ಚರ್ಚ್ ಗಳಲ್ಲಿ ರವಿವಾರದಿಂದ ಸಾಮೂಹಿಕ ಪ್ರಾರ್ಥನೆ ಆರಂಭ
ಕೊಲಂಬೊ, ಎ. 30: ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ ರವಿವಾರದಿಂದ ಪುನರಾರಂಭಗೊಳ್ಳಲಿದೆ ಎಂದು ಶ್ರೀಲಂಕಾದ ಕೆಥೋಲಿಕ್ ಚರ್ಚ್ ಹೇಳಿದೆ.
ಎಪ್ರಿಲ್ 21ರಂದು ಮೂರು ಚರ್ಚ್ಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಎಪ್ರಿಲ್ 28ರಂದು ಸಾಮೂಹಿಕ ಪ್ರಾರ್ಥನೆ ನಡೆದಿರಲಿಲ್ಲ.
ಈಸ್ಟರ್ ರವಿವಾರದ ಭಯೋತ್ಪಾದಕ ದಾಳಿಯ ಬಗ್ಗೆ ಸರಕಾರ ನಡೆಸುತ್ತಿರುವ ತನಿಖೆಗಳನ್ನು ಚರ್ಚ್ ನಿಕಟವಾಗಿ ಗಮನಿಸುತ್ತಿದೆ ಹಾಗೂ ದೈನಂದಿನ ಪ್ರಾರ್ಥನೆಗಳನ್ನು ಪುನರಾರಂಭಿಸುವ ಮುನ್ನ ಭದ್ರತಾ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಿದೆ ಎಂದು ಕಾರ್ಡಿನಲ್ ಮಾಲ್ಕಮ್ ರಂಜಿತ್ ಹೇಳಿದರು.
Next Story