Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕುತ್ತಿಗೆ ಪಟ್ಟಿ ಹೊಂದಿರುವ ‘ಬೇಹುಗಾರ’...

ಕುತ್ತಿಗೆ ಪಟ್ಟಿ ಹೊಂದಿರುವ ‘ಬೇಹುಗಾರ’ ತಿಮಿಂಗಿಲ ಪತ್ತೆ

ವಾರ್ತಾಭಾರತಿವಾರ್ತಾಭಾರತಿ30 April 2019 8:21 PM IST
share
ಕುತ್ತಿಗೆ ಪಟ್ಟಿ ಹೊಂದಿರುವ ‘ಬೇಹುಗಾರ’ ತಿಮಿಂಗಿಲ ಪತ್ತೆ

ಓಸ್ಲೊ (ನಾರ್ವೆ), ಎ. 30: ಕುತ್ತಿಗೆ ಪಟ್ಟಿ ಹೊಂದಿರುವ ಬಿಳಿ ಬಣ್ಣದ ‘ಬಿಲೂಗ’ ತಿಮಿಂಗಿಲವೊಂದನ್ನು ನಾರ್ವೆಯ ಮೀನುಗಾರರು ಪತ್ತೆಹಚ್ಚಿದ್ದಾರೆ.

ಈ ಕುತ್ತಿಗೆ ಪಟ್ಟಿಯು ರಶ್ಯ ನಿರ್ಮಿತವೆಂಬುದಾಗಿ ಕಂಡುಬಂದಿದ್ದು, ತಿಮಿಂಗಿಲವು ರಶ್ಯದ ಸೇನಾ ನೆಲೆಯೊಂದರಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಊಹಾಪೋಹಗಳು ಹಬ್ಬಿವೆ.

ತಿಮಿಂಗಿಲದ ಇರುವಿಕೆಯು ನಾರ್ವೆಯಲ್ಲಿ ಭಯ ಹುಟ್ಟಿಸಿದೆ ಹಾಗೂ ತನಿಖೆಗೆ ಆದೇಶ ನೀಡಲಾಗಿದೆ ಎಂದು ‘ಐಟಿವಿ ನ್ಯೂಸ್’ ವರದಿ ಮಾಡಿದೆ.

ಪಳಗಿಸಲ್ಪಟ್ಟಿರುವ ತಿಮಿಂಗಿಲವು ಇಂಗೋಯ ದ್ವೀಪದ ಸಮೀಪದ ಸಮುದ್ರದಲ್ಲಿ ನಾರ್ವೆಯ ಮೀನುಗಾರಿಕಾ ದೋಣಿಗಳ ಬಳಿಗೆ ಬರುತ್ತಿವೆ ಎಂದು ಬಿಬಿಸಿ ಹೇಳಿದೆ. ಇಂಗೋಯ ದ್ವೀಪವು ಮುರ್ಮನ್‌ಸ್ಕ್‌ನಿಂದ ಸುಮಾರು 415 ಕಿ.ಮೀ. ದೂರದಲ್ಲಿದೆ. ಮುರ್ಮನ್‌ಸ್ಕ್‌ನಲ್ಲಿ ರಶ್ಯವು ನೌಕಾ ನೆಲೆಯೊಂದನ್ನು ಹೊಂದಿದೆ.

ನಾರ್ವೆ ಮೀನುಗಾರಿಕಾ ಇಲಾಖೆಯ ಜೋರ್ಗನ್ ರೀ ವೀಗ್ ಮತ್ತು ಮೀನುಗಾರ ಜೋರ್ ಹೆಸ್ಟನ್ ಶುಕ್ರವಾರ ಆರ್ಕ್‌ಟಿಕ್ ನಾರ್ವೆಯ ಶೀತಲ ನೀರಿಗೆ ಜಿಗಿದು ತಿಮಿಂಗಿಲದ ಕುತ್ತಿಗೆ ಪಟ್ಟಿಯನ್ನು ಬಿಡಿಸಿದ್ದಾರೆ. ಈ ಪಟ್ಟಿಯಲ್ಲಿ ‘ಈಕ್ವಿಪ್‌ಮೆಂಟ್ ಸೇಂಟ್ ಪೀಟರ್ಸ್‌ಬರ್ಗ್’ ಎಂಬುದಾಗಿ ಬರೆದಿದೆ ಹಾಗೂ ಕ್ಯಾಮರವನ್ನು ಜೋಡಿಸಲು ಅದರಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಎಂದು ‘ಯುರೋ ನ್ಯೂಸ್’ ವರದಿ ಮಾಡಿದೆ.

ರಶ್ಯ ಸೇನೆಯು ಬೇಹುಗಾರಿಕೆಗಾಗಿ ತಿಮಿಂಗಿಲಗಳಿಗೆ ತರಬೇತಿ ನೀಡುತ್ತಿದೆ ಎಂಬುದಾಗಿ ನಂಬಲಾಗಿದೆ ಎಂದು ನಾರ್ವೆಯ ‘ಆಫ್ಟರ್‌ಪೋಸ್ಟನ್’ ಪತ್ರಿಕೆ ವರದಿ ಮಾಡಿದೆ.

►ರಶ್ಯ ನಿರಾಕರಣೆ

ಆದಾಗ್ಯೂ, ರಶ್ಯದ ಸೇನಾಧಿಕಾರಿ ಕರ್ನಲ್ ವಿಕ್ಟರ್ ಬರನೆಟ್ಸ್ ಈ ಆರೋಪಗಳನ್ನು ಸಂದರ್ಶನವೊಂದರಲ್ಲಿ ತಳ್ಳಿಹಾಕಿದ್ದಾರೆ.

‘‘ಒಂದು ವೇಳೆ ನಾವು ಈ ತಿಮಿಂಗಿಲಗಳನ್ನು ಬೇಹುಗಾರಿಕೆಗಾಗಿ ಬಳಸಿದ್ದರೆ, ‘ದಯವಿಟ್ಟು ಈ ಸಂಖ್ಯೆಗೆ ಕರೆ ಮಾಡಿ’ ಎಂಬ ಸಂದೇಶದೊಂದಿಗೆ ನಾವು ಮೊಬೈಲ್ ಸಂಖ್ಯೆಯನ್ನು ಕೊಡುತ್ತೇವೆಯೇ?’’ ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.

‘‘ಯುದ್ಧದಲ್ಲಿ ಭಾಗವಹಿಸುವ ಸೇನಾ ಡಾಲ್ಫಿನ್‌ಗಳನ್ನು ನಾವು ಹೊಂದಿದ್ದೇವೆ. ಅದನ್ನು ನಾವು ಮುಚ್ಚಿಡುವುದಿಲ್ಲ’’ ಎಂಬುದಾಗಿಯೂ ಅವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X