Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿಫಲ ಎಟಿಎಂ ವಹಿವಾಟಿನಿಂದ ಖಾತೆಯಿಂದ...

ವಿಫಲ ಎಟಿಎಂ ವಹಿವಾಟಿನಿಂದ ಖಾತೆಯಿಂದ ಕಡಿತಗೊಂಡ ಹಣ ಮರುಜಮಾ ಆಗಲು ವಿಳಂಬವಾದರೆ ಪರಿಹಾರ ಪಡೆಯಬಹುದು, ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ3 May 2019 7:09 PM IST
share
ವಿಫಲ ಎಟಿಎಂ ವಹಿವಾಟಿನಿಂದ ಖಾತೆಯಿಂದ ಕಡಿತಗೊಂಡ ಹಣ ಮರುಜಮಾ ಆಗಲು ವಿಳಂಬವಾದರೆ ಪರಿಹಾರ ಪಡೆಯಬಹುದು, ಗೊತ್ತೇ?

ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ಓಂಬುಡ್ಸ್‌ಮನ್ ಕಚೇರಿಗಳಿಗೆ ಬಂದಿದ್ದ ಎಲ್ಲ ಗ್ರಾಹಕ ದೂರುಗಳ ಪೈಕಿ ಸುಮಾರು 16,000 ದೂರುಗಳು ‘ಖಾತೆಯಲ್ಲಿ ಹಣ ಕಡಿತವಾಗಿದೆ,ಆದರೆ ಎಟಿಎಮ್‌ನಲ್ಲಿ ಹಣ ವಿತರಣೆಯಾಗಿಲ್ಲ ’ ಎಂಬ ವಿಷಯಕ್ಕೆ ಸಂಬಂಧಿಸಿದ್ದವು ಎಂದು ಆರ್‌ಬಿಐ ಕಳೆದ ವಾರ ಬಿಡುಗಡೆಗೊಳಿಸಿರುವ ವರದಿಯು ಬೆಟ್ಟುಮಾಡಿದೆ. ಡೆಬಿಟ್ ಕಾರ್ಡ್ ಮತ್ತು ಎಟಿಎಮ್‌ಗೆ ಸಂಬಂಧಿಸಿದ ದೂರುಗಳಲ್ಲಿ ವರ್ಷದಲ್ಲಿ ಶೇ.50ರಷ್ಟು ಏರಿಕೆಯಾಗಿದೆ ಎನ್ನುವುದನ್ನೂ ಮಾಹಿತಿಯು ತೋರಿಸಿದೆ.

ಎಟಿಎಮ್‌ನಿಂದ ನೀವು ಹಣ ಪಡೆಯಲು ಪ್ರಯತ್ನಿಸಿದಾಗ ವಹಿವಾಟು ವಿಫಲಗೊಂಡು ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಕೋರಿದ್ದ ಮೊತ್ತ ಕಡಿತವಾಗಿದ್ದರೂ ಯಂತ್ರವು ಹಣವನ್ನು ವಿತರಿಸದಿದ್ದ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ನಿಮಗೆ ಹಕ್ಕು ಇದೆ. ಆದರೆ ಹೆಚ್ಚಿನವರಿಗೆ ಇದು ಗೊತ್ತಿಲ್ಲ. ಆರ್‌ಬಿಐ ನಿಯಮದಂತೆ ಕಾರ್ಡ್ ನೀಡಿದ ಬ್ಯಾಂಕ್ ಕಡಿತಗೊಂಡ ಹಣವನ್ನು ದೂರು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ನಿಮ್ಮ ಖಾತೆಗೆ ಮರುಜಮಾ ಮಾಡದಿದ್ದರೆ ವಿಳಂಬಕ್ಕಾಗಿ ದಿನವೊಂದಕ್ಕೆ ನೂರು ರೂ.ಗಳ ಪರಿಹಾರವನ್ನು ಅದು ನೀಡಬೇಕಾಗುತ್ತದೆ.

ಎಟಿಎಮ್‌ನಲ್ಲಿ ನಿಮ್ಮ ಕಾರ್ಡ್ ವಹಿವಾಟು ವಿಫಲಗೊಂಡಿದ್ದರೆ ಮತ್ತು ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ದರೆ ಈ ಕುರಿತು ಆರ್‌ಬಿಐನ ಇತರ ನಿಯಮಗಳೂ ನಿಮಗೆ ಗೊತ್ತಿರಬೇಕಾಗುತ್ತದೆ. ಇತರ ಬ್ಯಾಂಕುಗಳ ಎಟಿಎಮ್‌ಗಳು ಮತ್ತು ವೈಟ್ ಲೇಬಲ್ ಎಟಿಎಮ್‌ಗಳಲ್ಲಿಯ ವಿಫಲ ವಹಿವಾಟುಗಳಿಗೂ ಈ ನಿಯಮಗಳು ಅನ್ವಯಿಸುತ್ತವೆ.

►ಸ್ವಂತ ಬ್ಯಾಂಕಿನ ಅಥವಾ ಇತರ ಬ್ಯಾಂಕಿನ ಅಥವಾ ವೈಟ್ ಲೇಬಲ್ ಎಟಿಎಂ,ಹೀಗೆ ಯಾವುದೇ ಯಂತ್ರದಲ್ಲಿ ವಹಿವಾಟು ವಿಫಲಗೊಂಡು ಖಾತೆಯಿಂದ ಹಣ ಕಡಿತವಾದಾಗ ಗ್ರಾಹಕರು ಸಾಧ್ಯವಾದಷ್ಟು ಶೀಘ್ರ ಕಾರ್ಡ್ ವಿತರಿಸಿರುವ ಬ್ಯಾಂಕಿಗೆ ದೂರು ಸಲ್ಲಿಸಬೇಕು.

►ಬ್ಯಾಂಕುಗಳು ಎಟಿಎಂ ಕಿಯೋಸ್ಕ್‌ಗಳಲ್ಲಿ ಸಂಬಂಧಿತ ಅಧಿಕಾರಿಗಳ ಹೆಸರುಗಳು ಮತ್ತು ಸಂಪರ್ಕ ಸಂಖ್ಯೆಗಳು/ಟೋಲ್ ಫ್ರೀ ಫೋನ್ ಸಂಖ್ಯೆಗಳು/ಹೆಲ್ಪ್ ಡೆಸ್ಕ್ ಸಂಖ್ಯೆಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ವೈಟ್ ಲೇಬಲ್ ಎಟಿಎಂ ಯಂತ್ರಗಳೂ ಗ್ರಾಹಕರು ದೂರು ಸಲ್ಲಿಸಲು ಸಾಧ್ಯವಾಗುವಂತೆ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು/ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕಾಗುತ್ತದೆ.

►ಎಟಿಎಂ ವಹಿವಾಟು ವಿಫಲಗೊಂಡಿದ್ದರೆ ಮತ್ತು ನಿಮ್ಮ ಖಾತೆಯಿಂದ ಹಣ ಕಡಿತವಾಗಿದ್ದರೆ ನಿಮಗೆ ಕಾರ್ಡ್ ನೀಡಿರುವ ಬ್ಯಾಂಕ್ ದೂರು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ನಿಮ್ಮ ದೂರನ್ನು ಇತ್ಯರ್ಥ ಗೊಳಿಸಬೇಕಾಗುತ್ತದೆ. ನಿಮ್ಮ ಖಾತೆಗೆ ಹಣ ಏಳು ದಿನಗಳ ಬಳಿಕ ಮರುಜಮಾ ಆದರೆ ವಿಳಂಬಕ್ಕಾಗಿ ಬ್ಯಾಂಕು ನಿಮಗೆ ಪ್ರತಿದಿನ ನೂರು ಪರಿಹಾರವನ್ನು ಪಾವತಿಸಬೇಕಾಗುತ್ತದೆ. ಆದರೆ ಗ್ರಾಹಕ ಇಂತಹ ವಿಫಲ ವಹಿವಾಟಿನ 30 ದಿನಗಳಲ್ಲಿ ದೂರು ಸಲ್ಲಿಸಿದರೆ ಮಾತ್ರ ಈ ಪರಿಹಾರವನ್ನು ಪಡೆಯಲು ಅರ್ಹನಾಗುತ್ತಾನೆ.

►ತನ್ನ ಬ್ಯಾಂಕ್ ನಿಗದಿತ ಗಡುವಿನೊಳಗೆ ತನ್ನ ದೂರನ್ನು ಇತ್ಯರ್ಥಗೊಳಿಸದಿದ್ದರೆ ಅಥವಾ ತನಗೆ ತೃಪ್ತಿಯಾಗುವಂತೆ ಇತ್ಯರ್ಥಗೊಳಿಸಿರದಿದ್ದರೆ ಗ್ರಾಹಕ ಬ್ಯಾಂಕಿನಿಂದ ಉತ್ತರ ಸ್ವೀಕರಿಸಿದ 30 ದಿನಗಳಲ್ಲಿ ಅಥವಾ ದೂರನ್ನು ಸಲ್ಲಿಸಿದ 30 ದಿನಗಳಲ್ಲಿ ಬ್ಯಾಂಕಿನಿಂದ ಉತ್ತರ ಸ್ವೀಕರಿಸದಿದ್ದಲ್ಲಿ ಬ್ಯಾಂಕಿಂಗ್ ಓಂಬುಡ್ಸ್‌ಮನ್‌ಗೆ ದೂರು ಸಲ್ಲಿಸಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X