮಗೆಷ್ಟು ಗೊತ್ತು?

ಗೋಧಿ, ಬಾರ್ಲಿ ಇತ್ಯಾದಿಗಳಲ್ಲಿರುವ ಗ್ಲುಟೆನ್ ಎಂಬ ಅಂಟುಪದಾರ್ಥವು ಶರೀರದ ತೂಕವನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ಹೀಗಾಗಿ ಶರೀರದ ತೂಕದ ಬಗ್ಗೆ ಕಾಳಜಿ ಇರುವ ಕೆಲವರು ಗ್ಲುಟೆನ್ ಇರುವ ಆಹಾರಗಳಿಂದ ದೂರವಿದ್ದರೆ, ಗ್ಲುಟೆನ್ ಅಸಹಿಷ್ಣುತೆ ಹೊಂದಿರುವ ಕೆಲವರಿಗೆ ಅದನ್ನು ದೂರವಿಡುವುದು ಅನಿವಾರ್ಯವಾಗಿದೆ. ಇಂತಹವರಲ್ಲಿ ಗ್ಲುಟೆನ್ ಕೆಲವು ಜೀರ್ಣ ಸಮಸ್ಯೆಗಳನ್ನುಂಟು ಮಾಡುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ಕೆಲವು ವಿಧಗಳ ಕ್ಯಾನ್ಸರ್‌ಗಳಿಗೂ ಕಾರಣವಾಗಬಹುದು. ಉದರಕ್ಕೆ ಸಂಬಂಧಿಸಿದ ಸೆಲಿಯಾಕ್ ಕಾಯಿಲೆಗೆ ಗ್ಲುಟೆನ್ ಅಸಹಿಷ್ಣುತೆ ಮೂಲ ಕಾರಣವಾಗಿದೆ. ಭಾರತದಲ್ಲಿ ಅಂದಾಜು 60ರಿಂದ 80 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಏನಿದು ಸೆಲಿಯಾಕ್ ಕಾಯಿಲೆ?

ಸೆಲಿಯಾಕ್ ಕಾಯಿಲೆಯು ಒಂದು ಸ್ವರಕ್ಷಿತ ರೋಗ(ನಮ್ಮ ರೋಗನಿರೋಧಕ ಶಕ್ತಿಯು ನಮ್ಮದೇ ಶರೀರದ ಜೀವಕೋಶಗಳ ಮೇಲೆ ದಾಳಿ ಮಾಡುವ ಪ್ರಕ್ರಿಯೆ)ವಾಗಿದ್ದು, ನಮ್ಮ ಶರೀರವು ಗ್ಲುಟೆನ್‌ಗೆ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ. ಗ್ಲುಟೆನ್ ಗೋಧಿ, ಬಾರ್ಲಿ ಇತ್ಯಾದಿಗಳಲ್ಲಿರುವ ಪ್ರೋಟಿನ್ ಆಗಿದೆ. ಗ್ಲುಟೆನ್ ಅಸಹಿಷ್ಣುತೆ ಹೊಂದಿರುವವರು ಅದನ್ನು ಸೇವಿಸಿದಾಗ ಶರೀರವು ತನ್ನದೇ ಜೀವಕೋಶಗಳ ಮೇಲೆ ದಾಳಿ ನಡೆಸುತ್ತದೆ ಮತ್ತು ಸಣ್ಣ ಕರುಳಿಗೆ ಹಾನಿಯನ್ನುಂಟು ಮಾಡುತ್ತದೆ. ಸಣ್ಣ ಕರುಳು ಶರೀರದ ಬಳಕೆಗಾಗಿ ಆಹಾರದಲ್ಲಿಯ ಪೋಷಕಾಂಶಗಳನ್ನು ರಕ್ತವು ಹೀರಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ರೋಗದ ಲಕ್ಷಣಗಳೇನು?

ಸೆಲಿಯಾಕ್ ರೋಗದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ತೂಕ ಇಳಿಕೆ, ಬಳಲಿಕೆ, ಹೊಟ್ಟೆನೋವು, ಅತಿಸಾರ, ವಾಕರಿಕೆ, ಮಲಬದ್ಧತೆ, ವಾಂತಿ, ಹೊಟ್ಟೆಯುಬ್ಬರ ಮತ್ತು ವಾಯುಪ್ರಕೋಪ ಇವು ಈ ರೋಗದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. ಕಬ್ಬಿಣದ ಕೊರತೆ ಅಥವಾ ರಕ್ತಹೀನತೆ, ಕೀಲುಗಳಲ್ಲಿ ನೋವು, ಅನಿಯಮಿತ ಋತುಚಕ್ರ, ಬಾಯಿಹುಣ್ಣು, ತಲೆನೋವು ಮತ್ತು ದಣಿವು, ಎದೆಯುರಿ ಹಾಗೂ ಡರ್ಮಟಿಟಿಸ್ ಹೆರ್ಪೆಟಿಫಾರ್ಮಿಸ್ ಎಂಬ ಚರ್ಮವ್ಯಾಧಿ ಇವು ಜೀರ್ಣ ವ್ಯವಸ್ಥೆಗೆ ಸಂಬಂಧಿಸದ ಲಕ್ಷಣಗಳಲ್ಲಿ ಸೇರಿವೆ.

ಅಪಾಯದ ಅಂಶಗಳೇನು?

ಸೆಲಿಯಾಕ್ ರೋಗದ ಆನುವಂಶಿಕ ಇತಿಹಾಸ, ಥೈರಾಯ್ಡ, ರುಮಟಾಯ್ಡ ಸಂಧಿವಾತ, ಮಧುಮೇಹ ಮತ್ತು ಡೌನ್ ಸಿಂಡ್ರೋಮ್ ಇವು ಈ ರೋಗಕ್ಕೆ ಕಾರಣವಾಗಬಲ್ಲ ಅಪಾಯದ ಅಂಶಗಳಲ್ಲಿ ಸೇರಿವೆ.

ರೋಗನಿರ್ಣಯ ಹೇಗೆ?

ವೈದ್ಯರು ರೋಗಿಯ ದೈಹಿಕ ತಪಾಸಣೆಯ ಜೊತೆಗೆ ಆತನ/ಆಕೆಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ಸಂಪೂರ್ಣ ಬ್ಲಡ್ ಕೌಂಟ್ ಸೇರಿದಂತೆ ಕೆಲವು ರಕ್ತಪರೀಕ್ಷೆಗಳು, ಯಕೃತ್ತಿನ ಕಾರ್ಯಕ್ಷಮತೆಯ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ ಹಾಗೂ ಕ್ಷಾರೀಯ-ಫಾಸ್ಫೇಟ್ ಮಟ್ಟದ ಪರೀಕ್ಷೆ ಸೇರಿದಂತೆ ಕೆಲವು ಹೆಚ್ಚುವರಿ ತಪಾಸಣೆಗಳನ್ನು ಅವರು ಕೈಗೊಳ್ಳಬಹುದು.

ಚಿಕಿತ್ಸೆ ಏನು?

ನಮ್ಮ ಆಹಾರದಿಂದ ಗ್ಲುಟೆನ್‌ನ್ನು ಸಂಪೂರ್ಣವಾಗಿ ವರ್ಜಿಸುವುದು ಈ ಸಮಸ್ಯೆಗೆ ಖಾಯಂ ಪರಿಹಾರವಾಗಿದೆ. ನಮ್ಮ ಆಹಾರಕ್ರಮವನ್ನು ರೂಪಿಸಿಕೊಳ್ಳಲು ವೈದ್ಯರ ಸಲಹೆ ಪಡೆಯಬಹುದು. ಇಂದಿನ ದಿನಗಳಲ್ಲಿ ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಗೋಧಿಹಿಟ್ಟು ಮತ್ತು ಮೈದಾ ಬಳಕೆಯಾಗುವುದರಿಂದ ಗ್ಲುಟೆನ್‌ಮುಕ್ತ ಆಹಾರ ಕ್ರಮವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ, ಆದರೆ ಈ ಕಾಯಿಲೆಯಿಂದ ಪಾರಾಗಲು ಅದೊಂದೇ ಪರಿಹಾರವಾಗಿದೆ. ಬ್ರೆಡ್, ಓಟ್ಸ್, ಪಿಸ್ತಾ, ಕುಕೀಸ್, ಏಕದಳ ಧಾನ್ಯಗಳು, ಸಮುದ್ರ ಆಹಾರ ಇತ್ಯಾದಿಗಳಿಂದ ದೂರವಿರಬೇಕಾಗುತ್ತದೆ. ಡೇರಿ ಉತ್ಪನ್ನಗಳು, ಬಟಾಣಿ, ಬಟಾಟೆ, ಮೆಕ್ಕೆಜೋಳ, ಕಂದು ಅಕ್ಕಿ, ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ತಾಜಾ ಹಣ್ಣುಗಳು ಗ್ಲುಟೆನ್ ಅಸಹಿಷ್ಣುತೆಯನ್ನು ಹೊಂದಿರುವವರಿಗೆ ಆರೋಗ್ಯಕರ ಆಹಾರಗಳಾಗಿವೆ.

share
-ಎನ್.ಕೆ.
-ಎನ್.ಕೆ.
Next Story
X