Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋದಿ ಸರಕಾರದಡಿ 9,511 ಕೋ.ರೂ.ನಿಂದ 167...

ಮೋದಿ ಸರಕಾರದಡಿ 9,511 ಕೋ.ರೂ.ನಿಂದ 167 ಕೋ.ರೂ.ಗೆ ಕುಸಿದ ಒಎನ್‌ಜಿಸಿಯ ಮೀಸಲು ನಗದು !

1.5 ವರ್ಷದ ಬೆಳವಣಿಗೆಯಿದು…

ವಾರ್ತಾಭಾರತಿವಾರ್ತಾಭಾರತಿ4 May 2019 11:04 PM IST
share
ಮೋದಿ ಸರಕಾರದಡಿ 9,511 ಕೋ.ರೂ.ನಿಂದ 167 ಕೋ.ರೂ.ಗೆ ಕುಸಿದ ಒಎನ್‌ಜಿಸಿಯ ಮೀಸಲು ನಗದು !

ಹೊಸದಿಲ್ಲಿ,ಮೇ 4: ತನ್ನ ವಿತ್ತೀಯ ಕೊರತೆ ಗುರಿಯನ್ನು ತಲುಪಲು ಹೆಚ್ಚಿನ ಲಾಭಾಂಶಗಳ ಪಾವತಿ,ಶೇರುಗಳ ಮರುಖರೀದಿ ಮತ್ತು ಇತರ ಸರಕಾರಿ ಒಡೆತನದ ಸಂಸ್ಥೆಗಳ ಸ್ವಾಧೀನಕ್ಕೆ ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಮೇಲೆ ಒತ್ತಡ ಹೇರುವ ಮೋದಿ ಸರಕಾರದ ನೀತಿಯಿಂದಾಗಿ ದೇಶದ ಅತ್ಯಂತ ಬೃಹತ್ ತೈಲ ಅನ್ವೇಷಕ ಸಂಸ್ಥೆ ಮತ್ತು ಸಾರ್ವಜನಿಕ ಕ್ಷೇತ್ರದ ಅಗ್ರಣಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ದ ಆರ್ಥಿಕತೆಗೆ ತೀವ್ರ ಪೆಟ್ಟು ನೀಡಿದೆ.

ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಎಚ್‌ಪಿಸಿಎಲ್)ನ್ನು ಸ್ವಾಧೀನ ಪಡಿಸಿಕೊಂಡಿದ್ದರಿಂದಾಗಿ ಸಾಲಗಳನ್ನು ತೀರಿಸಬೇಕಿರುವ ಹಾಗೂ ಶೇರು ಮರುಖರೀದಿ ಮತ್ತು ಲಾಭಾಂಶ ಪಾವತಿ ಕುರಿತಂತೆ ಸರಕಾರದ ಆದೇಶವನ್ನು ಪಾಲಿಸಬೇಕಿರುವ ಒಎನ್‌ಜಿಸಿ ಅತ್ಯಂತ ಕಡಿಮೆ ಮೀಸಲು ನಗದಿನೊಂದಿಗೆ ಕಾರ್ಯಾಚರಿಸುತ್ತಿದೆ.

2017,ಮಾರ್ಚ್‌ನಲ್ಲಿ 9,511 ಕೋ.ರೂ.ಗಳಿದ್ದ ಒಎನ್‌ಜಿಸಿಯ ಬಳಿ 2018,ಸೆಪ್ಟೆಂಬರ್‌ನಲ್ಲಿ ಒಟ್ಟು 167 ಕೋ.ರೂ.ಗಳ ನಗದು ಮತ್ತು ಬ್ಯಾಂಕ್ ಶಿಲ್ಕು ಉಳಿದುಕೊಂಡಿವೆ.

ತನ್ನ ಸಾಲಗಳನ್ನು ತೀರಿಸಲು ಸಂಸ್ಥೆಯು ತನ್ನ ಸಂಚಿತ ನಿಧಿಯನ್ನು ಬಳಸುತ್ತಿದೆ. 2018,ಮಾರ್ಚ್‌ನಲ್ಲಿ 25,592 ಕೋ.ರೂ.ಗಳಿದ್ದ ಇದು 2018 ಸೆಪ್ಟೆಂಬರ್‌ನಲ್ಲಿ ಹೆಚ್ಚುಕಡಿಮೆ ಅರ್ಧಕ್ಕೆ,ಅಂದರೆ 13,994 ಕೋ.ರೂ.ಗಳಿಗೆ ಕುಸಿದಿದೆ.

► ಇದು ಒಎನ್‌ಜಿಸಿಗೇಕೆ ಸಮಸ್ಯೆ?

ತೈಲ ಅನ್ವೇಷಣೆ ಉದ್ಯಮದ ಅಪಾಯಕಾರಿ ಸ್ವರೂಪದಿಂದಾಗಿ ತೈಲ ಅನ್ವೇಷಕ ಕಂಪನಿಗಳು ತಮ್ಮ ದುಡಿಯುವ ಬಂಡವಾಳದ ಅಗತ್ಯವನ್ನು ಪೂರೈಸಲು ಸಾಕಷ್ಟು ನಗದು ಹಣವನ್ನು ಹೊಂದಿರಬೇಕಾಗುತ್ತದೆ. ಇದು ಸಾಮಾನ್ಯವಾಗಿ 5,000 ಕೋ.ರೂ.ಗಿಂತ ಹೆಚ್ಚಿರಬೇಕಾಗುತ್ತದೆ ಎಂದು ಒಎನ್‌ಜಿಸಿಯ ಮಾಜಿ ಅಧಿಕಾರಿಯೋರ್ವರು ಹೇಳಿದರು.

ತನ್ನ ಹೂಡಿಕೆ ಹಿಂದೆಗೆತ ಗುರಿಗಳನ್ನು ಸಾಧಿಸುವ ಸರಕಾರದ ಪ್ರಯತ್ನಗಳ ಅಂಗವಾಗಿ ಒಎನ್‌ಜಿಸಿ ಕಳೆದ ವರ್ಷ 36,915 ಕೋ.ರೂ.ಗಳಿಗೆ ಎಚ್‌ಪಿಸಿಎಲ್ ಅನ್ನು ಸ್ವಾಧೀನ ಪಡಿಸಿಕೊಂಡಿತ್ತು. ಈ ಪೈಕಿ ಒಂದು ಭಾಗವನ್ನು ಅದು ತನ್ನ ಮೀಸಲು ನಿಧಿಯಿಂದ ನೀಡಿದ್ದರೆ,ಸ್ವಾಧೀನತೆಗಾಗಿ 20,000 ಕೋ.ರೂ.ಗೂ ಹೆಚ್ಚಿನ ಸಾಲವನ್ನು ಪಡೆದಿತ್ತು. ಈಗ ಮಿಗತೆ ಹಣವನ್ನು ಸಾಲವನ್ನು ಮರುಪಾವತಿಸಲು ಒಎನ್‌ಜಿಸಿ ಬಳಸುತ್ತಿರುವುದರಿಂದ ನಗದು ಹಣ ಸಂಗ್ರಹವಾಗುತ್ತಿಲ್ಲ. ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಕಟಿಸಲಾದ ಆಯ-ವ್ಯಯ ಪತ್ರದಂತೆ ಅರ್ಧಕ್ಕೂ ಹೆಚ್ಚಿನ ಸಾಲವನ್ನು ಅದು ಮರುಪಾವತಿಸಿದೆ ಎಂದು ಸಂಸ್ಥೆಯ ನಿವೃತ್ತ ಅಧಿಕಾರಿ ತಿಳಿಸಿದರು.

ಇದರೊಂದಿಗೆ ಕಂಪನಿಯು ಲಾಭಾಂಶಗಳನ್ನೂ ಪಾವತಿಸಬೇಕಿದೆ. ಇವೆಲ್ಲವೂ ಮಿಗತೆ ಹಣಕ್ಕೆ ಕನ್ನ ಹಾಕುತ್ತಿವೆ. ತೈಲ ಅನ್ವೇಷಣೆ ಉದ್ಯಮದಲ್ಲಿ ದುಡಿಯುವ ಬಂಡವಾಳ ಅಗತ್ಯವನ್ನು ಪೂರೈಸಬೇಕಾಗುತ್ತದೆ ಮತ್ತು ಇದಕ್ಕಾಗಿ ಐದರಿಂದ ಹತ್ತು ಸಾವಿರ ಕೋ.ರೂ.ಗಳು ಅಗತ್ಯವಾಗುತ್ತವೆ. ಒಎನ್‌ಜಿಎಸ್ 2016-17ನೇ ಸಾಲಿನಲ್ಲಿ ಲಾಭಾಂಶ ವಿತರಣೆ ತೆರಿಗೆ ಸೇರಿದಂತೆ 7,764 ಕೋ.ರೂ.ಗಳ ಲಾಭಾಂಶ ವಿತರಿಸಿದ್ದರೆ,2017-18ರಲ್ಲಿ ಇದು 8,470 ಕೋ.ರೂ. ಆಗಿವೆ.

ಇದರೊಂದಿಗೆ ಡಿಸೆಂಬರ್‌ನಲ್ಲಿ 4,022 ಕೋ.ರೂ.ಗಳ ಶೇರುಗಳ ಮರುಖರೀದಿಯನ್ನೂ ಮಾಡಿದೆ.

► ಮೊಳಗುತ್ತಿರುವ ಅಪಾಯದ ಗಂಟೆ

ಸಂಸ್ಥೆಯ ಇತಿಹಾಸದಲ್ಲಿಯೇ ಎಂದೂ ನಗದು ಶಿಲ್ಕು ಇಷ್ಟೊಂದು ಅಪಾಯಕಾರಿ ಮಟ್ಟಕ್ಕೆ ಇಳಿದಿರಲಿಲ್ಲ ಎನ್ನುತ್ತಾರೆ ಒಎನ್‌ಜಿಸಿಯ ಮಾಜಿ ನಿರ್ದೇಶಕ (ಹಣಕಾಸು) ಅಲೋಕ ಕುಮಾರ ಬ್ಯಾನರ್ಜಿ ಅವರು. ಇತ್ತೀಚಿಗೆ ಎಚ್‌ಪಿಸಿಎಲ್ ಮತ್ತು ಕೆಜಿ ಬೇಸಿನ್ ಗ್ಯಾಸ್ ಬ್ಲಾಕ್‌ನಲ್ಲಿ ಗುಜರಾತ ರಾಜ್ಯ ತೈಲ ನಿಗಮದ ಪಾಲನ್ನು ಸ್ವಾಧೀನ ಪಡಿಸಿಕೊಂಡಿದ್ದು ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದರು.

ಕೃಪೆ: theprint. in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X