Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 1915ರಲ್ಲಿ ಕಳವಾದ ವಿಗ್ರಹ ಅರ್ಚಕನ...

1915ರಲ್ಲಿ ಕಳವಾದ ವಿಗ್ರಹ ಅರ್ಚಕನ ಮನೆಯಲ್ಲಿ ಪತ್ತೆ

ಬ್ರಿಟಿಷ್ ಪೊಲೀಸರಿಗೂ ಈ ಬಗ್ಗೆ ಹೋಗಿತ್ತು ದೂರು !

ವಾರ್ತಾಭಾರತಿವಾರ್ತಾಭಾರತಿ29 April 2019 10:11 PM IST
share
1915ರಲ್ಲಿ ಕಳವಾದ ವಿಗ್ರಹ ಅರ್ಚಕನ ಮನೆಯಲ್ಲಿ ಪತ್ತೆ

ಹೊಸದಿಲ್ಲಿ, ಎ. 29: ಮಧುರೈ ಸಮೀಪದ ದೇವಾಲಯದಿಂದ 1915ರಲ್ಲಿ ಕಳವಾಗಿದ್ದ ವಿಗ್ರಹ ಮನೆಯೊಂದರ ಗೋಡೆಯ ಒಳಗೆ ಪತ್ತೆಯಾಗಿದೆ. ಈ ವಿಗ್ರಹ 700 ವರ್ಷ ಪ್ರಾಚೀನವಾದುದು ಎಂದು ನಂಬಲಾಗಿದೆ. ದೇವಾಲಯದ ಇಬ್ಬರು ಅರ್ಚಕರಲ್ಲಿ ಒಬ್ಬರಾದ ಕಂದಸಾಮಿ ಈ ವಿಗ್ರಹವನ್ನು ದೇವಾಲಯದಿಂದ 1915ರಲ್ಲಿ ಕಳವುಗೈದಿದ್ದರು. ಈ ದೇವಾಲಯ ಮಧುರೈ ಸಮೀಪದ ಮೇಲೂರ್‌ನ ನಾಗೈಕ್ಕಡಾಯಿ ಬೀದಿಯಲ್ಲಿ ಇದೆ.

 ಈ ದೇವಾಲಯ 800 ವರ್ಷ ಹಳೆಯದ್ದೆಂದು ವರದಿ ಹೇಳಿದೆ. ಇನ್ನೋರ್ವ ಅರ್ಚಕನೊಂದಿಗಿನ ಭಿನ್ನಾಭಿಪ್ರಾಯದಿಂದ ಕಂದಸ್ವಾಮಿ ಈ ವಿಗ್ರಹವನ್ನು ಕಳವುಗೈದು ತನ್ನ ಮನೆಗೆ ಕೊಂಡೊಯ್ದಿದ್ದರು. ಈ ಬಗ್ಗೆ ಬ್ರಿಟಿಶ್ ಪೊಲೀಸರಿಗೆ ದೂರು ನೀಡಲಾಗಿತ್ತು. ಅವರು ತನಿಖೆ ನಡೆಸಿದ್ದರು. ಆದರೆ, ವಿಗ್ರಹ ಪತ್ತೆಯಾಗಿರಲಿಲ್ಲ. ಈ ನಡುವೆ ಕಂದಸಾಮಿ ಗೋಡೆಯಲ್ಲಿ ರಂಧ್ರ ಕೊರೆದು ಈ ವಿಗ್ರಹವನ್ನು ಇರಿಸಿದ್ದರು. ಅನಂತರ ಗೋಡೆಗೆ ಸಾರಣೆ ಮಾಡಿದ್ದರು. ಆರು ತಿಂಗಳ ಹಿಂದೆ ಕಂದಸಾಮಿ ಮೊಮ್ಮಗ ಹಾಗೂ ನಮಕ್ಕಲ್‌ನಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಕೆ. ಮುರುಗೇಶನ್ ಅದೇ ದೇವಾಲಯಕ್ಕೆ ತೆರಳಿ ‘‘ನನ್ನ ಅಜ್ಜ ವಿಗ್ರಹವನ್ನು ಪೂರ್ವಜರ ಮನೆಯ ಗೋಡೆಯಲ್ಲಿ ಅಡಗಿಸಿ ಇಟ್ಟಿರುವ ಸಾಧ್ಯತೆ ಇದೆ” ಎಂದು ತಿಳಿಸಿದ್ದರು. ತಾತ ನಿರ್ದಿಷ್ಟ ಗೋಡೆಯ ಎದುರು ಪ್ರಾರ್ಥನೆ ಮಾಡುತ್ತಿದ್ದುದು ಅವರ ಸಂಶಯಕ್ಕೆ ಇನ್ನಷ್ಟು ಪುಷ್ಠಿ ನೀಡಿತ್ತು

 ಮರುಗೇಶನ್ ನೀಡಿದ ದೂರಿನ ಆದಾರದಲ್ಲಿ ಆ ಮನೆ ಧ್ವಂಸ ಮಾಡಲು ಮನೆಯ ಈಗಿನ ಮಾಲಕರಲ್ಲಿ ಪೊಲೀಸರು ಅನುಮತಿ ಕೋರಿದ್ದರು. ಅನುಮತಿಯೊಂದಿಗೆ ರವಿವಾರ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮರುಗೇಶನ್ ಹೇಳಿದ ಖಚಿತ ಸ್ಥಳದಲ್ಲಿ ವಿಗ್ರಹ ಪತ್ತೆಯಾಯಿತು. ವಿಗ್ರಹ 1.5 ಅಡಿ ಎತ್ತರವಿದೆ. ಅದು ದ್ರುಪದಿ ಅಮ್ಮನ್ ವಿಗ್ರಹ. ದೇವಾಲಯದಲ್ಲಿ ಕಾಯ್ದುಕೊಂಡು ಬರಲಾದ ದಾಖಲೆ ಹಾಗೂ ವಿಗ್ರಹದ ವಿವರಕ್ಕೆ ಹೋಲಿಕೆಯಾಗುತ್ತಿದೆ. ಅನಂತರ ಈ ವಿಗ್ರಹವನ್ನು ದೇವಾಲಯಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X