ಅತ್ಯಾಚಾರ ಪ್ರಕರಣ : ಅಸಾರಾಮ್ ಪುತ್ರ ನಾರಾಯಣ ಸಾಯಿ ದೋಷಿ

ಸೂರತ್, ಎ.26: ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಪುತ್ರ ನಾರಾಯಣ ಸಾಯಿ ತಪ್ಪಿಸ್ಥನೆಂದು ಗುಜರಾತ್ ನ ಸೂರತ್ ನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಎ.30ರಂದು ಪ್ರಕಟಿಸಲಿದೆ.
ಅಸಾರಾಮ್ ಬಾಪು ಮತ್ತು ಪುತ್ರ ನಾರಾಯಣ ಸಾಯಿ ಎಂಬವರು ತಮ್ಮ ಮೇಲೆ 2002ರಿಂದ 2005ರ ತನಕ ನಿರಂತರ ಅತ್ಯಾಚಾರ ನಡೆಸಿರುವುದಾಗಿ ಸಹೋದರಿಯರಿಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನಾರಾಯಣ ಸಾಯಿಯನ್ನು 2013ರಲ್ಲಿ ಬಂಧಿಸಲಾಗಿತ್ತು. ಅಸಾರಾಮ್ ಬಾಪು ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಎದುರಿಸುತ್ತಿದ್ದಾನೆ.
Next Story