Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಿಜೆಪಿಯ ಲಾಭಕ್ಕಾಗಿ ನಮ್ಮ ಹೇಳಿಕೆಗಳನ್ನು...

ಬಿಜೆಪಿಯ ಲಾಭಕ್ಕಾಗಿ ನಮ್ಮ ಹೇಳಿಕೆಗಳನ್ನು ತಿರುಚಲಾಗಿದೆ: ಸುದ್ದಿಸಂಸ್ಥೆ ವಿರುದ್ಧ ಮಾಜಿ ಸೇನಾಧಿಕಾರಿಗಳ ಆರೋಪ

ವಾರ್ತಾಭಾರತಿವಾರ್ತಾಭಾರತಿ25 April 2019 7:02 PM IST
share
ಬಿಜೆಪಿಯ ಲಾಭಕ್ಕಾಗಿ ನಮ್ಮ ಹೇಳಿಕೆಗಳನ್ನು ತಿರುಚಲಾಗಿದೆ: ಸುದ್ದಿಸಂಸ್ಥೆ ವಿರುದ್ಧ ಮಾಜಿ ಸೇನಾಧಿಕಾರಿಗಳ ಆರೋಪ

ಹೊಸದಿಲ್ಲಿ, ಎ.25: ದೇಶದ ಸೇನಾಪಡೆಗಳನ್ನು ರಾಜಕೀಯ ಲಾಭಕ್ಕೋಸ್ಕರ ಬಳಸದೇ ಇರುವಂತೆ ತಾವು ಮಾಡಿದ ಅಪೀಲಿನ  ಉದ್ದೇಶಗಳನ್ನು ತಪ್ಪಾಗಿ ಬಿಂಬಿಸಲು ಭಾರತೀಯ ಸುದ್ದಿ ಸಂಸ್ಥೆ ಎಎನ್‍ಐ ಪ್ರಯತ್ನಿಸಿದೆ ಎಂದು ಮಾಜಿ ಸೇನಾಧಿಕಾರಿಗಳ ಗುಂಪೊಂದು ಜಾಗತಿಕ ಮಾಧ್ಯಮ ಸಂಸ್ಥೆ ಥಾಮ್ಸನ್ ರಾಯ್ಟರ್ಸ್ ಗೆ ದೂರಿದೆ. ಥಾಮ್ಸನ್ ರಾಯ್ಟರ್ಸ್ ಎಎನ್‍ಐ ಜತೆ  ಹೂಡಿಕೆ ಹಾಗೂ ಸಂಪಾದಕೀಯ ವಿಚಾರಗಳಲ್ಲೂ ಪಾಲುದಾರಿಕೆ ಹೊಂದಿದೆ.

“ನಮ್ಮ ಗೌರವಯುತ ಉದ್ದೇಶಗಳಿಗೆ ಅಗೌರವವುಂಟು ಮಾಡಲು ಹಾಗೂ ನಮ್ಮ  ಹೇಳಿಕೆಗಳನ್ನು ತಿರುಚಿ ಎಎನ್‍ಐ ಭಾರತದ ಆಡಳಿತ ಪಕ್ಷದ ಅಣತಿಯಂತೆ ಕಾರ್ಯಾಚರಿಸಿದೆ ಎಂದು ನಮಗನಿಸುತ್ತದೆ” ಎಂದು ಮಾಜಿ ಸೇನಾಧಿಕಾರಿಗಳ ಪರವಾಗಿ ನಿವೃತ್ತ ಮೇಜರ್ ಪ್ರಿಯದರ್ಶಿ ಚೌಧುರಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಆದರೆ ಈ ಆರೋಪಗಳನ್ನು ಎಎನ್‍ಐ ನಿರಾಕರಿಸಿದೆ.

ಎಪ್ರಿಲ್ 12ರಂದು ಭಾರತೀಯ ಸೇನಾಪಡೆಗಳ 150ಕ್ಕೂ ಹೆಚ್ಚು ಮಾಜಿ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೇಶದ ರಕ್ಷಣಾ ಪಡೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದನ್ನು ತಡೆಯುವಂತೆ ಕೋರಿದ್ದರು. ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ರಕ್ಷಣಾ ಪಡೆಗಳ ಎಂಟು ಮಂದಿ ಮಾಜಿ ಅಧ್ಯಕ್ಷರೂ ಸೇರಿದ್ದರು.

ಆದರೆ ಪತ್ರಕ್ಕೆ ತಾವು ಸಹಿ ಹಾಕಿದ್ದನ್ನು ಮಾಜಿ ಸೇನಾ ಮುಖ್ಯಸ್ಥ ಸುನಿತ್ ಫ್ರಾನ್ಸಿಸ್ ರಾಡ್ರಿಗಸ್ ಹಾಗೂ ಮಾಜಿ ವಾಯುಸೇನಾ ಮುಖ್ಯಸ್ಥ ಎನ್ ಸಿ ಸೂರಿ ನಿರಾಕರಿಸಿದ್ದಾರೆಂದು ಎಎನ್‍ಐ ವರದಿ ಮಾಡಿತ್ತಲ್ಲದೆ, ಸೇನೆಯ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಂ ಎಲ್ ನಾಯ್ಡು ಕೂಡ ಈ ಪತ್ರಕ್ಕೆ ತಮ್ಮ ಒಪ್ಪಿಗೆ ಪಡೆದಿರಲಿಲ್ಲ ಎಂದು ಹೇಳಿದ್ದಾರೆಂದು ಎಎನ್‍ಐ ವರದಿ ಮಾಡಿತ್ತು.

ಆದರೆ ಎಎನ್‍ಐ ತನ್ನ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿದೆ ಎಂದು ಎಪ್ರಿಲ್ 14ರಂದು ಎಂ.ಎಲ್. ನಾಯ್ಡು ಆರೋಪಿಸಿದ್ದರೆಂದು ದಿ ಟೆಲಿಗ್ರಾಫ್ ವರದಿ ಮಾಡಿತ್ತು. ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಇಮೇಲ್ ಮೂಲಕ ನಾಯ್ಡು ಎಪ್ರಿಲ್ 8ರಂದು ಬೆಂಬಲಿಸಿದ್ದರು ಎಂದು ಪತ್ರಕ್ಕೆ ಸಹಿ ಹಾಕಿದ್ದ ಇತರ ಮಾಜಿ ಸೇನಾಧಿಕಾರಿಗಳು ತಿಳಿಸಿದ್ದರು.

 ಮಾಜಿ ಸೇನಾಧಿಕಾರಿಗಳ ಅಪೀಲನ್ನು ತಪ್ಪಾಗಿ ಬಿಂಬಿಸಲು ಎಎನ್‍ಐ ಯತ್ನಿಸಿದೆ ಎಂಬ ‘ದಿ ವೈರ್’ ಹಾಗೂ ‘ನ್ಯೂಸ್‍ ಸೆಂಟ್ರಲ್ 24 x7’ ವರದಿಗಳನ್ನೂ ಚೌಧುರಿ ಉಲ್ಲೇಖಿಸಿದ್ದಾರೆ.

“ನನ್ನ ಮಾತುಗಳನ್ನು ದೃಶ್ಯ ಮಾಧ್ಯಮ ಮುಖ್ಯವಾಗಿ ಎಎನ್‍ಐ ಉಲ್ಲೇಖಿಸಿದೆಯೆಂದು ಸ್ನೇಹಿತರು ತಿಳಿಸಿದ್ದಾರೆ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ನಂತರ ಎಎನ್‍ಐ ಅಪರಾಹ್ನ ನನ್ನನ್ನು ಸಂಪರ್ಕಿಸಿ ನನ್ನ ಬಳಿ ತನ್ನ ತಂಡ ಕಳುಹಿಸಿತ್ತು. ಆ ಮಾತುಕತೆಯ  ಧ್ವನಿಮುದ್ರಿಕೆ ಕಳುಹಿಸುತ್ತಿದ್ದೇನೆ,'' ಎಂದು ನಾಯ್ಡು ನಿವೃತ್ತ ಮೇಜರ್ ಜನರಲ್ ಎಸ್ ಜಿ ಒಂಬತ್ಕೆರೆ ಅವರಿಗೆ ಪತ್ರ ಬರೆದಿದ್ದರೆಂದು ನ್ಯೂಸ್ ಸೆಂಟ್ರಲ್ ಎಪ್ರಿಲ್ 16ರಂದು ವರದಿ ಮಾಡಿತ್ತು.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎಎನ್‍ಐ ಲೈವ್ ಸರ್ವಿಸಸ್ ಸಂಪಾದಕ ಇಶಾನ್ ಪ್ರಕಾಶ್,  ``ಎಎನ್‍ಐ ಗೌರವಕ್ಕೆ ಚ್ಯುತಿ ತರಲು ಸ್ಥಾಪಿತ ಹಿತಾಸಕ್ತಿಗಳು ಯತ್ನಿಸುತ್ತಿವೆ'' ಎಂದರಲ್ಲದೆ  ಮಾಜಿ ಸೇನಾಧಿಕಾರಿಗಳ ಪತ್ರದ ಬಗ್ಗೆ ಉಲ್ಲೇಖಿಸಿ ಅವರನ್ನು ಬೆಂಬಲಿಸಿ ಹಾಗೂ ವಿರೋಧಿಸಿ ಕೆಲವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಎಎನ್‍ಐ ಪ್ರಕಟಿಸಿದೆ. ಎಲ್ಲಾ ಉಲ್ಲೇಖಗಳಿಗೆ ಆಡಿಯೋ ಮತ್ತು ವೀಡಿಯೋ ಸಾಕ್ಷ್ಯಗಳಿವೆ. ಆದುದರಿಂದ ನಮ್ಮ ವಿರುದ್ಧದ ಆರೋಪ ನಿರಾಧಾರ,''ಎಂದಿದ್ದಾರೆ.

“ತಾವು ಪತ್ರಕ್ಕೆ ಸಹಿ ಹಾಕಿರುವ ಬಗ್ಗೆ ಕೆಲ ಮಾಜಿ ಅಧಿಕಾರಿಗಳು ನಿರಾಕರಿಸಿದ್ದಾರೆಂಬ ಬಗ್ಗೆ ಎಎನ್‍ಐ ಹೇಳಿಕೊಂಡಿರುವುದು ಅದರ ಉದ್ದೇಶಗಳ ಬಗ್ಗೆ ಸಂಶಯ ಮೂಡಿಸುತ್ತದೆ.  ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳ ವೇಳೆ ಈ ರೀತಿ  ತಾರತಮ್ಯಕಾರಿ ನಿಲುವಿನಿಂದ  ಪ್ರಭಾವ ಬೀರುವ ಯತ್ನ ಇದಾಗಿರಬಹುದು'' ಎಂದು ಚೌಧುರಿ ಹೇಳಿದ್ದಾರೆ.

ತನ್ನ ಪಾಲುದಾರರ ಸಂಪಾದಕೀಯ ಪದ್ಧತಿಗಳನ್ನು ಥಾಮ್ಸನ್ ರಾಯ್ಟರ್ಸ್ ಹೇಗೆ ಪರಿಶೀಲಿಸುತ್ತದೆ ಹಾಗೂ  ನಮ್ಮ ನೈಜ ಅಪೀಲಿನ ಬನಗ್ಗೆ ತಪ್ಪಾಗಿ ವರದಿ ಮಾಡಿರುವುದು ಎಎನ್‍ಐ ಮಾನದಂಡಗಳಿಗೆ ಪೂರಕವಾಗಿದೆಯೇ  ಎಂದು ಚೌಧುರಿ ಪ್ರಶ್ನಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X