Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. “ಮೋದಿ ಸರಕಾರದ ಆಡಳಿತದಲ್ಲಿ ದೇಶದ ಮೇಲಿನ...

“ಮೋದಿ ಸರಕಾರದ ಆಡಳಿತದಲ್ಲಿ ದೇಶದ ಮೇಲಿನ ಸಾಲ 30 ಲ.ಕೋ.ರೂ. ಏರಿಕೆ”

ವಾರ್ತಾಭಾರತಿವಾರ್ತಾಭಾರತಿ30 April 2019 8:42 PM IST
share
“ಮೋದಿ ಸರಕಾರದ ಆಡಳಿತದಲ್ಲಿ ದೇಶದ ಮೇಲಿನ ಸಾಲ 30 ಲ.ಕೋ.ರೂ. ಏರಿಕೆ”

ಹೊಸದಿಲ್ಲಿ,ಎ.30: ಬಿಜೆಪಿ ನೇತೃತ್ವದ ಸರಕಾರವು ಭಾರತದ ಆರ್ಥಿಕತೆಯನ್ನು ನಾಶಗೊಳಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ ಕಾಂಗ್ರೆಸ್,ಮೋದಿ ಸರಕಾರದ ಆಡಳಿತದ 57 ತಿಂಗಳುಗಳಲ್ಲಿ ದೇಶದ ಮೇಲಿನ ಸಾಲದ ಹೊರೆಯಲ್ಲಿ 30 ಲ.ಕೋ.ರೂ.ಗೂ ಅಧಿಕ ಏರಿಕೆಯಾಗಿದೆ ಮತ್ತು ದೇಶವನ್ನು ಅಂತ್ಯವಿಲ್ಲದ ಸಾಲದ ಸುಳಿಯಲ್ಲಿ ಸಿಲುಕಿಸಿದೆ ಎಂದು ಹೇಳಿದೆ.

ಮಾ.2014 ಮತ್ತು ಡಿ.2018ರ ನಡುವೆ ದೇಶದ ಸಾಲವು ಶೇ.57ರಷ್ಟು ಏರಿಕೆಯಾಗಿದ್ದು,83,40,026 ಕೋ.ರೂ.ಗೆ ತಲುಪಿದೆ ಎಂದು ವಿತ್ತ ಸಚಿವಾಲಯದ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದ ಕಾಂಗ್ರೆಸ್‌ ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು,ಈ ಅವಧಿಯಲ್ಲಿ ಮೋದಿ ಸರಕಾರವು 30,28,945 ಕೋ.ರೂ.ಗಳ ಸಾಲವನ್ನೆತ್ತಿದೆ ಎನ್ನುವ ಆಘಾತಕಾರಿ ಅಂಶವನ್ನು ವಿತ್ತಸಚಿವಾಲಯದ ದಾಖಲೆಗಳು ಪ್ರತಿಫಲಿಸಿವೆ. 70 ವರ್ಷಗಳಲ್ಲಿ ಮಾ.2014ರವರೆಗೆ ದೇಶದ ಮೇಲಿನ ಒಟ್ಟು ಸಾಲದ ಮೊತ್ತ 53,11,081 ಕೋ.ರೂ.ಗಳಾಗಿದ್ದವು. ಮೋದಿಯವರು ಭಾರತದ ಸಂಪನ್ಮೂಲಗಳ ಮೇಲೆ ಸಾಲಗಳನ್ನೆತ್ತಿದ್ದಾರೆ ಮತ್ತು ಭಾರತದ ಆರ್ಥಿಕತೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದ್ದಾರೆ ಎನ್ನವುದು ಸ್ಪಷ್ಟವಾಗಿದೆ ಎಂದರು.

ಮೋದಿ ಮತ್ತು ಅವರ ಸರಕಾರದ ಆರ್ಥಿಕ ದುರಾಡಳಿತದಿಂದಾಗಿ ಈ ದೇಶದ 130 ಕೋ.ಜನರು ಈ ಸರಕಾರದ ನಾಲ್ಕು ವರ್ಷ ಒಂಭತ್ತು ತಿಂಗಳ ಅಧಿಕಾರಾವಧಿಯಲ್ಲಿ ತಲಾ 23,300 ಕೋ.ರೂ.ಗಳ ಹೆಚ್ಚುವರಿ ಸಾಲದ ಹೊರೆಯನ್ನು ಹೊರುವಂತಾಗಿದೆ. ಮಾ.2014ರವರೆೆಗಿನ 70 ವರ್ಷಗಳಲ್ಲಿ ಜನರ ಮೇಲಿನ ಸಾಲದ ಹೊರೆ ತಲಾ 40,854 ರೂ.ಮಾತ್ರ ಆಗಿತ್ತು. ಅದೀಗ 64,154 ರೂ.ಗೇರಿದೆ ಎಂದ ಸುರ್ಜೆವಾಲಾ,ಮಾಹಿತಿಗಳನ್ನು ಬಚ್ಚಿಡುವುದು ಮೋದಿ ಸರಕಾರದ ಅಭ್ಯಾಸವಾಗಿದೆ. ಡಿ.2018ರಿಂದ ಮಾ.2019ರವರೆಗೆ ತಾನು ಎತ್ತಿರುವ ಹೆಚ್ಚುವರಿ ಸಾಲವನ್ನು ಬಹಿರಂಗಗೊಳಿಸಲು ಅದು ನಿರಾಕರಿಸಿದೆ ಎಂದರು.

ಸಾಲದ ದಾಖಲೆಗಳನ್ನು ತಡಕಾಡಿದಾಗ ಮಾ.2019ರವರೆಗೆ ಈ ಸರಕಾರವು ತೆಗೆದುಕೊಂಡಿರುವ ಹೆಚ್ಚುವರಿ ಸಾಲ 7,16,700 ಕೋ.ರೂ.ಆಗಲಿದೆ ಎನ್ನುವುದನ್ನು ಅವು ಸೂಚಿಸಿವೆ. ಇದರೊಂದಿಗೆ ದೇಶದ ಮೇಲಿನ ಸಾಲದ ಹೊರೆಯು 90,56,000 ಕೋ.ರೂ.ಗೆ ಏರುತ್ತದೆ ಎಂದ ಅವರು,ಬಿಜೆಪಿ ಸರಕಾರವು ಬಿಎಸ್‌ಎನ್‌ಎಲ್, ಎಂಟಿಎನ್‌ಎಲ್, ಎಚ್‌ಎಎಲ್,ಒಎನ್‌ಜಿಸಿ ಮತ್ತು ಸೇಲ್‌ನಂತಹ ಸಂಸ್ಥೆೆಗಳನ್ನೂ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿದೆ ಎಂದು ಆರೋಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X