Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಬಾಲಕೋಟ್ ದಾಳಿ ಆಗಿರದಿದ್ದರೆ ಬಿಜೆಪಿ 160...

ಬಾಲಕೋಟ್ ದಾಳಿ ಆಗಿರದಿದ್ದರೆ ಬಿಜೆಪಿ 160 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು : ಸುಬ್ರಮಣ್ಯನ್ ಸ್ವಾಮಿ

ವಾರ್ತಾಭಾರತಿವಾರ್ತಾಭಾರತಿ1 May 2019 1:13 PM IST
share
ಬಾಲಕೋಟ್ ದಾಳಿ ಆಗಿರದಿದ್ದರೆ ಬಿಜೆಪಿ 160 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು : ಸುಬ್ರಮಣ್ಯನ್ ಸ್ವಾಮಿ

ಬಾಲಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತ ವಾಯುದಾಳಿ ನಡೆಸಿರದೆ ಇದ್ದಿದ್ದರೆ ಬಿಜೆಪಿ ಈ ಬಾರಿ 160 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ. huffpost india ಗೆ ನೀಡಿದ ಸಂದರ್ಶನದಲ್ಲಿ ಮೋದಿ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಸ್ವಾಮಿ ಮತ್ತೆ ಎನ್ ಡಿ ಎ ಸರಕಾರ ಬಂದರೆ ನನ್ನನ್ನು ವಿತ್ತ ಸಚಿವ ಮಾಡಬೇಕು, ಇಲ್ಲದಿದ್ದರೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ನೇರವಾಗಿ ಹೇಳಿದ್ದಾರೆ. 

ಮೋದಿ ಸರಕಾರದಲ್ಲಿ ಅಧಿಕಾರದ ಅತಿ ಕೇಂದ್ರೀಕರಣ ಇದೆ ಎಂದು ದೂರಿರುವ ಸ್ವಾಮಿ ಮೋದಿ ಅವರು ಅಧಿಕಾರಿಗಳ ಮಾತು ಕೇಳಿ ಹಿರಿಯರನ್ನು ದೂರ ಮಾಡಬಾರದು. ಅವರಿಗೆ ಸುಲಭವಾಗಿ ಸಿಗಬೇಕು. ಈಗ ಪ್ರಮುಖ ನಿರ್ಧಾರಗಳು ಮೋದಿ ಮತ್ತು ಅವರ ಅತ್ಯಾಪ್ತ ಎರಡು ಮೂರು ಜನರೊಳಗೇ ಆಗುತ್ತವೆ. ಇದು ಸರಿಯಲ್ಲ. ಭಾರತದಂತಹ ಬೃಹತ್ ದೇಶದಲ್ಲಿ ಪ್ರಮುಖ ನಿರ್ಧಾರಗಳು ಸಂಪುಟದಲ್ಲಿ ವಿವರವಾಗಿ ಚರ್ಚೆಯಾಗಿ ಆಗಬೇಕು ಎಂದು ಅವರು ಹೇಳಿದ್ದಾರೆ. 

ಈ ಹಿಂದೆ ಹೇಳಿದಂತೆ ಮತ್ತೆ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದಿರುವ ಸ್ವಾಮಿ ಅವರಿಗೆ ಆರ್ಥಿಕತೆ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿ ವೈಫಲ್ಯ ಆಗಿದೆ. ಬಾಲಕೋಟ್ ದಾಳಿ, ಜಮ್ಮು ಕಾಶ್ಮೀರದಲ್ಲಿ ಸರಕಾರ ವಜಾ ದಂತಹ ಬೆಳವಣಿಗೆಗಳು ಆಗದೇ ಇರುತ್ತಿದ್ದರೆ ಬಿಜೆಪಿ 160 ಸ್ಥಾನಕ್ಕೆ ಬಂದು ನಿಲ್ಲುತ್ತಿತ್ತು ಎಂದು ಸ್ವಾಮಿ ಹೇಳಿದ್ದಾರೆ. ಈ ಬಾರಿಯೂ 50-60 ಸ್ಥಾನ ಕಳೆದ ಬಾರಿಗಿಂತ ಕಡಿಮೆ ಬಿಜೆಪಿ ಗೆ ಬರಲಿವೆ ಎಂದಿರುವ ಸ್ವಾಮಿ ಬಿಜೆಪಿ 220 - 230 ಸ್ಥಾನ ಪಡೆದರೆ ಎನ್ ಡಿ ಎ ಮೈತ್ರಿಕೂಟದ ಉಳಿದ ಪಕ್ಷಗಳ ಸ್ಥಾನ ಸೇರಿ ಒಟ್ಟು 250 ತಲುಪಬಹುದು. ಮತ್ತೆ ೩೦ ಸ್ಥಾನ ಎಲ್ಲಿಂದಾದರೂ ಹೊಂದಿಸುವುದು ಕಷ್ಟವಾಗದು. ಮಾಯಾವತಿ, ಮುಲಾಯಂ ಕೂಡ ಬಿಜೆಪಿ ಬೆಂಬಲಕ್ಕೆ ಬರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ನಿತಿನ್ ಗಡ್ಕರಿ ಮೋದಿಯಷ್ಟೇ ಸಾಮರ್ಥ್ಯ ಇರುವವರು. ಅರ್ಹತೆ ಇರುವವರು. ನನಗೆ ಆಪ್ತರು. ಅವರು ಮೋದಿಗೆ ಪರ್ಯಾಯ ಆದರೆ ಬಹಳ ಒಳ್ಳೆಯದು ಎಂದು ಮೋದಿಗೆ ಗಡ್ಕರಿ ಪರ್ಯಾಯವಾಗಬಲ್ಲರೇ ಎಂಬ  ಬಗ್ಗೆ ಕೇಳಿದ್ದಕ್ಕೆ ಸ್ವಾಮಿ ಹೇಳಿದ್ದಾರೆ. ಮೋದಿಗೆ ಮತ್ತೆ ಪ್ರಧಾನಿ ಪಟ್ಟ ಸಿಗುವುದೇ ಎಂದು ಕೇಳಿದ್ದಕ್ಕೆ ನೇರವಾಗಿ ಉತ್ತರಿಸದ ಸ್ವಾಮಿ ಅದನ್ನು ನಾನು ಹೇಗೆ ಹೇಳುವುದು ಎಂದು ಮರುಪ್ರಶ್ನಿಸಿದ್ದಾರೆ. ನೆಹರೂಗೆ 17 ವರ್ಷದ ಅಧಿಕಾರ ಸಿಕ್ಕಿತು. ಅವರಿಗೆ ಒಂದು ವರ್ಷವೂ ಅಧಿಕಾರದಲ್ಲಿರುವ ಅರ್ಹತೆ ಇರಲಿಲ್ಲ.  ಇಂದಿರಾಗೆ 16 ವರ್ಷ ಸಿಕ್ಕಿತು. ನರಸಿಂಹರಾವ್ ಗೆ ಐದು ವರ್ಷ ಮಾತ್ರ ಸಿಕ್ಕಿತು. ಹಾಗಾಗಿ ಈ ಬಗ್ಗೆ ಸರಿಯಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X