Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಿಚಾರಣೆಗೆ ಮುನ್ನ ಪೊಲೀಸರು ನನ್ನ...

ವಿಚಾರಣೆಗೆ ಮುನ್ನ ಪೊಲೀಸರು ನನ್ನ ಬಟ್ಟೆಗಳನ್ನು ಕಳಚಿ ತಪಾಸಣೆ ನಡೆಸಿದರು

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದ ದಲಿತ ಮಹಿಳೆಯ ಅಳಲು

ವಾರ್ತಾಭಾರತಿವಾರ್ತಾಭಾರತಿ9 May 2019 8:16 PM IST
share
ವಿಚಾರಣೆಗೆ ಮುನ್ನ ಪೊಲೀಸರು ನನ್ನ ಬಟ್ಟೆಗಳನ್ನು ಕಳಚಿ ತಪಾಸಣೆ ನಡೆಸಿದರು

ಹೊಸದಿಲ್ಲಿ,ಮೇ 9: ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿ ಸಿಜೆಐ ವಿರುದ್ಧ ಸಲ್ಲಿಸಿದ್ದ ಲೈಂಗಿಕ ಕಿರುಕುಳ ದೂರುಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಆಂತರಿಕ ಸಮಿತಿಯು ತೀರ್ಪು ನೀಡಿದ ಮರುದಿನ,ಮೇ 7ರಂದು ತನಿಖಾ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರುವ ದಿ ಕಾರವಾನ್,ದಿ ವೈರ್ ಮತ್ತು ಸ್ಕ್ರೋಲ್ ಡಾಟ್ ಇನ್ವರದಿಗಾರರ ತಂಡವೊಂದು ಮಹಿಳೆಯನ್ನು ಭೇಟಿಯಾಗಿ ಜಂಟಿ ಸಂದರ್ಶನವನ್ನು ನಡೆಸಿದೆ. ಸಂದರ್ಶನದಲ್ಲಿ ಈ ಹತಾಶ ಮಹಿಳೆ ಹೇಳಿಕೊಂಡಿರುವುದು ಇಲ್ಲಿದೆ.....

ಒಂದೂವರೆ ಗಂಟೆ ಕಾಲ ನಡೆದ ಸಂದರ್ಶನದಲ್ಲಿ ಸಮಿತಿಯು ತನ್ನ ಪ್ರಕರಣದ ವಿಚಾರಣೆಯನ್ನು ಹೇಗೆ ನಡೆಸಿತ್ತು ಎನ್ನುವುದನ್ನು ಮಹಿಳೆ ವಿವರಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ತಾನು ತೆರಳಿದ್ದಾಗ ಒಳಗೆ ಬಿಡುವ ಮುನ್ನ ಮಹಿಳಾ ಪೊಲೀಸರು ತಾನು ಭಯೋತ್ಪಾದಕಿಯೇನೋ ಎಂಬಂತೆ ತನ್ನ ಬಟ್ಟೆಗಳನ್ನು ಕಳಚಿ ತಪಾಸಣೆ ನಡೆಸಿದ್ದನ್ನು ಮತ್ತು ಆ ಸಂದರ್ಭ ತಾನು ಅನುಭವಿಸಿದ್ದ ಅವಮಾನವನ್ನು ಅವರು ಹೇಳಿಕೊಂಡಿದ್ದಾರೆ.

ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿರುವ ತನ್ನ ಬಂಧುಗಳ ಮನೆಗಳಿಗೆ ಅಪರಿಚಿತ ವ್ಯಕ್ತಿಗಳು ಭೇಟಿ ನೀಡಿ ಬೆದರಿಕೆಗಳನ್ನು ಒಡ್ಡಿದ ಬಗ್ಗೆಯೂ ಅವರು ಮಾತನಾಡಿದ್ದಾರೆ. ತಾನು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯಾಗಿದ್ದೇನೆ ಎನ್ನುವುದು ತನ್ನ ಈ ಅವಹೇಳನದ ಹಿಂದಿನ ಕಾರಣವಾಗಿರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಿಳೆ ಸಂದರ್ಶನ ನೀಡಿದಾಗ ಆಕೆಯ ಮಾತುಗಳಲ್ಲಿ ಕ್ರೋಧಕ್ಕಿಂತ ಹೆಚ್ಚು ನೋವಿತ್ತು. ಮಧ್ಯೆ ಮಧ್ಯೆ ಆಕೆ ಕಣ್ಣೀರಾಗುತ್ತಿದ್ದರು ಮತ್ತು ಮಾತುಗಳು ಗಂಟಲಿನಲ್ಲಿಯೇ ಉಳಿದುಕೊಳ್ಳುತ್ತಿದ್ದವು. ‘ಆರ್ಥಿಕವಾಗಿ,ಮಾನಸಿಕವಾಗಿ ಹೀಗೆ ಎಲ್ಲವನ್ನೂ ನಾನು ಕಳೆದುಕೊಂಡಿದ್ದೇನೆ,ಅದಕ್ಕಾಗಿಯೇ ಹೋರಾಡುತ್ತಿದ್ದೇನೆ’ ಎನ್ನುವುದು ಆಕೆಯ ಅಂತಿಮ ನುಡಿಯಾಗಿತ್ತು.

ತಾನು ಯಾವುದೇ ಷಡ್ಯಂತ್ರದ ಭಾಗವಾಗಿಲ್ಲ,ಅಫಿಡವಿಟ್‌ನಲ್ಲಿ ತಾನೇನನ್ನು ಹೇಳಿದ್ದೆನೋ ಅದಕ್ಕೆಲ್ಲ ತಾನು ಸಾಕ್ಷಗಳನ್ನು ಒದಗಿಸಿದ್ದೆ. ತನ್ನ ದೂರುಗಳಿಗೆ ಸಂಬಂಧಿಸಿದಂತೆ ಮೊದಲ ಬಾರಿ ಸರ್ವೋಚ್ಚ ನ್ಯಾಯಾಲಯದ ವಿಶೇಷ ಪೀಠವು ಸಮಾವೇಶಗೊಂಡಿದ್ದಾಗ ಅದರ ನೇತೃತ್ವ ವಹಿಸಿದ್ದ ಮು.ನ್ಯಾ.ಗೊಗೊಯಿ ಅವರು ತಾನು ಕ್ರಿಮಿನಲ್ ಹಿನ್ನೆಲೆಯವಳು ಎಂದು ಹೇಳುವ ಮೂಲಕ ತನ್ನ ಚಾರಿತ್ರ್ಯವನ್ನು ಟೀಕಿಸಿದ್ದರು. ತನ್ನ ವಿರುದ್ಧದ ಪ್ರಕರಣ 2016ರಲ್ಲಿಯೇ ಇತ್ಯರ್ಥಗೊಂಡಿದ್ದರೂ ತನ್ನ ಚಾರಿತ್ರವನ್ನು ಪ್ರಶ್ನಿಸಲು ಅದನ್ನೇ ಅವರು ಆಧಾರವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆ ಪ್ರಕರಣಗಳಲ್ಲಿ ಹುರುಳಿರಲಿಲ್ಲ ಎನ್ನುವುದು ಸ್ಪಷ್ಟವಾದಾಗ ತಾನು ಅನಿಲ್ ಅಂಬಾನಿ ಜೊತೆ ಯಾವುದಾದರೂ ರೀತಿಯ ಸಂಬಂಧವನ್ನು ಹೊಂದಿರಬಹುದು ಎಂಬಂತಹ ಪ್ರಚೋದಿತ ಆರೋಪಗಳನ್ನೂ ತನ್ನ ವಿರುದ್ಧ ಮಾಡಲಾಯಿತು. ಇವೆಲ್ಲ ವಿಷಯಗಳು ಎಲ್ಲಿಂದ ಬಂದವು ಎನ್ನುವುದು ತನಗೆ ಗೊತ್ತಿಲ್ಲ. ತಾನು ಅಫಿಡವಿಟ್ ಸಲ್ಲಿಸಿದಾಗ ಇಂತಹ ಕಥೆಗಳು ಹುಟ್ಟಿಕೊಳ್ಳುತ್ತವೆ ಎನ್ನುವ ಕಲ್ಪನೆ ತನಗಿರಲಿಲ್ಲ ಎಂದು ಮಹಿಳೆ ಸಂದರ್ಶನದಲ್ಲಿ ತಿಳಿಸಿದರು.

   ತಾನು ಅಫಿಡವಿಟ್ ಸಲ್ಲಿಸಿದಾಗ ತನಗೆ ನ್ಯಾಯ ದೊರೆಯುತ್ತದೆ ಎಂಬ ಭರವಸೆ ತನಗಿತ್ತು. ಅದನ್ನು ಓದಿದ ಯಾರಿಗೇ ಆದರೂ ತಾನು ಮತ್ತು ತನ್ನ ಕುಟುಂಬ ಅನುಭವಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಇಂದು ಏನಾಗಿದೆ ಎನ್ನುವುದು ನಿಮಗೇ ಗೊತ್ತಿದೆ. ತಾನು ಸಾಕಷ್ಟು ಸಾಕ್ಷಗಳನ್ನು ಒದಗಿಸಿದ್ದರೂ ತನ್ನ ಅಫಿಡವಿಟ್‌ನಲ್ಲಿ ಯಾವುದೇ ಹುರುಳಿಲ್ಲ ಎಂದು ವಿಚಾರಣಾ ಸಮಿತಿ ಹೇಳುತ್ತಿದೆ ಎಂದರು.

ಮೂರು ದಿನಗಳ ಕಾಲ ಸಮಿತಿಯ ವಿಚಾರಣೆಗೆ ತಾನು ಹಾಜರಾಗಿದ್ದೆ. ಆದರೆ ಅಲ್ಲಿ ಭೀತಿ ಹುಟ್ಟಿಸುವ ವಾತಾವರಣವಿತ್ತು. ತನಗೆ ಬಲಗಿವಿ ಕೇಳಿಸುವುದಿಲ್ಲ,ಎಡಗಿವಿಯೂ ಆಗಾಗ್ಗೆ ಕೈಕೊಡುತ್ತದೆ. ನ್ಯಾಯಾಧೀಶರು ಏನು ಕೇಳುತ್ತಿದ್ದಾರೆ ಎನ್ನುವುದೂ ತನಗೆ ಮೊದಲ ಬಾರಿಗೆ ಗೊತ್ತಾಗುತ್ತಿರಲಿಲ್ಲ,ಪುನರುಚ್ಚರಿಸುವಂತೆ ತಾನು ಅವರನ್ನು ಕೋರಿಕೊಳ್ಳಬೇಕಿತ್ತು. ಹೀಗಾಗಿ ತನ್ನ ಬೆಂಬಲಕ್ಕೆ ವ್ಯಕ್ತಿಯೋರ್ವನನ್ನು ಕರೆತರಲು ಅಥವಾ ತನ್ನ ಪರವಾಗಿ ವಕೀಲರ ಉಪಸ್ಥಿತಿಗೆ ಅನುಮತಿ ಕೋರಿದ್ದೆ. ಆದರ ಅವರು ಅದನ್ನು ತಿರಸ್ಕರಿಸಿದ್ದರು. ಹೀಗಾಗಿ ಇನ್ನು ಮುಂದೆ ವಿಚಾರಣೆಗೆ ಹಾಜರಾಗದಿರಲು ನಿರ್ಧರಿಸಿದ್ದೆ ಎಂದು ಮಹಿಳೆ ತಿಳಿಸಿದರು.

ವಿಚಾರಣಾ ಸಮಿತಿಯಿಂದ ತನಗೆ ನ್ಯಾಯ ದೊರೆಯುವುದಿಲ್ಲ ಎಂದು ಮೊದಲ ದಿನವೇ ತನಗೆ ಗೊತ್ತಾಗಿತ್ತು. ಅದು ಅನೌಪಚಾರಿಕ ಮಾತುಕತೆಯಂತೆ ನಡೆದಿತ್ತು. ಲೈಂಗಿಕ ಕಿರುಕುಳ ದೂರುಗಳ ವಿಚಾರಣೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನೂ ಪಾಲಿಸಲಾಗಿರಲಿಲ್ಲ. ಕಾಟಾಚಾರಕ್ಕೆ ತನಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದರು.

ಟಿಳಕ್ ಮಾರ್ಗ ಠಾಣೆಯ ಪೊಲೀಸರು ತನ್ನನ್ನು ಮು.ನ್ಯಾ.ಗೊಗೊಯಿ ಅವರ ನಿವಾಸಕ್ಕೆ ಕರೆದೊಯ್ದಿದ್ದು,ಅಲ್ಲಿ ಅವರ ಪತ್ನಿ ತನ್ನ ಕಾಲಿಗೆ ಬಿದ್ದು ಮೂಗು ತಿಕ್ಕುವಂತೆ ಆದೇಶಿಸಿದ್ದು,ಅಪರಿಚಿತ ವ್ಯಕ್ತಿಗಳು ತನ್ನನ್ನು ಮತ್ತು ತನ್ನ ಪತಿಯನ್ನು ಬೈಕುಗಳಲ್ಲಿ ಹಿಂಬಾಲಿಸುತ್ತಿದ್ದುದು ಇತ್ಯಾದಿಗಳೆಲ್ಲವನ್ನೂ ಮಹಿಳೆ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದಾರೆ.

 ಇಂದು ತಾನು ಯಾರನ್ನೂ ನಂಬಲಾರದ ಸ್ಥಿತಿಯಲ್ಲಿದ್ದೇನೆ. ತಾನು ಹೇಳಿದ್ದೆಲ್ಲ ಸತ್ಯವಾಗಿದ್ದರೂ ಎಲ್ಲವೂ ತನ್ನ ವಿರುದ್ಧವಾಗಿಯೇ ನಡೆಯುತ್ತಿದೆ. ಜನವರಿ,2019ರಲ್ಲಿ ತನ್ನನ್ನು ಅಕ್ರಮವಾಗಿ ಉದ್ಯೋಗದಿಂದ ವಜಾಗೊಳಿಸಿದ್ದನ್ನು ಪ್ರಮುಖವಾಗಿ ಪ್ರಸ್ತಾಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರಗಳನ್ನು ಬರೆದಿದ್ದೆ. ಸಂಬಂಧಿಸಿದ ಇತರ ಹಲವರಿಗೂ ಪತ್ರಗಳನ್ನು ಬರೆದಿದ್ದೆ. ಆದರೆ ಯಾರೂ ಈವರೆಗೆ ಕ್ರಮಗಳನ್ನು ತೆಗೆದುಕೊಂಡಿಲ್ಲ,ತನ್ನ ಪತ್ರಗಳಿಗೆ ಉತ್ತರಿಸಿಯೂ ಇಲ್ಲ ಎಂದು ಮಹಿಳೆ ವಿಷಾದ ವ್ಯಕ್ತಪಡಿಸಿದರು.

 ತಾನೀಗ ತನ್ನ ವಜಾದ ವಿರುದ್ಧ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸುತ್ತೇನೆ. ತಮ್ಮ ಅಂತಿಮ ವರದಿಯ ಪ್ರತಿಯನ್ನು ತನಗೆ ನೀಡುವಂತೆ ಕೋರಿ ವಿಚಾರಣಾ ಸಮಿತಿಯ ಸದಸ್ಯರಿಗೆ ಪತ್ರ ಬರೆದಿದ್ದೇನೆ. ಮುಂದೆ ತಾನು ಏನನ್ನು ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ತನ್ನ ಆರೋಪಗಳಲ್ಲಿ ಯಾವುದೇ ಹುರುಳು ಇಲ್ಲ ಎಂದು ಅವರು ಈಗಾಗಲೇ ಹೇಳಿಬಿಟ್ಟಿದ್ದಾರೆ. ತಾನು ಅವರಿಗೆ ಎಲ್ಲ ಸಾಕ್ಷಗಳನ್ನು ಒದಗಿಸಿದ್ದರೂ ಅವರ ಈ ನಿರ್ಧಾರಕ್ಕೆ ಕಾರಣವೇನು ಎನ್ನುವುದು ತನಗೆ ಗೊತ್ತಾಗಬೇಕು ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X