ವಾರಣಾಸಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ನದ್ದು ಬುದ್ಧಿವಂತ ತೀರ್ಮಾನ: ಸುರೇಶ್ ಕುಮಾರ್
ಬೆಂಗಳೂರು, ಎ. 25: ‘ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ಏಕೈಕ ಬುದ್ಧಿವಂತ ತೀರ್ಮಾನವೆಂದರೆ ವಾರಣಾಸಿಯಲ್ಲಿ ಪ್ರಿಯಾಂಕ ವಾದ್ರಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡದಿರುವುದು!’ ಎಂದು ಬಿಜೆಪಿ ಮುಖಂಡ ಎಸ್. ಸುರೇಶ್ಕುಮಾರ್ ಲೇವಡಿ ಟ್ವಿಟ್ಟರ್ ಮೂಲಕ ಮಾಡಿದ್ದಾರೆ.
‘ಮೊದಲ ಕುಟುಂಬಕ್ಕೆ ಬಹಳ ಬುದ್ಧಿವಂತಿಕೆ ಇದೆ. ವಾರಣಾಸಿಯಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ನಿಲ್ಲಿಸುತ್ತಿಲ್ಲ. ಹರಕೆಯ ಕುರಿ ಬೇರೆಯವರೆ ಆಗಬೇಕಲ್ಲವೇ?’ ಎಂದು ಮತ್ತೊಂದು ಟ್ವಿಟ್ನಲ್ಲಿ ಎಸ್.ಸುರೇಶ್ ಕುಮಾರ್ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
Next Story