ನೆಲಮಂಗಲ: ಕಲ್ಯಾಣಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ ಐವರು ನೀರುಪಾಲು
![ನೆಲಮಂಗಲ: ಕಲ್ಯಾಣಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ ಐವರು ನೀರುಪಾಲು ನೆಲಮಂಗಲ: ಕಲ್ಯಾಣಿಯಲ್ಲಿ ಸ್ನಾನಕ್ಕಿಳಿದ ಒಂದೇ ಕುಟುಂಬದ ಐವರು ನೀರುಪಾಲು](https://www.varthabharati.in/sites/default/files/images/articles/2019/04/27/188720-1556358710.jpeg)
ಬೆಂಗಳೂರು, ಎ.27: ಕಲ್ಯಾಣಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವತಿಯರ ಸಹಿತ ಒಂದೇ ಕುಟುಂಬದ ಐವರು ನೀರುಪಾಲಾದ ಘಟನೆ ನೆಲಮಂಗಲ ತಾಲೂಕಿನ ಸಿದ್ಧರಬೆಟ್ಟು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ನೀರುಪಾಲಾದವರನ್ನು ಕೆಂಗೇರಿ ನಿವಾಸಿಗಳಾದ ರೇಷ್ಮಾ(22) ಮುಬೀನ್ ತಾಜ್(21), ಯಾರಬ್ ಖಾನ್(21), ಸಲ್ಮಾನ್ ಹಾಗೂ ಮುನೀರ್ ಖಾನ್(49) ಎಂದು ಗುರುತಿಸಲಾಗಿದೆ.
ನೆಲಮಂಗಲದಲ್ಲಿರುವ ಸಿದ್ಧರಬೆಟ್ಟದಲ್ಲಿರುವ ಕಲ್ಯಾಣಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ಪ್ರವಾಸ ಬಂದಿದ್ದ ಕೆಂಗೇರಿ ನಿವಾಸಿಗಳು ಸ್ನಾನಕ್ಕಿಳಿದಿದ್ದಾರೆ. ಮೊದಲು ಕಲ್ಯಾಣಿಗೆ ಇಳಿದಿದ್ದ ರೇಷ್ಮಾ, ಸಲ್ಮಾನ್ ಹಾಗೂ ಯಾರಬ್ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದಾರೆನ್ನಲಾಗಿದೆ. ಇವರನ್ನು ರಕ್ಷಿಸಲು ಮುಂದಾದ ಮುನೀರ್ ಖಾನ್ ಮತ್ತು ಸಲ್ಮಾನ್ ಕೂಡಾ ನೀರುಪಾಲಾದರು ಎಂದು ತಿಳಿದುಬಂದಿದೆ.
ಈ ಬಗ್ಗೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story