ಪರ್ಲಡ್ಕ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

ಪುತ್ತೂರು,ಎ.28 : ಖಿಳ್ರಿಯಾ ಯಂಗ್ ಮೆನ್ಸ್ ಪರ್ಲಡ್ಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು ಸಹಬಾಗಿತ್ವದಲ್ಲಿ 'ಮರ್ಹೂಮ ಮೈಮೂನ ಹಜ್ಜುಮ್ಮ ಪರ್ಲಡ್ಕ’ ಅವರ ಸವಿ ನೆನಪಿಗಾಗಿ ರಕ್ತದಾನ ಶಿಬಿರ ಇಂದು ಖಿಳ್ರ್ ಮಸ್ಜಿದ್ ಪರ್ಲಡ್ಕದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಹ್ಯುದ್ದೀನ್ ಜುಮಾ ಮಸ್ಜಿದ್ ಗೋಳಿಕಟ್ಟೆ ಖತೀಬರಾದ ಮುಹಮ್ಮದ್ ಅಲಿ ದಾರಿಮಿ ಉಸ್ತಾದ್ ರವರು ದುವಾ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,"ಜಾತಿ ಮತ ನೋಡದೆ ಎಲ್ಲಾ ಮನುಷ್ಯರು ಮಾಡಬೇಕಾದ ಸತ್ಕರ್ಮವಾಗಿದೆ ರಕ್ತದಾನ. ತನಗೆ ರಕ್ತದ ಆವಶ್ಯಕತೆ ಬಂದಾಗ ಯಾವುದೇ ಕೋಮುವಾದಿಯೂ ಕೂಡಾ ನನ್ನದೇ ಧರ್ಮದ ಜನರ ರಕ್ತ ಬೇಕೆಂದು ಹೇಳಿದ ಇತಿಹಾಸ ಇಲ್ಲ. ಇಸ್ಲಾಮಿನಲ್ಲಿ ಅತ್ಯುನ್ನತ ಸ್ಥಾನವಿರುವ ಒಂದು ಕಾರ್ಯವಾಗಿದೆ ದಾನ ನೀಡುವುದು. ಅದರಲ್ಲೊಂದಾಗಿದೆ ರಕ್ತದಾನ ಮಾಡುವುದು",ಎಂದರು.
ಸಭಾಧ್ಯಕ್ಷತೆಯನ್ನು ಖಿಳ್ರ್ ಮಸ್ಜಿದ್ ಪರ್ಲಡ್ಕ ಖತೀಬರಾದ ಶಾಹುಲ್ ಹಮೀದ್ ಮುಸ್ಲಿಯಾರ್ ರವರ ಉಪಸ್ಥಿತಿಯಲ್ಲಿ ಮುಹ್ಯುದ್ದೀನ್ ಜುಮಾ ಮಸ್ಜಿದ್ ಗೋಳಿಕಟ್ಟೆ ಇದರ ಅಧ್ಯಕ್ಷರಾದ ಶಾಬಾನ್ ಮಚ್ಚಿಮಲೆಯವರು ವಹಿಸಿದ್ದರು.
ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 34 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.
ಮುಖ್ಯ ಅತಿಥಿಗಳಾಗಿ ಪಿ.ಕೆ ಅಬೂಬಕ್ಕರ್(ಅಧ್ಯಕ್ಷರು,ಖಿಳ್ರ್ ಮಸ್ಜಿದ್ ಪರ್ಲಡ್ಕ), ಮೂಸಾ ಹಾಜಿ ಕುಂಜೂರು(ಕಾರ್ಯದರ್ಶಿ,ಪುಣಚ ಜುಮಾ ಮಸ್ಜಿದ್), ಮುಹಮ್ಮದ್ ಅಬ್ಬು ಹಾಜಿ ಪರ್ಲಡ್ಕ ,ಝೈನುದ್ದೀನ್ ಪರ್ಲಡ್ಕ(ಸದಸ್ಯರು,ಖಿಳ್ರ್ ಮಸ್ಜಿದ್ ಪರ್ಲಡ್ಕ),ಡಾ.ರಾಮಚಂದ್ರ(ವೈದ್ಯಾಧಿಕಾರಿಗಳು,ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು),ಇಸ್ಮಾಯಿಲ್ ಅರಸೀಕೆರೆ, ಶಮೀರ್ ಪರ್ಲಡ್ಕ(ಉದ್ಯಮಿ,ಪುತ್ತೂರು),ಅಶ್ರಫ್ ಗೋಳಿಕಟ್ಟೆ(ಅಧ್ಯಕ್ಷರು,ಎಸ್ ಡಿ ಪಿ ಐ ಪರ್ಲಡ್ಕ),ಹಂಝ ಹಾಜಿ ಪರ್ಲಡ್ಕ(ಫಿಶ್ ಮರ್ಚಂಟ್,ಪುತ್ತೂರು),ಎ.ಕೆ ಅಬೂಬಕ್ಕರ್ ಪರ್ಲಡ್ಕ(ಸದಸ್ಯರು,ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪುತ್ತೂರು),ಉಸ್ಮಾನ್ ಪರ್ಲಡ್ಕ(ಫಿಶ್ ಮರ್ಚoಟ್,ಪುತ್ತೂರು),ಸುಹೈಲ್ ಖಾನ್(ಅಧ್ಯಕ್ಷರು,ಎಸ್ ಡಿ ಪಿ ಐ ಮಂಗಳೂರು ಯುನಿಟ್),ಮುಹಮ್ಮದ್ ನೌಶಿಕ್(ಉದ್ಯಮಿ,ಮಂಗಳೂರು),ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ನಿರ್ವಾಹಕರಾದ ಇಫಾಝ್ ಬನ್ನೂರು, ನಝೀರ್ ಪಿ ಸಿ,ಇಮ್ರಾನ್ ಅಡ್ಡೂರು, ಖಿಳ್ರಿಯಾ ಯಂಗ್ ಮೆನ್ಸ್ ಕಾರ್ಯದರ್ಶಿ ಇಬ್ರಾಹಿಂ ಪರ್ಲಡ್ಕ, ಸದಸ್ಯರಾದ ಶಂಸುದ್ದೀನ್ ಪರ್ಲಡ್ಕ, ಅನ್ಸಾರ್ ಪರ್ಲಡ್ಕ, ಅಝಮ್ ಪರ್ಲಡ್ಕ, ಫಾರೂಕ್ ಪರ್ಲಡ್ಕ, ಹಾರೀಸ್ ಕೋಡಿಯಾಡಿ, ನಿಝಾಮುದ್ದೀನ್ ಪರ್ಲಡ್ಕ, ಸಿನಾನ್ ಪಡೀಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 'ಮರ್ಹೂಮ ಮೈಮೂನ ಹಜ್ಜುಮ್ಮ ಪರ್ಲಡ್ಕ’ ಅವರ ಸವಿ ನೆನಪಿಗಾಗಿ ಪರ್ಲಡ್ಕ ಜಮಾಅತಿನ ನಾಗರಿಕರ ಆವಶ್ಯಕತೆಗೆ ಉಪಯೋಗಿಸಲು ಗಾಲಿ ಕುರ್ಚಿ ಹಾಗು ಖಿಳ್ರ್ ಮಸ್ಜಿದ್ ನಲ್ಲಿ ಅಳವಡಿಸಲು ಸೀಲಿಂಗ್ ಫ್ಯಾನನ್ನು ಹಸ್ತಾoತರಿಸಿದರು.
ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.


















