Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿವಾದಕ್ಕೆ ಗ್ರಾಸವಾದ ಮೋದಿ ಆಸ್ತಿ ವಿವರ:...

ವಿವಾದಕ್ಕೆ ಗ್ರಾಸವಾದ ಮೋದಿ ಆಸ್ತಿ ವಿವರ: ಚುನಾವಣಾ ಅಫಿದಾವಿತ್ ಸುತ್ತ ಸಂಶಯದ ಹುತ್ತ !

ಪ್ರಧಾನಿಯ ಅಫಿದಾವಿತ್‌ಗಳಲ್ಲಿರುವ ಭಿನ್ನತೆಗಳೇನು?: ಇಲ್ಲಿದೆ ವಿವರ

ವಾರ್ತಾಭಾರತಿವಾರ್ತಾಭಾರತಿ30 April 2019 8:38 PM IST
share
ವಿವಾದಕ್ಕೆ ಗ್ರಾಸವಾದ ಮೋದಿ ಆಸ್ತಿ ವಿವರ: ಚುನಾವಣಾ ಅಫಿದಾವಿತ್ ಸುತ್ತ ಸಂಶಯದ ಹುತ್ತ !

ಹೊಸದಿಲ್ಲಿ, ಎ.30: ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಒಡೆತನದ ವಸತಿ ನಿವೇಶನವೊಂದು ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಈ ನಿವೇಶನದ ಒಡೆತನದ ಕುರಿತು ಪ್ರಧಾನಿ ಸಲ್ಲಿಸಿದ್ದ ವಿವಿಧ ಚುನಾವಣಾ ಅಫಿದಾವಿತ್‌ಗಳಲ್ಲಿ ಭಿನ್ನತೆಗಳು ಕಂಡುಬಂದಿರುವುದು ಪ್ರತಿಪಕ್ಷಗಳಿಗೆ ಟೀಕಾಸ್ತ್ರವನ್ನೊದಗಿಸಿದೆ.

2019ರ ಎಪ್ರಿಲ್ 26ರಂದು ನರೇಂದ್ರ ಮೋದಿ ಅವರು ವಾರಣಾಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಸಂದರ್ಭದಲ್ಲಿ ಸಲ್ಲಿಸಿದ ಅಫಿದಾವಿತ್‌ನಲ್ಲಿ 2002ನೇ ಇಸವಿಯಿಂದೀಚೆಗೆ ಗಾಂಧೀನಗರದಲ್ಲಿ ತನ್ನ ಒಡೆತನದಲ್ಲಿರುವ ನಿವೇಶನನ್ನು 2008ರಲ್ಲಿ ಅದಕ್ಕೆ ಹೊಂದಿಕೊಂಡಿರುವ ಇತರ ಮೂರು ನಿವೇಶನಗಳ ಜೊತೆ ವಿಲೀನಗೊಳಿಸಲಾಗಿದೆಯೆಂದು ತಿಳಿಸಿದ್ದರು.

ಅಫಿದಾವಿತ್‌ನ ವಿವರಗಳು ಬಹಿರಂಗಗೊಂಡ ಬೆನ್ನಲ್ಲೇ ಮಾಜಿ ಪತ್ರಕರ್ತ ಸಾಕೇತ್ ಗೋಖಲೆ ಅವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದು, ಮೋದಿಯವರು 2007ರಿಂದೀಚೆಗೆ ತನ್ನ ಚುನಾವಣಾ ಅಫಿದಾವಿತ್‌ಗಳಲ್ಲಿ ತನ್ನ ಭೂ ಆಸ್ತಿಗಳ ವಿವರಗಳ ಕುರಿತು ಮಹತ್ವದ ವಿವರಗಳನ್ನು ನೀಡಿಲ್ಲ. ಈ ವಿಷಯವಾಗಿ ಭಾರತದ ಮಾಜಿ ಮುಖ್ಯನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಮೋದಿ ತನ್ನ ವಿವಿಧ ಅಫಿದಾವಿತ್‌ಗಳಲ್ಲಿ ಘೋಷಿಸಿರುವ ಭೂಆಸ್ತಿಯ ವಿವರಗಳಲ್ಲಿ ಹಲವಾರು ಭಿನ್ನತೆಗಳು ಕಂಡುಬಂದಿರುವ ಬಗ್ಗೆ ದಿ ಕಾರಾವನ್ ಪತ್ರಿಕೆಯು ತನಿಖಾ ವರದಿಯೊಂದನ್ನು ಪ್ರಕಟಿಸಿದೆ. 2012ಕ್ಕೆ ಮೊದಲು ಮೋದಿ ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಸಲ್ಲಿಸಿದ ಅಫಿದಾವಿತ್‌ಗಳಲ್ಲಿ ಅವರು, ಗುಜರಾತ್‌ನ ಗಾಂಧಿನಗರದ ಸೆಕ್ಟರ್ 1ರಲ್ಲಿ ಪ್ಲಾಟ್ ಸಂಖ್ಯೆ 411ರ ಒಡೆತನ ಹೊಂದಿರುವುದಾಗಿ ಉಲ್ಲೇಖಿಸಿದ್ದರು. 326.22 ಚದರ ಮೀಟರ್ ವಿಸ್ತೀರ್ಣದ ಈ ಜಮೀನಿನ ಮೌಲ್ಯ 1.3 ಲಕ್ಷ ರೂ.ಗಳಾಗಿತ್ತು. ಒಂದು ವೇಳೆ ಅದರ ಮಾರುಕಟ್ಟೆ ದರವನ್ನು ಈಗ ಲೆಕ್ಕಹಾಕುವುದಾದರೆ ಸುಮಾರು 1.18 ಕೋಟಿ ರೂ.ಆಗುತ್ತದೆ.

ಆದಾಗ್ಯೂ 2012ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ ಅಫಿದಾವಿತ್‌ನಲ್ಲಿ ಮೋದಿ ಈ ನಿವೇಶನದ ಬಗ್ಗೆ ಉಲ್ಲೇಖಿಸುವುದನ್ನು ನಿಲ್ಲಿಸಿದ್ದರು. ಬದಲಿಗೆ ಅವರು ತಾನು ಅದೇ ಸೆಕ್ಟರ್‌ನಲ್ಲಿರುವ 326.11 ಚದರ ಮೀಟರ್ ವಿಸ್ತೀರ್ಣದ 401/ಎ ನಿವೇಶನದ ನಾಲ್ಕನೆ ಒಂದಂಶದಷ್ಟು ಭಾಗದ ಮಾಲಕನೆಂದು ಘೋಷಿಸಿದ್ದರು. ಕುತೂಹಲಕರವೆಂದರೆ, ಗುಜರಾತ್‌ನ ಯಾವುದೇ ಭೂ ದಾಖಲೆಗಳಲ್ಲಿ 401/ಎ ಸಂಖ್ಯೆಯ ಯಾವುದೇ ನಿವೇಶನವನ್ನು ನಮೂದಿಸಲಾಗಿಲ್ಲ. ಭೂದಾಖಲೆಗಳಲ್ಲಿ ನರೇಂದ್ರ ಮೋದಿ ಅವರು ಗಾಂಧಿನಗರದ ಸೆಕ್ಟರ್ 1ರಲ್ಲಿರುವ ನಿವೇಶನ ಸಂಖ್ಯೆ 411ರ ಮಾಲಕನೆಂದು ಉಲ್ಲೇಖಿಸಲಾಗಿದೆ.

ಆದಾಗ್ಯೂ ಯಾವುದೇ ಅಫಿದಾವಿತ್‌ಗಳಲ್ಲಿ ತಾನು ಹೇಗೆ ಈ ಜಮೀನುಗಳನ್ನು ಸಂಪಾದಿಸಿದೆನೆಂಬ ಬಗ್ಗೆ ಮಾಹಿತಿಯನ್ನು ಮೋದಿ ನೀಡಿರದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

401ಎ ನಿವೇಶನದ ಮಾಲಕ ಮೋದಿ ಅಥವಾ ಜೇಟ್ಲಿ ?

401/ಎ ನಿವೇಶನದ ನಾಲ್ಕನೆ ಒಂದು ಭಾಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಒಡೆತನದಲ್ಲಿರುವುದು ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಜೇಟ್ಲಿ ಅವರು 2014ರ ಲೋಕಸಭಾ ಚುನಾವಣೆಗೆ ಪಂಜಾಬ್‌ನ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಅವರು ಅಫಿದಾವಿತ್‌ನಲ್ಲಿ ತಾನು ಗಾಂಧಿನಗರದ 401/ಎ, ಸೆಕ್ಟರ್-1 ನಿವೇಶನದ ನಾಲ್ಕನೆ ಒಂದು ಭಾಗವನ್ನು ಹೊಂದಿರುವುದಾಗಿ ಘೋಷಿಸಿದ್ದರು.

ಆದರೆ 2006ರಲ್ಲಿ ಜೇಟ್ಲಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿದ್ದ ಅಫಿದಾವಿತ್‌ನಲ್ಲಿ ಅವರು ಗಾಂಧಿನಗರದ ಸೆಕ್ಟರ್-1ರಲ್ಲಿರುವ ನಿವೇಶನ ಸಂ. 401ರ ಏಕೈಕ ಮಾಲಕ ತಾನೆಂದು ಘೋಷಿಸಿದ್ದರು. 326.22 ಮೀಟರ್ ವಿಸ್ತೀರ್ಣದ ಈ ನಿವೇಶನವನ್ನು ತಾನು 2.45 ಲಕ್ಷ ರೂ.ಗೆ ಖರೀದಿಸಿರುವುದಾಗಿ ಘೋಷಿಸಿದ್ದರು.

 ಸಾರ್ವಜನಿಕವಾಗಿ ಲಭ್ಯವಿರುವ ಗುಜರಾತ್‌ನ ಭೂದಾಖಲೆಗಳಲ್ಲಿ ಈಗಲೂ ಕೂಡಾ ಜೇಟ್ಲಿಯವರು ನಿವೇಶನ ಸಂಖ್ಯೆ 401ರ ಏಕೈಕ ಮಾಲಕನೆಂದು ಉಲ್ಲೇಖಿಸಲಾಗಿದೆ. ಗುಜರಾತ್ ಸರಕಾರದ ಭೂ ವಿತರಣೆ ನೀತಿಯ ಪ್ರಕಾರ, ರಾಜಕೀಯ ಹಾಗೂ ಆಡಳಿತ ಕ್ಷೇತ್ರದ ಕಾರ್ಯನಿರ್ವಾಹಕರುಗಳಿಗೆ ಸರಕಾರಿ ಜಮೀನನ್ನು ವಿತರಿಸುವ ಬಹುದಾಗಿದೆ. ಈ ಯೋಜನೆಯಡಿಯಲ್ಲಿಯೇ ಮೋದಿ ಹಾಗೂ ಜೇಟ್ಲಿ ನಿವೇಶನವನ್ನು ಖರೀದಿಸಿದ್ದಾರೆ.

ಮೋದಿಯವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದಾಗ ಈ ಯೋಜನೆಯಡಿ ಇಳಿಸಿದ ದರದಲ್ಲಿ ಈ ನಿವೇಶನವನ್ನು ಖರೀದಿಸಿದ್ದರು ಎಂದು ಗೋಖಲೆ ಹೇಳುತ್ತಾರೆ.

 ನ್ಯಾಯವಾದಿ ವೌಲಿನ್ ಬಾರೋಟ್ ಎಂಬವರು 2012ರಲ್ಲಿ ಹೈಕೋರ್ಟ್ ಮೆಟ್ಟಲೇರಿ ಗುಜರಾತ್ ಸರಕಾರದ ಭೂ ವಿತರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಗಮನಸೆಳೆದಿದ್ದರು. ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದಾಗ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಗುಜರಾತ್ ಹೈಕೋರ್ಟ್‌ಗೆ ಪ್ರಕರಣವನ್ನು ಸಾಧ್ಯವಾದಷ್ಟು ಬೇಗನೆ ಇತ್ಯರ್ಥಗೊಳಿಸುವಂತೆ ಸೂಚಿಸಿತು. ಅಲ್ಲಿಯವರೆಗೆ ಈ ಯೋಜನೆಯಡಿ ಭೂವಿತರಣೆ ಅಥವಾ ವರ್ಗಾವಣೆಯನ್ನು ನಿಷೇಧಿಸಿತು.

ಮೀನಾಕ್ಷಿ ಲೇಖಿ ಸುಪ್ರೀಂಕೋರ್ಟ್‌ಗೆ ದಾರಿ ತಪ್ಪಿಸಿದ್ದಾರೆಯೇ?

 2012ರಲ್ಲಿ ಗುಜರಾತ್ ಸರಕಾರದ ನ್ಯಾಯವಾದಿಯಾಗಿದ್ದ , ಹಾಲಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿಯವರು ಸುಪ್ರೀಂಕೋರ್ಟ್‌ಗೆ ನೀಡಿದ ವಿವರಣೆಯಲ್ಲಿ ಭೂವಿತರಣೆ ಯೋಜನೆಯಡಿ ಗುಜರಾತ್ ಸರಕಾರವು 2000ನೇ ಇಸವಿಯಿಂದೀಚೆಗೆ ರಾಜಕಾರಣಿಗಳಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಯಾವುದೇ ನಿವೇಶನ ವಿತರಿಸಿಲ್ಲವೆಂದು ತಿಳಿಸಿರುವುದನ್ನು ‘ಕಾರಾವಾನ್’ ಪತ್ರಿಕೆಯು ತನ್ನ ವರದಿಯುಲ್ಲಿ ಬೆಟ್ಟು ಮಾಡಿ ತೋರಿಸಿದೆ.

ಒಂದು ವೇಳೆ ಲೇಖಿ ಅವರ ಹೇಳಿಕೆಯನ್ನು ನಂಬುವುದಾದರೆ, ಮೋದಿ ಹಾಗೂ ಜೇಟ್ಲಿಯವರಿಗೆ ಕ್ರಮವಾಗಿ 2002 ಹಾಗೂ 2003ರಲ್ಲಿ ಗುಜರಾತ್ ಸರಕಾರವು ಹೇಗೆ ಜಮೀನುಗಳನ್ನು ವಿತರಿಸಲಾಯಿತೆಂದು ಗೋಖಲೆ ಪ್ರಶ್ನಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆಗಳು ನಡೆಯುತ್ತಿರುವಂತೆಯೇ, ಗುಜರಾತ್ ಸರಕಾರವು ತನ್ನ ಭೂವಿತರಣೆೆ ನೀತಿಯಲ್ಲಿ ಮಾರ್ಪಾಡುಗಳನ್ನು ಮಾಡಿತು. ಭೂಹಂಚಿಕೆಯ ಸೌಲಭ್ಯಗಳನ್ನು ಅದು ಹೈಕೋರ್ಟ್ ನ್ಯಾಯಾಧೀಶರಿಗೂ ವಿಸ್ತರಿಸಿತು ಎಂದು ಗೋಖಲೆ ತಿಳಿಸಿದರು. ಕುತೂಹಲಕರವೆಂದರೆ, ಆನಂತರ ಹೈಕೋರ್ಟ್‌ನ ಸುಮಾರು 14 ಮಂದಿ ನ್ಯಾಯಾಧೀಶರು ಪ್ರಕರಣದ ವಿಚಾರಣೆಯಲ್ಲಿ ಪಾಲ್ಗೊಳ್ಳುವುದರಿಂದ ದೂರ ಸರಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X