Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕ್ರೀಡೆಯ ಮೂಲಕ ಮಾದಕ ದ್ರವ್ಯಸೇವನೆ...

ಕ್ರೀಡೆಯ ಮೂಲಕ ಮಾದಕ ದ್ರವ್ಯಸೇವನೆ ವಿರುದ್ಧಸಮರ ಸಾರಿದ ಬಾಕ್ಸರ್ ಸರಿತಾದೇವಿ

ವಾರ್ತಾಭಾರತಿವಾರ್ತಾಭಾರತಿ6 May 2019 11:57 PM IST
share
ಕ್ರೀಡೆಯ ಮೂಲಕ ಮಾದಕ ದ್ರವ್ಯಸೇವನೆ ವಿರುದ್ಧಸಮರ ಸಾರಿದ  ಬಾಕ್ಸರ್ ಸರಿತಾದೇವಿ

ಹೊಸದಿಲ್ಲಿ, ಮೇ 6: ಭಾರತದ ಹಿರಿಯ ಬಾಕ್ಸರ್ ಸರಿತಾದೇವಿ ಬ್ಯಾಂಕಾಕ್‌ನಲ್ಲಿ ಎ.26 ರಂದು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8ನೇ ಪ್ರಶಸ್ತಿ ಜಯಿಸಿದರು. 37ರ ಹರೆಯದ ಸರಿತಾದೇವಿ 18 ವರ್ಷಗಳ ಹಿಂದೆ ಬ್ಯಾಂಕಾಕ್‌ನಲ್ಲೇ ಮೊದಲ ಅಂತರ್‌ರಾಷ್ಟ್ರೀಯ ಪದಕ ಜಯಿಸಿದ್ದರು. ಬಾಕ್ಸಿಂಗ್‌ನಲ್ಲಿ ಮಿಂಚುವ ಜೊತೆಗೆ ತನ್ನ ಹಳ್ಳಿಯ ಮಕ್ಕಳು ಮಾದಕ ದ್ರವ್ಯ ವ್ಯಸನಿಯಾಗುತ್ತಿರುವುದನ್ನು ತಪ್ಪಿಸಲು ತನ್ನ ಹೆಸರಿನಲ್ಲಿ ಬಾಕ್ಸಿಂಗ್ ಅಕಾಡಮಿಯನ್ನು ಸ್ಥಾಪಿಸಿದ್ದು, ಇದರಲ್ಲಿ ಈಗ 70 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಈ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದ ಇಬ್ಬರು ಮಕ್ಕಳು ಈ ವರ್ಷ ನಡೆದಿದ್ದ ಖೇಲೊ ಇಂಡಿಯಾದಲ್ಲಿ ಪದಕವನ್ನು ಜಯಿಸಿದ್ದಾರೆ.

 ಮಣಿಪುರ ಬಾಕ್ಸರ್ ಸರಿತಾ ಯುವತಿಯಾಗಿದ್ದಾಗ ತನ್ನ ರಾಜ್ಯದ ಬಂಡುಕೋರ ಗುಂಪಿನೊಂದಿಗೆ ಸೇರಲು ಬಯಸಿದ್ದರು. ಕೆಲವು ಸಶಸ್ತ್ರ ಬಂಡಾಯಕೋರರಿಗೆ ಶಸ್ತ್ರ ಕಳ್ಳಸಾಗಾಟಕ್ಕೂ ನೆರವು ನೀಡಿದ್ದರು. ಸರಿತಾ ವಾಸಿಸುತ್ತಿರುವ ಹಳ್ಳಿ ಇಂಪಾಲ್‌ನ ಹೊರವಲಯದ ಪರ್ವತ ಪ್ರದೇಶದಲ್ಲಿದ್ದು, ಮಾಯಾಂಗ್ ಇಂಪಾಲ ಹೆಸರಿನ ಈ ಹಳ್ಳಿ ಬಂಡುಕೋರರ ಸ್ವರ್ಗವಾಗಿತ್ತು.

 ಆಕೆಯ ಇಬ್ಬರು ಸಹಪಾಠಿಗಳು ಬಂಡುಕೋರ ಗುಂಪಿಗೆ ಸೇರಿದ್ದು, ಈಗ ಅವರು ಎಲ್ಲಿದ್ದಾರೆಂದು ಗೊತ್ತಿಲ್ಲ. ಒಂದು ಕಾಲದಲ್ಲಿ ಬಂಡುಕೋರರಿಂದ ನಲುಗಿದ್ದ ಸರಿತಾರ ಗ್ರಾಮದಲ್ಲೀಗ ಮಾದಕ ದ್ರವ್ಯ ಜಾಲ ಬೇರುಬಿಟ್ಟಿದೆ. ಬಾಕ್ಸಿಂಗ್‌ನ ಮೂಲಕ ಡ್ರಗ್ಸ್ ವಿರುದ್ದ ಸಮರ ಸಾರಲು ನಿರ್ಧರಿಸಿದ ಸರಿತಾ 2012ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದಾಗ ಸಾಕಷ್ಟು ವರ್ಷಗಳ ಕಾಲ ತನ್ನ ಹಳ್ಳಿಯಲ್ಲಿ ಕಾಲ ಕಳೆದರು.

‘‘ನನ್ನ ಹಳ್ಳಿಯ 7-8 ತರಗತಿಯ ಮಕ್ಕಳು ಡ್ರಗ್ಸ್ ಸೇವಿಸುತ್ತಿದ್ದನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಆಗ ನಾನು ಗರ್ಭಿಣಿಯಾಗಿದ್ದೆ. ಮಕ್ಕಳ ಹೆತ್ತವರ ಬಳಿ ಹೋಗಿ ನಿಮ್ಮ ಮಕ್ಕಳನ್ನು ನನ್ನ ಮನೆಗೆ ಕಳುಹಿಸಿಕೊಡಿ. ನಾನು ಅವರಿಗೆ ಬಾಕ್ಸಿಂಗ್ ಕಲಿಸಿಕೊಡುವೆ ಎಂದು ಹೇಳಿದ್ದೆೆ. ನಿಧಾನವಾಗಿ ಹೆಚ್ಚಿನ ಮಕ್ಕಳು ಬರಲಾರಂಭಿಸಿದರು. ಆಗ ನಾವು ಕಮ್ಯುನಿಟಿ ಹಾಲ್‌ಗೆ ತರಬೇತಿ ಜಾಗ ಬದಲಾಯಿಸಿದೆವು’’ ಎಂದು ಸರಿತಾ ಹೇಳಿದ್ದಾರೆ. ‘ಸರಿತಾ ರೀಜನಲ್ ಬಾಕ್ಸಿಂಗ್ ಅಕಾಡಮಿ’ ಸುಸಜ್ಜಿತ ತರಬೇತಿ ಕೇಂದ್ರವಾಗಿದ್ದು, ಇದರಲ್ಲಿ 70 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. 2016ರಿಂದ ಕಾಲೇಜಿನ ಒಳಾಂಗಣದ ಹಾಲ್‌ನಲ್ಲಿ ಇದನ್ನು ನಡೆಸಲಾಗುತ್ತಿದೆ. ಕೇಂದ್ರದಲ್ಲಿ ಎರಡು ಬಾಕ್ಸಿಂಗ್ ರಿಂಗ್‌ಗಳಿವೆ.

ಅಕಾಡಮಿಯಲ್ಲಿ ಪಳಗಿರುವ ಅಂಬೆಶೊರಿ ದೇವಿ ಹಾಗೂ ಥೋಂಗಮ್ ಕುಂಜರಾಣಿ ದೇವಿ ಕ್ರಮವಾಗಿ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದ್ದರು. ಇಬ್ಬರು ಖೇಲೊ ಇಂಡಿಯಾ ಯೋಜನೆಗೆ ಸೇರ್ಪಡೆಯಾಗಿದ್ದು, ತಿಂಗಳಿಗೆ 10,000 ರೂ.ಸ್ಟೈಪೆಂಡ್ ಪಡೆಯುತ್ತಿದ್ದಾರೆ. ಭಾರತದ ಪ್ರಮುಖ ಬಾಕ್ಸಿಂಗ್ ಕೇಂದ್ರವಾಗಿರುವ ಪುಣೆಯ ಕ್ರೀಡಾ ಆರ್ಮಿ ಸಂಸ್ಥೆ ಸರಿತಾ ಅಕಾಡಮಿಯಿಂದ ನಾಲ್ವರನ್ನು ಸೇರಿಸಿಕೊಂಡಿದೆ.

 ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಅಕಾಡಮಿಗೆ ಭೇಟಿ ನೀಡಿದ ಬಳಿಕ 40 ತರಬೇತುದಾರರಿಗೆ ಭಾಗಶಃ ವೇತನ ನೀಡಲು ನಿರ್ಧರಿಸಿದ್ದಾರೆ. ಎನ್‌ಜಿಒವೊಂದು ಮೂವರು ಕೋಚ್‌ಗಳು ಹಾಗೂ ಓರ್ವ ಫಿಸಿಯೋಗೆ ಸಂಬಳ ನೀಡುತ್ತಿದೆ. ‘‘ಕೆಲವು ಹುಡುಗರು ಹಾಗೂ ಹುಡುಗಿಯರು ತೀರಾ ಬಡ ಕುಟುಂಬದಿಂದ ಬಂದಿದ್ದು, ಅವರಲ್ಲಿ ಶಾಲೆಗೆ ಹೋಗಲು ಹಣವಿಲ್ಲ. 2 ತಿಂಗಳ ಬಳಿಕ ಬುಧವಾರ ಹಳ್ಳಿಗೆ ವಾಪಸಾದಾಗ ನನಗೆ ಆಘಾತಕಾರಿ ಕಾದಿತ್ತು. ಓರ್ವ ಬಾಲಕ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದ. ಆ ಕುರಿತು ವಿಚಾರಿಸಿದಾಗ ಆತ ಮತ್ತೆ ಡ್ರಗ್ಸ್ ಸೇವಿಸುತ್ತಿರುವ ವಿಚಾರ ತಿಳಿಯಿತು. ಪ್ರತಿಭಾವಂತ ಬಾಲಕನಾಗಿರುವ ಆತನನ್ನು ಮತ್ತೆ ಅಕಾಡಮಿಗೆ ಕರೆ ತರಲು ಪ್ರಯತ್ನಿಸುತ್ತೇನೆ’’ ಎಂದು ಸರಿತಾ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X